ಹಿರಿಯ ವಿದ್ವಾಂಸ, ಸಂವಿಧಾನ ತಜ್ಞ, ಸುಪ್ರೀಂ ಕೋರ್ಟ್ನ ಮಾಜಿ ವಕೀಲ ಹಾಗೂ ರಾಜಕೀಯ ವಿಶ್ಲೇಷಕ ಅಬ್ದುಲ್ ಗಫೂರ್ ಮಜೀದ್ ನೂರಾನಿ (ಎ ಜಿ ನೂರಾನಿ) ಇಂದು(ಆ.29) ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಮುಂಬೈನಲ್ಲಿ 1930ರಲ್ಲಿ ಜನಿಸಿದ ನೂರಾನಿ ಅವರು, ಹಿಂದೂಸ್ತಾನ್ ಟೈಮ್ಸ್, ದಿ ಹಿಂದೂ, ಡಾನ್, ದಿ ಸ್ಟೇಟ್ಸ್ಮನ್, ಫ್ರಂಟ್ಲೈನ್, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಮತ್ತು ದೈನಿಕ್ ಭಾಸ್ಕರ್ ಸೇರಿದಂತೆ ವಿವಿಧ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದಿದ್ದಾರೆ. 1960ರ ದಶಕದ ಆರಂಭದಲ್ಲಿ ಬರೆಯಲು ಪ್ರಾರಂಭಿಸಿದ್ದ ನೂರಾನಿ, ಸಾವಿರಾರು ಲೇಖನಗಳನ್ನು ಪ್ರಕಟಿಸಿದ್ದಾರೆ.
ದಿ ಕಾಶ್ಮೀರ್ ಕ್ವೆಶ್ಚನ್, ಬದ್ರುದ್ದೀನ್ ತೈಯ್ಯಿಬ್ಜಿ, ಮಿನಿಸ್ಟರ್ ಮಿಸ್ ಕಂಡಕ್ಟ್, ಬ್ರೆಝ್ನೇವ್ಸ್ ಪ್ಲ್ಯಾನ್ ಫಾರ್ ಏಷ್ಯನ್ ಸೆಕ್ಯೂರಿಟಿ, ದಿ ಪ್ರೆಸಿಡೆನ್ಸಿಯಲ್ ಸಿಸ್ಟಮ್, ದಿ ಟ್ರಯಲ್ ಆಫ್ ಭಗತ್ ಸಿಂಗ್, ಕಾನ್ಸಿಟ್ಯೂಶನಲ್ ಕ್ವೆಶ್ಚನ್ಸ್ ಇನ್ ಇಂಡಿಯಾ, ದಿ ಆರ್ಎಸ್ಎಸ್ ಅಂಡ್ ಬಿಜೆಪಿ: ಎ ಡಿವಿಶನ್ ಆಫ್ ಲೇಬರ್ ಮತ್ತು ದಿ ಆರ್ಎಸ್ಎಸ್ : ಮೆನಶ್ ಟು ಇಂಡಿಯಾ ಸೇರಿದಂತೆ ಹಲವಾರು ಪುಸ್ತಕಗಳನ್ನು ಎಜಿ ನೂರಾನಿ ಬರೆದಿದ್ದಾರೆ. ಬದ್ರುದ್ದೀನ್ ತೈಯ್ಯಬ್ಜಿ ಮತ್ತು ಡಾ. ಝಾಕಿರ್ ಹುಸೇನ್ ಅವರ ಜೀವನಚರಿತ್ರೆಯನ್ನೂ ನೂರಾನಿ ರಚಿಸಿದ್ದಾರೆ.
ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟ್ನಲ್ಲಿ ವಕೀಲರಾಗಿದ್ದ ನೂರಾನಿ, ಕಾಶ್ಮೀರದ ಶೇಖ್ ಅಬ್ದುಲ್ಲಾ ಅವರ ದೀರ್ಘಾವಧಿಯ ಬಂಧನದ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪ್ರಮುಖ ರಾಜಕೀಯ ಪ್ರತಿಸ್ಪರ್ಧಿಯಾಗಿದ್ದ ಜೆ.ಜಯಲಲಿತಾ ವಿರುದ್ಧ ಅವರು ಬಾಂಬೆ ಹೈಕೋರ್ಟ್ನಲ್ಲಿ ವಾದಿಸಿದ್ದರು.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಎಜೆ ನೂರಾನಿ, ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಪ್ರಜಾಪ್ರಭುತ್ವ, ಸಾಂವಿಧಾನಿಕ ಮೌಲ್ಯಗಳು ಮತ್ತು ಮಾನವ ಹಕ್ಕುಗಳ ದೊಡ್ಡ ಪ್ರತಿಪಾದಕರಾಗಿದ್ದರು. ಕಾನೂನು ವಿಷಯದಲ್ಲಿ ಅಗಾದ ಜ್ಞಾನವನ್ನು ಹೊಂದಿದ್ದರು.
ಇದನ್ನು ಓದಿದ್ದೀರಾ? ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ | ಸಿಬಿಐ, ಯತ್ನಾಳ್ ಅರ್ಜಿ ವಜಾ; ಡಿಕೆಶಿಗೆ ರಿಲೀಫ್
ನೂರಾನಿಯವರ Savarkar And Hindutva: The Godse Connection ಪುಸ್ತಕ ಹಾಗೂ The RSS: A Menace to India, the kashmir dispute (1947-2012),ಇವರ ಪ್ರಮುಖ ಕೃತಿಗಳು. ರಾಜಕೀಯ ಮತ್ತು ಕಾನೂನು ಕುರಿತು ಕರಾರುವಾಕ್ಕಾಗಿ ಗ್ರಹಿಸಿ ಪರಿಣಾಮಕಾರಿಯಾಗಿ ಮಂಡಿಸುತ್ತಿದ್ದ ನೂರಾನಿ, ಎಲ್ಲ ತಲೆಮಾರಿಗೂ ಮಾದರಿ ಚಿಂತಕರಾಗಿದ್ದರು.

RSS ಅ ಮೆನೇಸ್ ಟು ಇಂಡಿಯ ಅಂತ ಅವರು ಬರೆದಿದ್ದನ್ನ ಇವತ್ತು RSS ಅ ಮಾನಸ್ಟರ್ ಆಫ್ ಇಂಡಿಯಾ ಅಂತ ಬದಲಾಯಿಸಿಕೊಂಡು ಓದಬೇಕಾಗಿದೆ