‘ಹೈಕೋರ್ಟಿನ ಕದ ಬಡಿಯಿರಿ’- ಸಂಭಲ್ ಮಸೀದಿ ಮಂಡಳಿಗೆ ಸುಪ್ರೀಮ್ ನಿರ್ದೇಶನ

Date:

Advertisements

ಅಲಹಾಬಾದ್ ಹೈಕೋರ್ಟ್ ಮೊರೆ ಹೋಗುವಂತೆ ಉತ್ತರಪ್ರದೇಶದ ಸಂಭಲ್ ಶಾಹಿ ಜಾಮಾ ಮಸೀದಿ ನಿರ್ವಹಣೆ ಮಂಡಳಿಗೆ ಶುಕ್ರವಾರ ಸೂಚನೆ ನೀಡಿದೆ ಸುಪ್ರೀಮ್ ಕೋರ್ಟು.

ಹೈಕೋರ್ಟು ಈ ಸಂಬಂಧ ವಿಚಾರಣೆ ನಡೆಸಿ ಸೂಕ್ತ ಆದೇಶ ನೀಡುವ ತನಕ ತನ್ನ ವಿಚಾರಣೆಯನ್ನು ತಡೆಹಿಡಿಯುವಂತೆ ಸುಪ್ರೀಮ್ ಕೋರ್ಟು ಸಿವಿಲ್ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. ಈ ನಡುವೆ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡುವಂತೆ ಜಿಲ್ಲಾ ಆಡಳಿತಕ್ಕೆ ತಾಕೀತು ಮಾಡಿದೆ.

ಈ ನಡುವೆ ಮಸೀದಿಯ ಸರ್ವೆ ವರದಿ ಸಲ್ಲಿಕೆಯಾದರೆ ಅದನ್ನು ತೆರೆಯದೆ ಮೊಹರು ಮಾಡಿದ ಲಕೋಟೆಯಲ್ಲಿ ಮುಚ್ಚಿ ಇರಿಸುವಂತೆಯೂ ಆದೇಶ ನೀಡಿದೆ.

Advertisements

ಇತ್ತೀಚೆಗೆ ಕೆಳ ಹಂತದ ನ್ಯಾಯಾಲಯದ ಆದೇಶದ ಮೇರೆಗೆ ಪುರಾತತ್ವ ಇಲಾಖೆಯು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಠಾತ್ತನೆ ಶಾಹಿ ಮಸೀದಿಯ ಸರ್ವೆಗೆ ಮುಂದಾಗಿತ್ತು. ಪರಿಣಾಮವಾಗಿ ಜರುಗಿದ ಕಲ್ಲುತೂರಾಟ ಹಿಂಸಾಚಾರದಲ್ಲಿ ಪೊಲೀಸರ ಗುಂಡಿಗೆ ನಾಲ್ವರು ಬಲಿಯಾಗಿದ್ದರು.

ಹಿಂದೂ ದೇವಾಲಯವನ್ನು ಕೆಡವಿ ಆ ಜಾಗದಲ್ಲಿ ಶಾಹಿ ಮಸೀದಿಯನ್ನು ಕಟ್ಟಲಾಗಿದ್ದು ಸರ್ವೆಗೆ ಆದೇಶ ನೀಡಬೇಕೆಂಬ ಅರ್ಜಿಯನ್ನು ಅಲಹಾಬಾದ್ ಸಿವಿಲ್ ನ್ಯಾಯಾಧೀಶರು ಪುರಸ್ಕರಿಸಿದ್ದರು. ಸರ್ವೆ ಆದೇಶವನ್ನು ಪ್ರಶ್ನಿಸಿ ಶಾಹಿ ಮಸೀದಿ ನಿರ್ವಹಣೆ ಮಂಡಳಿ ಸುಪ್ರೀಮ್ ಕೋರ್ಟ್ ಕದ ಬಡಿದಿತ್ತು.

