ಕೇವಲ ಒಂದು ಚಾಕೊಲೇಟ್‌ ಕದ್ದಿದ್ದಕ್ಕೆ ಐದು ಮಕ್ಕಳಿಗೆ ಚಪ್ಪಲಿ ಹಾರ ಹಾಕಿ ಬೆತ್ತಲೆ ಮೆರವಣಿಗೆ

Date:

Advertisements

ಕೇವಲ ಒಂದು ಚಾಕೊಲೇಟ್‌ ಕದ್ದಿದ್ದಕ್ಕೆ ಐದು ಮಕ್ಕಳ ಬಟ್ಟೆ ಬಿಚ್ಚಿಸಿ, ಒಂದೇ ಹಗ್ಗದಿಂದ ಎಲ್ಲರನ್ನೂ ಬಿಗಿದು ಮಾರುಕಟ್ಟೆಯಲ್ಲಿ ತುಂಬಿದ ಜನಸಂದಣಿಯ ನಡುವೆ ಬೆತ್ತಲೆ ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ಬಿಹಾರದ ಸಮಷ್ಟಿಪುರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಅಂಗಡಿಯೊಂದರಿಂದ ಚಾಕೊಲೇಟ್ ಕದ್ದ ಆರೋಪದಲ್ಲಿ ಎಲ್ಲ ಮಕ್ಕಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ಸೀತಾಮರಿಯ ಮಲ್ಲಾಹಿ ಎಂಬ ಗ್ರಾಮದ ಅಂಗಡಿ ಮಾಲೀಕ ಕ್ಯಾಮೆರಾ ಮುಂದೆ ಮಕ್ಕಳು ತಮ್ಮ ಹಾಗೂ ತಮ್ಮ ತಂದೆಯಂದಿರ ಹೆಸರು ಹೇಳುವಂತೆ ಬಲವಂತಪಡಿಸಿದ್ದಾನೆ. ಬಾಲಕರ ಪೈಕಿ ಒಬ್ಬನಿಗೆ ಹಲ್ಲೆ ಮಾಡಿ ಕ್ಯಾಮೆರಾ ನೋಡು ಎಂದು ದೌರ್ಜನ್ಯ ಮೆರೆದಿರವುದು ದೃಢಪಟ್ಟಿದೆ.

ಮಕ್ಕಳತ್ತ ಗುರಿ ಮಾಡಿ ಕೈಯಲ್ಲಿ ಬಡಿಗೆ ಹಿಡಿದಿರುವ ಅಂಗಡಿ ಮಾಲೀಕ, “ಎಲ್ಲ ಮಕ್ಕಳನ್ನು ನನ್ನ ಅಂಗಡಿಯಿಂದ ಕಳವು ಮಾಡಿದಾಗ ಹಿಡಿಯಲಾಗಿದೆ” ಎಂದು ಹೇಳಿದ್ದಾನೆ. ಅವಮಾನದಿಂದ ಮಕ್ಕಳು ಮುಖಮುಚ್ಚಿಕೊಂಡಿದ್ದರೆ, ಅವರ ಸುತ್ತಲೂ ಗ್ರಾಮಸ್ಥರು ಅಣಕವಾಡುತ್ತಿದ್ದರು.

Advertisements

ಇದನ್ನು ಓದಿದ್ದೀರಾ? ಮಾರ್ಚ್ 1, 2027 ರಿಂದ ಕೇಂದ್ರದಿಂದ ಜಾತಿ, ಜನ ಗಣತಿ; ಕೆಲ ರಾಜ್ಯಗಳಲ್ಲಿ ಮುಂದಿನ ವರ್ಷದಿಂದ ಪ್ರಾರಂಭ

“ನಾನು ಒಂದೇ ಒಂದು ಸ್ನಿಕ್ಕರ್ ಚಾಕೊಲೇಟ್ ಎತ್ತಿಕೊಂಡಿದ್ದೆ” ಎಂದು ಒಬ್ಬ ಬಾಲಕ ಹೇಳಿದ್ದಾನೆ. ಜನನಿಬಿಡ ಮಾರುಕಟ್ಟೆಯಲ್ಲಿ ಮಕ್ಕಳನ್ನು ಬೆತ್ತಲು ಮೆರವಣಿಗೆ ಮಾಡಿದರೂ, ಈ ಹಿಂಸೆ ತಡೆಯಲು ಯಾರೂ ಮಧ್ಯಪ್ರವೇಶಿಸುವ ಬದಲು ಘಟನೆಯನ್ನು ಚಿತ್ರೀಕರಿಸಿಕೊಳ್ಳುವುದರಲ್ಲಿ ನಿರತರಾಗಿದ್ದರು. ವಿಡಿಯೊ ವೈರಲ್ ಆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಂಗಡಿ ಮಾಲೀಕ ಹಾಗೂ ಇತರ ಇಬ್ಬರನ್ನು ಈ ಸಂಬಂಧ ಬಂಧಿಸಲಾಗಿದೆ. ಈ ಘಟನೆಯ ವಿಡಿಯೊ ಚಿತ್ರೀಕರಣ ಮಾಡಿ ಪ್ರಸಾರ ಮಾಡಿದ ಮಾಧ್ಯಮದವರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಸೀತಾಮರಿ ಪೊಲೀಸರು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X