“ಭಾರತದಲ್ಲಿ ವಾಸಿಸಲು ಬಯಸುವ ಎಲ್ಲರೂ ಹಿಂದೂ ದೇವರಾದ ರಾಮ ಮತ್ತು ಕೃಷ್ಣನಿಗೆ ಜೈ ಎನ್ನಬೇಕು” ಎಂದು ಹೇಳುವ ಮೂಲಕ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಅಶೋಕನಗರ ಜಿಲ್ಲೆಯ ಚಂಡೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಧ್ಯಪ್ರದೇಶ ಸಿಎಂ, “ತಮ್ಮ ಧರ್ಮವನ್ನು ಅನುಸರಿಸುವ ಅವಕಾಶವು ಎಲ್ಲ ಧರ್ಮದವರಿಗೂ ಇದೆ. ಆದರೆ ಅವರು ದೇಶಭಕ್ತರಾಗಿರಬೇಕು” ಎಂದು ಹೇಳಿದರು.
“ಭಾರತವು ಹಿಂದೂ ಮುಸ್ಲಿ ಎಂದು ಪ್ರತ್ಯೇಕ ಮಾಡಲ್ಲ. ಆದರೆ ಜನರು ದೇವರು, ಸೃಷ್ಟಿ, ಬ್ರಹ್ಮಾಂಡವನ್ನು ತಿಳಿಯುವುದು ಮುಖ್ಯ. ರಹೀಮ್ ಹಾಗೂ ರಾಸ್ ಖಾನ್ (ಹಿಂದೂ ದೇವರ ಗುಣಗಾನ ಮಾಡಿದ್ದ ಮಧ್ಯಕಾಲೀನ ಭಾರತದ ಕವಿ ಹಾಗೂ ಸಂತರು) ಇದೇ ನೆಲದಲ್ಲಿ ಜನಿಸಿದವರು” ಎಂದೂ ಈ ವೇಳೆ ಹೇಳಿದರು.
ಇದನ್ನು ಓದಿದ್ದೀರಾ? ಪ್ರಿಯಾಂಕಾ ಗಾಂಧಿ ನಕಲಿ ‘ಉಪನಾಮ’ ಬಳಸಿಕೊಳ್ಳುತ್ತಿದ್ದಾರೆ: ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್
“ಇಲ್ಲಿಯ ಅನ್ನ ತಿಂದು ಬೇರೆಡೆ ನಂಬಿಕೆ ಹೊಂದಿರುವುದು ಸರಿಯಲ್ಲ. ನೀವು ಭಾರತದಲ್ಲಿ ಜೀವಿಸಬೇಕೆಂದು ಬಯಸಿದರೆ, ನೀವು ರಾಮ- ಕೃಷ್ಣರಿಗೆ ಜೈ ಎಂದು ಹೇಳಲೇಬೇಕು. ಬೇರೆ ಏನೂ ಇಲ್ಲ. ನಾವು ದೇಶದಲ್ಲಿ ಎಲ್ಲರಿಗೂ ಗೌರವ ನೀಡುತ್ತೇವೆ, ಅವಮಾನ ಮಾಡುವುದಿಲ್ಲ” ಎಂದರು.
'If you want to live in India, you have to say Jai Ram and Krishna'
— Dhruv Rathee (Parody) (@dhruvrahtee) August 26, 2024
This is the language of MP CM Mohan Yadav 👇
pic.twitter.com/zYIFWBLoHn

ನಾವು ವೀರಶೈವ ಲಿಂಗಾಯತರು. ನಮ್ರ್ಮ ಧರ್ಮದ ಆಣತಿಯಂತೆ ಶಿವ ಮತ್ತು ಲಿಂಗಕ್ಕೆ ಮಾತ್ರ ಎರಗಬೇಕು.ವೈಶ್ಣವ ಧರ್ಮವನ್ನ ಒಪ್ಪಲೇಬಾರದು.
ಹಾಗಾದರೆ ನಾವೆಲ್ಲ ದೇಶದ್ರೋಹಿಗಳಂತ ಆಯಿತು ಅಲ್ಲವೆ?