ಕಾರ್ಮಿಕನಿಗೆ 232 ಕೋಟಿ ರೂ. ತೆರಿಗೆ ನೋಟಿಸ್!

Date:

Advertisements

ಕಸೂತಿ ಕಾರ್ಮಿಕರೊಬ್ಬರ ದಾಖಲೆಗಳನ್ನು ಬಳಸಿಕೊಂಡು ವಂಚಕರು ನಕಲಿ ರಫ್ತು ಘಟಕವನ್ನು ಸ್ಥಾಪಿಸಿಕೊಂಡಿದ್ದಾರೆ. ರಫ್ತು ಘಟಕದ ಹೆಸರಿನಲ್ಲಿ ಕಾರ್ಮಿಕನಿಗೆ 232 ಕೋಟಿ ರೂ.ಗಳ ವಹಿವಾಟಿಗೆ ತೆರಿಗೆ ನೋಟಿಸ್ ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಬರೇಲಿಯ ಕಾರ್ಮಿಕ ಫೂಲ್ ಮಿಯಾನ್ ಎಂಬಾತನಿಗೆ ತೆರಿಗೆ ನೋಟಿಸ್ ಬಂದಿದೆ. ಆತನಿಗೆ ವಂಚಕರು ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಆತನ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಆ ದಾಖಲೆಗಳನ್ನು ಬಳಿಕೊಂಡು ದೆಹಲಿಯಲ್ಲಿ ನಕಲಿ ರಫ್ತು ಘಟಕವನ್ನು ಸ್ಥಾಪಿಸಿದ್ದಾರೆ. ಜೊತೆಗೆ, 232 ಕೋಟಿ ರೂಪಾಯಿ ಮೌಲ್ಯದ ವಹಿವಾಟನ್ನೂ ನಡೆಸಿದ್ದಾರೆ. ಆ ವಹಿವಾಟಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಕಾರ್ಮಿಕ ಮಿಯಾನ್‌ಗೆ ನೋಟಿಸ್‌ ಕಳಿಸಿದೆ. ನಂತರ, ಪ್ರಕರಣ ಬೆಳಕಿಗೆ ಬಂದಿದೆ.

ನೋಟಿಸ್ ಬಂದ ಹಿನ್ನೆಲೆ ಕಾರ್ಮಿಕ ಫೂಲ್ ಮಿಯಾನ್‌, ತಮಗೆ ವಂಚಕರು ವಂಚಿಸಿದ್ದಾರೆ. ತನ್ನ ಹೆಸರಿನಲ್ಲಿ ರಫ್ತು ಘಟಕ ತೆರೆದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

Advertisements
ಕಾರ್ಮಿಕ

ದೂರು ದಾಖಲಿಸಿರುವ ವಿಯಾನ್, “ತಾನು ಕಸೂತಿ ಕೆಲಸ ಮಾಡುತ್ತಿದ್ದೇನೆ. ನನಗೆ ಒಳ್ಳೆಯ ಸಂಬಳ ಬರುವ ಕೆಲಸ ಕೊಡಿಸುವುದಾಗಿ ಗುಡ್ಡು ಸುಂದರ್ ಅಲಿಯಾಸ್ ಉವೈಸ್, ಸುಹೈಲ್ ಮತ್ತು ಆಸಿಫ್ ಖಾನ್ ಎಂಬವರು ಭರವಸೆ ನೀಡಿದ್ದರು. ನನ್ನ ಆಧಾರ್ ಕಾರ್ಡ್, ಪಾನ್‌ ಕಾರ್ಡ್, ಫೋಟೊ ಮತ್ತು ಇತರ ದಾಖಲೆಗಳನ್ನು ಪಡೆದುಕೊಂಡಿದ್ದರು. ಆದರೆ, ಕೊರೊನಾ ಸಮಯದಲ್ಲಿ ಲಾಕ್‌ಡೌನ್‌ ಆದ ಕಾರಣ ವಿಳಂಬವಾಗುತ್ತಿದೆ ಎಂಬ ನೆಪವೊಡ್ಡಿ ಉದ್ಯೋಗ ಕೊಡಿಸಿರಲಿಲ್ಲ. ಇದೀಗ, ರಫ್ತು ಘಟಕದ ಹೆಸರಿನಲ್ಲಿ ನೋಟಿಸ್‌ ಬಂದಿದೆ. ವಂಚಕರು ನನ್ನ ದಾಖಲೆಗಳನ್ನು ಬಳಿಸಿಕೊಂಡು ನಕಲಿ ರಫ್ತು ಘಟಕ ತೆರೆದಿದ್ದಾರೆ” ಎಂದು ವಿವರಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X