ಮೃತ ತಾಯಿಯ ಕೈಯಲ್ಲಿದ್ದ ಬೆಳ್ಳಿ ಬಳೆ ಹಾಗೂ ಇತರ ಆಭರಣಗಳಿಗಾಗಿ ವ್ಯಕ್ತಿಯೊಬ್ಬ ದಾಂಧಲೆ ನಡೆಸಿ, ತಾಯಿಯ ಚಿತೆ ಮೇಲೆ ಮಲಗಿ, ಅಂತ್ಯಕ್ರಿಯೆಗೆ ಅಡ್ಡಿಪಡಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಜೈಪುರ ಗ್ರಾಮೀಣ ಪ್ರದೇಶದ ವಿರಾಟ್ ನಗರ ಗ್ರಾಮದಲ್ಲಿ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿರಾಟ್ ನಗರದ ನಿವಾಸಿ ಚೀತರ್ ರೇಗರ್(80) ಎಂಬ ಮಹಿಳೆ ಸಾವನ್ನಪ್ಪಿದ್ದರು. ಅವರ ಅಂತ್ಯಕ್ರಿಯೆಗಾಗಿ ಸ್ಥಳೀಯ ಸ್ಮಾಶಾನಕ್ಕೆ ಕೊಂಡೊಯ್ದಿದ್ದರು. ಅಂತ್ಯಕ್ರಿಯೆಗೆ ಎಲ್ಲ ಸಿದ್ದತೆಗಳು ನಡೆದಿದ್ದ ಸಮಯದಲ್ಲಿ, ಗ್ರಾಮದ ಹಿರಿಯರು ಮೃತ ಮಹಿಳೆಯ ಬೆಳ್ಳಿ ಬಳೆಗಳು ಮತ್ತು ಇತರ ಆಭರಣಗಳನ್ನು ಆಕೆಯನ್ನು ಸಲುಹಿದ್ದ ಹಿರಿಯ ಮಗ ಗಿರ್ಧಾರಿ ಲಾಲ್ಗೆ ನೀಡಿದ್ದಾರೆ. ಆದರೆ, ತನಗೂ ಆಭರಣಗಳನ್ನು ನೀಡಬೇಕೆಂದು ಹಠಕ್ಕೆ ಬಿದ್ದಿದ್ದು, ಚಿತೆ ಮೇಲೆಯೇ ಮಲಗಿ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ್ದಾನೆ.
ಗ್ರಾಮಸ್ಥರು ಮನವೊಲಿಸಲು ಯತ್ನಿಸಿದರೂ, ಆತ ಆಭರಣಗಳನ್ನು ತನಗೂ ಹಂಚಿಕೆ ಮಾಡದಿದ್ದರೆ, ಚಿತೆಯ ಮೇಲೆ ಮಲಗಿ ಜೀವಂತವಾಗಿ ಸುಟ್ಟುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಗ್ರಾಮಸ್ಥರು ಆತನನ್ನು ಬಲವಂತವಾಗಿ ಕೆಳಗಿಳಿಸಿ, ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
May God not give such children to anyone.
— Mr.K§ (@KS_1407) May 15, 2025
Even the mother's bier is mocked at during the cremation. Such a situation is only due to wealth.why pic.twitter.com/KoshWZoxDZ
ಆತ ಉರಿಯುತ್ತಿದ್ದ ಚಿತೆಯ ಪಕ್ಕದಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾನೆ. ಬಳಿಕ, ಆತನಿಗೂ ಕೆಲವು ಆಭರಣಗಳನ್ನು ಕೊಟ್ಟಿದ್ದು, ಆತ ಮೌನವಾಗಿ ತೆರಳಿದ್ದಾನೆ.