ಮಂಡಳಿಯ ಅಹವಾಲು ಶುಕ್ರವಾರ ಮುಖ್ಯನ್ಯಾಯಮೂರ್ತಿ ಸಂಜೀವ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯಕುಮಾರ್ ಅವರ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತೀಯ ಜನತಾ ಪಕ್ಷಕ್ಕೆ ನೀತಿಯೂ ಇಲ್ಲ, ರೀತಿಯೂ ಇಲ್ಲ

‘ಶ್ರೀ ಹರಿಹರ ಮಂದಿರ’ವನ್ನು ಕೆಡವಿ ಅದೇ ಜಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದ್ದು ಸರ್ವೆ ಮಾಡಿಸುವಂತೆ ಎಂಟು ಮಂದಿ ಅರ್ಜಿದಾರರು ಇದೇ ತಿಂಗಳ 19ರಂದು ಅಲಹಾಬಾದ್ ಸಿವಿಲ್ ನ್ಯಾಯಾಲಯವನ್ನು ಕೋರಿದ್ದರು. ನ್ಯಾಯಾಲಯ ತಕ್ಷಣ ಸರ್ವೆ ಆದೇಶವನ್ನು ನೀಡಿತ್ತು. ಶಾಹಿ ಮಸೀದಿ ನಿರ್ವಹಣೆ ಮಂಡಳಿಗೆ ನೋಟಿಸನ್ನೂ ನೀಡಿ ಪ್ರತಿಕ್ರಿಯೆಯನ್ನೂ ಅಹ್ವಾನಿಸಿರಲಿಲ್ಲ.

ಏಕಪಕ್ಷೀಯವಾಗಿ ನೀಡಲಾದ ಈ ಆದೇಶವನ್ನು ಅದೇ ದಿನ ಮಧ್ಯಾಹ್ನ ಜಾರಿಗೊಳಿಸಲು ಜಿಲ್ಲಾಡಳಿತ ಮುಂದಾಗಿತ್ತು. ಸಂಜೆ ಆರರಿಂದ ಸರ್ವೆ ಆರಂಭಿಸಿ ರಾತ್ರಿ 8.30ರ ತನಕ ನಡೆಸಿತು. ಇದೇ ತಿಂಗಳ 24ರ ನಸುಕಿನಲ್ಲಿ ಎರಡನೆಯ ಸರ್ವೆಗೆಂದು ಬಂದು ಪ್ರಾರ್ಥನೆಗೆಂದು ಬಂದಿದ್ದವರನ್ನು ಹೊರಕ್ಕೆ ಕಳಿಸಲಾಯಿತು ಎಂದು ಶಾಹಿ ಮಸೀದಿ ಮಂಡಳಿ ಸುಪ್ರೀಮ್ ಕೋರ್ಟಿಗೆ ಸಲ್ಲಿಸಿದ್ದ ಅಹವಾಲಿನಲ್ಲಿ ತಿಳಿಸಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಏನೇ ಬಡುಕೋಂಡರೂ ಬಿಜೆಪಿ ಈ ವಿಶಯಗಳನ್ನು ಬೆಳಸತಾನೇಯಿರತ್ತೇ, ಯಾವುದೇ ನ್ಯಾಯಾಲಯವೂ ಸ್ವತಂತಾರವಾಗಿರಲ್ಲಾ, ಸಾಬರನ್ನ ಉಣ್ಣದಿದ್ದರೇ ಬಿಜೇಪಿಗೆಲ್ಲಲ್ಲಾ, ದೇಶ ಎಕ್ಕುಟ್ಟೋಗತ್ತೇ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

‘ನನ್ನ ಜೀವಕ್ಕೆ ಅಪಾಯವಾದರೆ ಸರ್ಕಾರವೇ ಹೊಣೆ’ ಎಂದು ಹೇಳಿ ಠಾಣೆಗೆ ತೆರಳಿದ ಮಹೇಶ್ ಶೆಟ್ಟಿ ತಿಮರೋಡಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಅವರ ತೇಜೋವಧೆ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X