ಬಿಜೆಪಿ ಸಂಸದ ಪ್ರತಾಪ್​​ ಸಿಂಹ ಒಬ್ಬ ‘ಪೊಲಿಟಿಕಲ್ ಟೆರರಿಸ್ಟ್’: ಪ್ರೊ. ಮಹೇಶ್‌ಚಂದ್ರ ಗುರು ವಾಗ್ದಾಳಿ

Date:

Advertisements

ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್​​ ಸಿಂಹ ಒಬ್ಬ ‘ಪೊಲಿಟಿಕಲ್ ಟೆರರಿಸ್ಟ್’ ಎಂದು ಮೈಸೂರು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಮಹೇಶ್‌ ಚಂದ್ರ ಗುರು ವಾಗ್ದಾಳಿ ನಡೆಸಿದ್ದಾರೆ.

ನಗರದ ಮಾನಸ‌ ಗಂಗೋತ್ರಿಯಲ್ಲಿ ನಡೆದ ಮಹಿಷ ದಸರಾ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಾ ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದರು.

ಸಭೆಯಲ್ಲಿ ಪ್ರತಾಪ್ ಸಿಂಹ ಹೆಸರು ಉಲ್ಲೇಖಿಸಿದ್ದನ್ನು ನೆನಪಿಸಿದ ಮಹೇಶ್‌ ಚಂದ್ರ ಗುರು, ‘ಪಾಪಿಗಳನ್ನು ಯಾಕೆ ಈ ಒಳ್ಳೆಯವರ ಸಭೆಯಲ್ಲಿ ನೆನಪಿಸುತ್ತೀರಾ? ಬುದ್ಧಿ ಇದೆಯಾ ನಿಮಗೆ. ಪ್ರತಾಪ್ ಸಿಂಹ ನನ್ನ ಶಿಷ್ಯ. ಒಮ್ಮೆ ಅವರಪ್ಪ ಸವೆದು ಹೋಗಿರುವ ಅಂಗಿ, ಪಂಚೆ ಹಾಕಿಕೊಂಡು ಮಗನಿಗೆ ದುಡ್ಡು ಕೊಡೋಣ ಅಂತ ಅವನತ್ರ ಬಂದ್ರೆ, ಇವನು ತನ್ನ ಕ್ಲಾಸ್‌ಮೇಟ್‌ಗಳಿಗೆ ನಮ್ಮನೇಲಿ ಕೂಲಿ ಮಾಡ್ತಾವ್ನೆ ಅಂತ ಅಪ್ಪನ ಬಗ್ಗೆ ಹೇಳಿದ್ದ’ ಎಂದು ಹಳೆಯ ಘಟನೆಯನ್ನು ನೆನಪಿಸಿದರು.

Advertisements
ಅಪ್ಪು

ಬಳಿಕ ಮುಂದುವರಿದು, ‘ಇದನ್ನು ಕೇಳಿಸಿಕೊಂಡ ನನಗೆ ಕೋಪ ಬಂದು ಥಳಿಸಿ ಬುದ್ದಿ ಹೇಳಿದ್ದೆ. ಅಪ್ಪನನ್ನೇ ಜೀತದ ಆಳು ಅಂತ ಹೇಳ್ತೀಯಲ್ವಾ. ನೀನು ಒಳ್ಳೆಯವರಿಗೆ ಹುಟ್ಟಿಲ್ಲ ಎಂದು ತಿಳಿಸಿದ್ದೆ’ ಎಂದು ಹೇಳಿದ್ದಾರೆ.

“ಸಂಸದ ಪ್ರತಾಪ್​​ ಸಿಂಹ ಒಬ್ಬ ಪೊಲಿಟಿಕಲ್ ಟೆರರಿಸ್ಟ್. ನಿನ್ನಂಥವರನ್ನು ಮಟ್ಟ ಹಾಕುವ ತಾಕತ್ತು ನಮಗೆಲ್ಲರಿಗೂ ಇದೆ. ನಿನಗೆ ಸರಿಯಾದ ಪಾಠ ಕಲಿಸ್ತೀವಿ” ಎಂದು ಪ್ರೊ. ಮಹೇಶ್‌ ಚಂದ್ರ ಗುರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

Download Eedina App Android / iOS

X