ಬಜೆಟ್‌ನಲ್ಲಿ ಬೆಂಗಳೂರಿಗೆ ಬಂದ ಹಣವೆಷ್ಟು ಎಂದು ಪ್ರಶ್ನಿಸಿದ ಬಿಜೆಪಿ ಶಾಸಕ ಸುರೇಶ್ ಕುಮಾರ್: ನೆಟ್ಟಿಗರಿಂದ ಕ್ಲಾಸ್

Date:

Advertisements

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಭಾಷಣ ಮುಗಿಯುವುದಕ್ಕೂ ಮೊದಲೇ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರ ಬಿಜೆಪಿ ಶಾಸಕ ಸುರೇಶ್ ಕುಮಾರ್, ಬೆಂಗಳೂರಿನಿಂದ ಸಂಗ್ರಹವಾಗಿರುವ ಆದಾಯವೆಷ್ಟು? ಬಜೆಟ್‌ನಲ್ಲಿ ಬೆಂಗಳೂರಿಗೆ ಕೊಟ್ಟಿರುವ ಕುಡಿಕೆ ಹಣ ಎಷ್ಟು?” ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ, ‘ನಮ್ಮ ಹಣ, ನಮ್ಮ ಹಕ್ಕು’ ಎಂಬ ಹ್ಯಾಷ್‌ಟ್ಯಾಗ್‌ ಅನ್ನು ಕೂಡ ಬಳಸಿದ್ದಾರೆ. ಇದರಿಂದ ಕೆರಳಿರುವ ನೆಟ್ಟಿಗರು, ಬಿಜೆಪಿಯ ಶಾಸಕರ ಪೋಸ್ಟ್‌ಗೆ ಕಮೆಂಟ್ ಹಾಕುವ ಮೂಲಕ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

“ಇದೆ ಪ್ರಶ್ನೆಯನ್ನು ನಿಮ್ಮ ಸರ್ಕಾರವಿತ್ತಲ್ಲವೇ? ಆವಾಗ ಕೇಳಬೇಕಿತ್ತು” ಎಂದು ನೆಟ್ಟಿಗರೊಬ್ಬರು ತಿಳಿಸಿದರೆ, “ಕರ್ನಾಟಕದಿಂದ ತೆರಿಗೆ ಹಣ ಎಷ್ಟು? ಕರ್ನಾಟಕಕ್ಕೆ ಕೇಂದ್ರ ಕೊಟ್ಟ ಕುಡಿಕೆ ಹಣ ಎಷ್ಟು ಅಂತಲೂ ಯೋಚಿಸಬೇಕು” ಎಂದು ಜ್ಞಾನ್ ಕಲ್ಲಹಳ್ಳಿ ಎಂಬವರು ತಿಳಿಸಿದ್ದಾರೆ.

Advertisements

ಸುರೇಶ್ ಕುಮಾರ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಪತ್ರಕರ್ತ ಎನ್‌.ಎ. ಮೊಹಮ್ಮದ್‌ ಇಸ್ಮಾಯಿಲ್, “ಸಜ್ಜನರಾದ ಎಸ್‌ ಸುರೇಶ್ ಕುಮಾರ್ ಅವರಿಗಿರೋ ಜಾಣ ಕುರುಡು ಮತ್ತು ಕಿವುಡಿನ ಬಗ್ಗೆ ಮತ್ತೆ ಮತ್ತೆ ಬರೆಯುವುದರ ಅಗತ್ಯ ಇಲ್ಲ. ಆದರೂ ಒಂದು ಪ್ರಶ್ನೆ. ಬೆಂಗಳೂರು ಮಹಾನಗರ ಪಾಲಿಕೆ ಸಂಗ್ರಹಿಸುತ್ತಿರುವ ತೆರಿಗೆಯನ್ನು ಕರ್ನಾಟಕ ಸರ್ಕಾರ ಕಿತ್ತುಕೊಂಡಿದೆಯಾ? ಆದರೆ ಒಕ್ಕೂಟ ಸರ್ಕಾರ (ಕೇಂದ್ರ ಸರ್ಕಾರ) ಕರ್ನಾಟಕದ ಪಾಲಿನ ತೆರಿಗೆಯನ್ನು ಕಿತ್ತುಕೊಂಡಿದೆ. ಅಲ್ಲಿ ಆಡಳಿತ ನಡೆಸುತ್ತಿರುವ ನಿಮ್ಮ ಪಕ್ಷವನ್ನು ಸಮರ್ಥಿಸಿಕೊಳ್ಳಬೇಕಾಗಿರೋ ಅನಿವಾರ್ಯತೆ ನಿಮಗಿದೆ ಅಂತ ಒಪ್ಪಿಕೊಳ್ಳಿ ಅಷ್ಟೇ. ಆಗ ತಮ್ಮ ಪ್ರಾಮಾಣಿಕತೆಯನ್ನಾದರೂ ಸಂಭ್ರಮಿಸಬಹುದು. ಈ ಪೋಸ್ಟ್ ಕಂಡ ತಕ್ಷಣ “ಕಾಂಗ್ರೆಸ್ಸಿನವರೂ ಹೀಗೆ ಮಾಡಿದ್ದರು” ಅನ್ನೋ ವರಾತ ತೆಗೆಯೋ ಗೆಳೆಯರೂ ಇದ್ದಾರೆ. ಅವರಿಗೆ ನನ್ನ ಉತ್ತರ ಇಷ್ಟೇ. ಕಾಂಗ್ರೆಸಿನವರು ತಿನ್ನಬಾರದ್ದನ್ನು ತಿಂದದ್ದನ್ನು ನೀವು ಅಥವಾ ನೀವು ಬೆಂಬಲಿಸುವವರು ತಿನ್ನುವುದಕ್ಕೆ ಸಮರ್ಥನೆಯಾಗುವುದೇ?” ಎಂದು ಕೇಳಿದ್ದಾರೆ.

ismail

“ಮಾನ್ಯ ಸುರೇಶ್ ಕುಮಾರ್ ಅವರೇ, ಮೊದಲು ರಾಜ್ಯಕ್ಕೆ ಕೇಂದ್ರದಿಂದ ಬರಬೇಕಿರುವ ಹಣವನ್ನು ಕೇಳಲು ನೀವು ಮತ್ತು ನಿಮ್ಮ ಬಿಜೆಪಿಯ ನಾಯಕರು ಬಾಯ್ಬಿಟ್ಟು ಮಾತನಾಡಿ. ಬಳಿಕ ಎಲ್ಲವಕ್ಕೂ ಸಾಧ್ಯವಾದಷ್ಟು ಹಣ ವಿತರಿಸಬಹುದು” ಎಂದು ಸಲಹೆ ನೀಡಿದ್ದಾರೆ.

ಸುರೇಶ್‌ ಕುಮಾರ್‌ ಫೇಸ್‌ಬುಕ್‌ ಲಿಂಕ್‌ ಇಲ್ಲಿದೆ
https://www.facebook.com/share/p/E1Dk3tKnpDwRE7rP/?mibextid=WC7FNe

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

Download Eedina App Android / iOS

X