ಅಂಬೇಡ್ಕರ್‌ ಚಿತ್ರದ ಅರ್ಧ ಭಾಗಕ್ಕೆ ಅಖಿಲೇಶ್ ಯಾದವ್ ಫೋಟೋ; ವ್ಯಾಪಕ ಆಕ್ರೋಶ

Date:

Advertisements

ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಎಡಿಟ್‌ ಮಾಡಿ, ಅಂಬೇಡ್ಕರ್ ಚಿತ್ರದ ಅರ್ಧ ಭಾಗಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಚಿತ್ರವನ್ನು ಸೇರಿಸಿ, ಫೋಟೋ ಫ್ರೇಮ್‌ ಮಾಡಲಾಗಿದೆ. ಈ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಅರ್ಧ ಅಂಬೇಡ್ಕರ್ ಚಿತ್ರ, ಇನ್ನರ್ಧ ಅಖಿಲೇಶ್ ಚಿತ್ರವಿರುವ ಫೋಟೋವೊಂದು ಬುಧವಾರ ಬೆಳಿಗ್ಗೆಯಿಂದ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ವೈರಲ್ ಆಗಿರುವ ಚಿತ್ರದಲ್ಲಿ ಡಾ. ಅಂಬೇಡ್ಕರ್ ಮತ್ತು ಅಖಿಲೇಶ್ ಅವರ ತಲೆ ಮತ್ತು ಭುಜಗಳ ಅರ್ಧ ಕಟೌಟ್‌ಗಳನ್ನು ಪರಸ್ಪರ ಹತ್ತಿರದಲ್ಲಿ ಅಂಟಿಸಲಾಗಿದೆ. ಇಬ್ಬರ ಚಿತ್ರವನ್ನು ಬಿಳಿ ರೇಖೆಯೊಂದು ವಿಭಜಿಸಿದೆ.

ಅಂಬೇಡ್ಕರ್ ಮತ್ತು ಅಖಿಲೇಶ್ ಇರುವ ಚಿತ್ರವನ್ನು ಸಮಾಜವಾದಿ ಪಕ್ಷದ ಕಾರ್ಯಕ್ರಮಕ್ಕೆ ಜನರನ್ನು ಸ್ವಾಗತಿಸುವ ಸಂದೇಶದ ಪೋಸ್ಟರ್‌ಗಾಗಿ ಎಡಿಡ್ ಮಾಡಲಾಗಿದೆ ಎಂದು ಹೇಳಲಾಗಿದೆ.

Advertisements

ಎಡಿಟ್ ಮಾಡಿರುವ ಚಿತ್ರವನ್ನು ಬಿಜೆಪಿ ಟೀಕಿಸಿದೆ. ‘ಭಾರತದ ಸಂವಿಧಾನದ ಶಿಲ್ಪಿಗೆ ಇದಕ್ಕಿಂತ ದೊಡ್ಡ ಅವಮಾನ ಇನ್ನೊಂದಿಲ್ಲ’ ಎಂದು ಹೇಳಿದೆ.

ಕೇಂದ್ರ ಕಾನೂನು ಸಚಿವ, ಬಿಜೆಪಿ ನಾಯಕ ಅರ್ಜುನ್ ರಾಮ್ ಮೇಘವಾಲ್, ಬಿಜೆಪಿ ಸಾಮಾಜಿಕ ಮಾಧ್ಯಮದ ಉಸ್ತುವಾರಿ ಅಮಿತ್ ಮಾಳವೀಯ, “ಅಖಿಲೇಶ್‌ ಯಾದವ್ ಅವರು ಸಂವಿಧಾನವನ್ನು ರಚಿಸಿದ ಪ್ರಸಿದ್ಧ ವಕೀಲ, ದಲಿತ ನಾಯಕ ಡಾ. ಅಂಬೇಡ್ಕರ್ ಅವರನ್ನು ಅಗೌರವಿಸಿದ್ದಾರೆ. ಬಿಜೆಪಿ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳು ಅಂಬೇಡ್ಕರರ ಪರಂಪರೆಯ ಕುರಿತು ಆಗ್ಗಾಗ್ಗೆ ಜಗಳವಾಡುತ್ತವೆ” ಎಂದು ಹೇಳಿದ್ದಾರೆ.

