ಜಿಎಸ್ಟಿ ಸಂಗ್ರಹದಲ್ಲಿ ನಮ್ಮ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ ಕೊಡುವ ನಮಗೆ ಕೇಂದ್ರ ಕೊಡುತ್ತಿರುವ ತೆರಿಗೆ ಪಾಲು ಭಿಕ್ಷೆಯಂತಿದೆ. ತೆರಿಗೆ ಹಂಚಿಕೆ ಮಾತ್ರವಲ್ಲದೇ, ಪ್ರತಿಯೊಂದರಲ್ಲೂ ಕರ್ನಾಟಕವನ್ನು ಸವತಿ ಮಗನಂತೆ ನೋಡುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದೂರಿದ್ದಾರೆ.
ಭಾನುವಾರ ಸರಣಿ ಟ್ವೀಟ್ ಮಾಡಿರುವ ಅವರು, ಕೇಂದ್ರದ ಮೋದಿ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯದ ವಿರುದ್ಧದ ನಮ್ಮ ಕೂಗು ಅರಣ್ಯರೋಧನವಾಗಿದೆ. ಜಿಎಸ್ಟಿ ಸಂಗ್ರಹದಲ್ಲಿ ನಮ್ಮ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ ಕೊಡುವ ನಮಗೆ ಕೇಂದ್ರ ಕೊಡುತ್ತಿರುವ ತೆರಿಗೆ ಪಾಲು ಭಿಕ್ಷೆಯಂತಿದೆ. ಕರ್ನಾಟಕವೆಂದರೆ ಮೋದಿ ಸರ್ಕಾರಕ್ಕೆ ಯಾಕೆ ಇಷ್ಟು ದ್ವೇಷ ಮತ್ತು ತಾತ್ಸಾರ ಎಂಬುದು ಅರ್ಥವೇ ಆಗುತ್ತಿಲ್ಲ” ಎಂದು ಕಿಡಿಕಾರಿದ್ದಾರೆ.
1
ಕೇಂದ್ರದ ಮೋದಿ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯದ ವಿರುದ್ಧದ ನಮ್ಮ ಕೂಗು ಅರಣ್ಯರೋಧನವಾಗಿದೆ.GST ಸಂಗ್ರಹದಲ್ಲಿ ನಮ್ಮ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ.
ಆದರೆ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ ಕೊಡುವ ನಮಗೆ ಕೇಂದ್ರ ಕೊಡುತ್ತಿರುವ ತೆರಿಗೆ ಪಾಲು ಭಿಕ್ಷೆಯಂತಿದೆ.
ಕರ್ನಾಟಕವೆಂದರೆ ಮೋದಿ…
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) January 7, 2024
“ರಾಜ್ಯದ ಜನ ಮೋದಿಯವರಿಗೆ ಮಾಡಿದ ಅನ್ಯಾಯವಾದರೂ ಏನು.? ಕೇಂದ್ರದ ತೆರಿಗೆ ಅನ್ಯಾಯ ಇಂದು ನಿನ್ನೆಯದಲ್ಲ. ಜಿಎಸ್ಟಿ ಕಾಯ್ಧೆ ಜಾರಿಯಾದಾಗಿನಿಂದ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಲೇ ಇದೆ. ಕೇಂದ್ರದ ತೆರಿಗೆ ಅನ್ಯಾಯದ ವಿರುದ್ಧ ನಾವು ಅನೇಕ ಬಾರಿ ಆಕ್ಷೇಪ ಎತ್ತಿದ್ದೇವೆ. ಆದರೆ ಈ ಬಗ್ಗೆ ರಾಜ್ಯದಲ್ಲಿರುವ ಬಿಜೆಪಿ ನಾಯಕರು ಯಾಕೆ ಮಾತಾಡುತ್ತಿಲ್ಲ.? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
“ರಾಜ್ಯ ಬಿಜೆಪಿಯಲ್ಲಿ ‘ರಾಜಾಹುಲಿ’ ‘ಸಾಮ್ರಾಟ’ ಎಂಬ ಬಿರುದಾಂಕಿತ ನಾಯಕರಿದ್ದಾರೆ. ಈ ಅತಿರಥ ಮಹಾನಾಯಕರೆಲ್ಲಾ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಮೋದಿಯವರಿಗೆ ಮನವರಿಕೆ ಮಾಡಿಕೊಡಬಹುದಲ್ಲವೇ.? ಇಲ್ಲಿನ ನಾಯಕರಿಗೆ ಕರ್ನಾಟಕಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯದ ಬಗ್ಗೆ ಮೋದಿಯವರ ಬಳಿ ಮಾತಾಡಲು ಬೆನ್ನು ಮೂಳೆಯಿಲ್ಲವೇ.? ಕೇಂದ್ರ ಸರ್ಕಾರ ಕೇವಲ ತೆರಿಗೆ ಹಂಚಿಕೆಯಲ್ಲಿ ಮಾತ್ರ ಕರ್ನಾಟಕಕ್ಕೆ ದ್ರೋಹ ಎಸಗುತ್ತಿಲ್ಲ. ಪ್ರತಿಯೊಂದರಲ್ಲೂ ಕರ್ನಾಟಕವನ್ನು ಸವತಿ ಮಗನಂತೆ ಕಾಣುತ್ತಿದೆ” ಎಂದು ಗುಂಡೂರಾವ್ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ.
3
ಕೇಂದ್ರ ಸರ್ಕಾರ ಕೇವಲ ತೆರಿಗೆ ಹಂಚಿಕೆಯಲ್ಲಿ ಮಾತ್ರ ಕರ್ನಾಟಕಕ್ಕೆ ದ್ರೋಹ ಎಸಗುತ್ತಿಲ್ಲ. ಪ್ರತಿಯೊಂದರಲ್ಲೂ ಕರ್ನಾಟಕವನ್ನು ಸವತಿ ಮಗನಂತೆ ಕಾಣುತ್ತಿದೆ.ರಾಜ್ಯ ಭೀಕರ ಬರದಿಂದ ನರಳುತ್ತಿದೆ.
ರೈತರು ಮಳೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ.
ನಾವು ಬರಪರಿಹಾರಕ್ಕಾಗಿ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ.
ಆದರೆ ಇಲ್ಲಿಯವರೆಗೂ ಒಂದು…
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) January 7, 2024
“ರಾಜ್ಯ ಭೀಕರ ಬರದಿಂದ ನರಳುತ್ತಿದೆ. ರೈತರು ಮಳೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ. ನಾವು ಬರಪರಿಹಾರಕ್ಕಾಗಿ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಇಲ್ಲಿಯವರೆಗೂ ಒಂದು ಕವಡೆಕಾಸಿನ ನೆರವೂ ಕೊಟ್ಟಿಲ್ಲ. ಎಷ್ಟು ದಿನ ಈ ಅನ್ಯಾಯ.?” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ.