ಕರಡಿಯದ್ದೇ ದರ್ಬಾರು! 3%ರಷ್ಟು ಕುಸಿತ ಕಂಡ ಷೇರು ಮಾರುಕಟ್ಟೆ

Date:

Advertisements

ಕಳೆದ ಎರಡು ದಿನಗಳಲ್ಲಿ ಗೂಳಿ ಹಾಗೂ ಕರಡಿಯಾಟದಲ್ಲಿ ಕರಡಿಯಾಟವೇ ಜೋರಾಗಿದೆ. ನಿಫ್ಟಿ ಮತ್ತು ಸೆನ್ಸೆಕ್ಸ್ ಸರಾಸರಿ 4% ಕುಸಿತದಿಂದ ಮುಕ್ತಾಯಗೊಂಡಿರುವ ಷೇರು ಮಾರುಕಟ್ಟೆಯು ಇನ್ನೂ ಮೂರ್ನಾಲ್ಕು ದಿನಗಳ ತನಕ ಇದೇ ವಾತಾವರಣ ಇರಲಿದೆ ಎಂದು ಷೇರು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇಂದು ಸೆನ್ಸೆಕ್ಸ್ ಶೇ.2.74ರಷ್ಟು ಕುಸಿದು 78,759ಕ್ಕೆ ಮತ್ತು ನಿಫ್ಟಿ ಶೇ.2.68ರಷ್ಟು ಕುಸಿದು 24,055ಕ್ಕೆ ತಲುಪಿದೆ. ಒಟ್ಟು ಮಾರುಕಟ್ಟೆಯಲ್ಲಿ 3,084 ಕಂಪನಿಗಳ ಷೇರುಗಳು ಕುಸಿತ ಕಂಡಿವೆ. ಅಮೆರಿಕ ಮಾರುಕಟ್ಟೆಯ ಕುಸಿತದ ಕಾರಣಕ್ಕೆ ಏಷ್ಯನ್ ಮಾರುಕಟ್ಟೆಗಳೂ ಗಣನೀಯ ಹಿನ್ನಡೆ ಕಂಡಿವೆ. ಜಪಾನ್ ಮಾರುಕಟ್ಟೆಯ ನಿಕ್ಕಿ ಸೂಚ್ಯಂಕವು 1987 ರ ಬಳಿಕ ಅತಿ ದೊಡ್ಡ ಕುಸಿತಕ್ಕೆ ಸಾಕ್ಷಯಾಗಿದೆ.

ಭಾರತೀಯ ಮಾರುಕಟ್ಟೆಯ ನಿಫ್ಟಿ-50ರಲ್ಲಿ HUL-0.87%, Nestle-0.63%, HDFC Life-0.49% ಹಾಗೂ Tataconsumer product-0.48% ಮಾತ್ರ ಆಮೆಯ ಜಿಗಿತ ಕಂಡರೆ, ಉಳಿದಂತೆ TATA Motors-7.31%, ONGC-6.01%, Adani Ports-5.93%, TATA Steel- 5.31% ಹಾಗು Hindalco, Power Grid corp, SBI, Maruti Suzuki ಸೇರಿದಂತೆ ಇನ್ನುಳಿದ ಎಲ್ಲವೂ 4% ಕುಸಿತದೊಂದಿಗೆ 24,055.60 ಅಂಕಕ್ಕೆ ಮುಕ್ತಾಯ ಕಂಡಿದೆ.

ಸೆನ್ಸೆಕ್ಸ್ ನ ಮೊದಲ 30 ಕಂಪನಿಗಳಲ್ಲಿ 2ಕಂಪನಿಗಳು ಮಾತ್ರ ಸಕಾರಾತ್ಮಕ ಮುನ್ನಡೆ ಕಂಡರೆ, ಉಳಿದ 28 ಕಂಪನಿಗಳು ನಕಾರಾತ್ಮಕ ಹಿನ್ನಡೆಯಿಂದ ಕುಸಿದು, ಸುಮಾರು 2,222.55 ಅಂಕಗಳ ನಷ್ಟದಲ್ಲಿ 2.74% ನಷ್ಟದಲ್ಲಿ ಮುಕ್ತಾಯ ಕಂಡಿದೆ. ಇಸ್ರೇಲ್ ಮತ್ತು ಹಮಾಸ್ ಯುದ್ಧಗಳ ಕಾರಣದಿಂದ ಹಾಗೂ ಅಮೆರಿಕದಲ್ಲಿ ತಲೆದೂರಿರುವ ನಿರುದ್ಯೋಗದ ಪ್ರಭಾವ ಮತ್ತು ಜಪಾನ್ ದೇಶ ತೆಗೆದುಕೊಂಡಿರುವ ಕೆಲವು ಆರ್ಥಿಕ ತೀರ್ಮಾನಗಳ ಕಾರಣಕ್ಕೆ ಷೇರು ಮಾರುಕಟ್ಟೆಯ ಕುಸಿತ ಹೀಗೆ ಮುಂದುವರೆಯುತ್ತದೆ ಎನ್ನುವುದು ಷೇರು ತಜ್ಞರ ಅಭಿಪ್ರಾಯವಾಗಿದೆ.

WhatsApp Image 2024 07 10 at 12.02.28 9cc67b36 e1720593263863
ರಜಿನಿಕಾಂತ್ ಚಟ್ಟೇನಹಳ್ಳಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ದೆಹಲಿಯ 50ಕ್ಕೂ ಹೆಚ್ಚು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ

ದೆಹಲಿಯ 50ಕ್ಕೂ ಅಧಿಕ ಶಾಲೆಗಳಿಗೆ ಬುಧವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ...

ಮುಂಬೈ | ಭಾರೀ ಮಳೆಗೆ ಹಳಿಯಲ್ಲೇ ಸಿಲುಕಿದ ಎರಡು ಮೊನೋ ರೈಲು: 782 ಪ್ರಯಾಣಿಕರ ರಕ್ಷಣೆ

ಮುಂಬೈನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಎಲ್ಲೆಡೆ ನೀರು ತುಂಬಿದೆ, ಸಂಚಾರ ಅಸ್ತವ್ಯಸ್ತವಾಗಿದೆ....

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

Download Eedina App Android / iOS

X