“1952ರ ಚುನಾವಣೆಯಲ್ಲಿ ಬಾಬಾಸಾಹೇಬರನ್ನು ಸೋಲಿಸುವಲ್ಲಿ ಪಾತ್ರ ವಹಿಸಿದ್ದ ಪಕ್ಷದೊಂದಿಗೆ (ಕಾಂಗ್ರೆಸ್‌) ಸಮಾಜವಾದಿ ಪಕ್ಷ ಕೆಲಸ ಮಾಡುತ್ತಿದೆ. ಸಮಾಜವಾದಿ ಪಕ್ಷದ ಸಂಸ್ಥಾಪಕರು (ಮುಲಾಯಂ ಸಿಂಗ್) ಮತ್ತು ಅಂಬೇಡ್ಕರ್ ಸ್ವಜನಪಕ್ಷಪಾತವನ್ನು ವಿರೋಧಿಸುತ್ತಿದ್ದರು. ಆದರೆ, ಅಖಿಲೇಶ್ ಅವರ ಸಿದ್ಧಾಂತಗಳು ಅಂಬೇಡ್ಕರರ ಆಶಯಗಳಿಗೆ ಹೊಂದಿಕೆಯಾಗುವುದಿಲ್ಲ” ಎಂದು ಅರ್ಜುನ್ ಮೇಘವಾಲ್ ಹೇಳಿದ್ದಾರೆ.

“ಅಖಿಲೇಶ್ ಮತ್ತು ಅವರ ಪಕ್ಷವು ಅಂಬೇಡ್ಕರ್ ಪರಂಪರೆಗೆ ತಕ್ಕಂತೆ ಬದುಕಲು ಸಾಧ್ಯವಿಲ್ಲ. ಅಂಬೇಡ್ಕರರ ಮುಖವನ್ನು ವಿರೂಪಗೊಳಿಸಿ ಅಖಿಲೇಶ್ ಯಾದವ್ ಅವರ ಮುಖವನ್ನು ಅದರ ಮೇಲೆ ಹೇರುವುದಕ್ಕಿಂತ ದೊಡ್ಡ ಅವಮಾನ ಇನ್ನೊಂದಿಲ್ಲ. ಅಖಿಲೇಶ್ ಯಾದವ್ ಎಷ್ಟೇ ಬಾರಿ ಪುನರ್ಜನ್ಮ ಪಡೆದರೂ ಅಂಬೇಡ್ಕರರಂತೆ ಶ್ರೇಷ್ಠತೆಯನ್ನು ಪಡೆಯಲು ಸಾಧ್ಯವಿಲ್ಲ” ಎಂದು ಅಮಿತ್ ಮಾಳವೀಯ ಹೇಳಿದ್ದಾರೆ.

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಕೂಡ ಈ ಪೋಸ್ಟರ್‌ಅನ್ನು ಟೀಕಿಸಿದ್ದಾರೆ. “ಎಸ್‌ಪಿಯ ಭ್ರಷ್ಟ ಮನಸ್ಥಿತಿಯ ಪ್ರತಿಬಿಂಬ ಮತ್ತು ಬಾಬಾಸಾಹೇಬ್ ಅವರನ್ನು ಅವಮಾನಿಸುವ ಉದ್ದೇಶಪೂರ್ವಕ ಪ್ರಯತ್ನಿವಿದು” ಎಂದಿದ್ದಾರೆ.

ಈ ಪೋಸ್ಟರ್ ವಿವಾದದ ಬಗ್ಗೆ ಅಖಿಲೇಶ್ ಯಾದವ್ ಆಗಲೀ,

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X