- ರಾಜ್ಯದ ಮಹಿಳೆಯರಿಗೆ ಎಂದಿನಂತೆ ಟೋಪಿ ಹಾಕಿದ ಕಾಂಗ್ರೆಸ್
- ‘ಗೃಹಲಕ್ಷ್ಮಿ’ ರಾಜ್ಯದ ಬಹುತೇಕ ಮನೆಗಳಿಗೆ ತಲುಪಿಲ್ಲ: ದೂರು
ಪ್ರತಿ ತಿಂಗಳು ಮನೆ ಯಜಮಾನಿಯ ಅಕೌಂಟ್ಗೆ ₹2,000 ಹಾಕುತ್ತೇವೆಂದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್
ಸರ್ಕಾರ, ಈಗ ರಾಜ್ಯದ ಮಹಿಳೆಯರಿಗೆ ಎಂದಿನಂತೆ ಟೋಪಿ ಹಾಕಿದೆ ಎಂದು ಬಿಜೆಪಿ ಕಿಡಿಕಾರಿದೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಗೃಹಶಕ್ತಿ ಯೋಜನೆಯ ಲೋಪದ ಬಗ್ಗೆ ವಾಗ್ದಾಳಿ ನಡೆಸಿ, “ಆಗಸ್ಟ್ ತಿಂಗಳಲ್ಲಿ ಆರಂಭವಾದ ‘ಗೃಹಲಕ್ಷ್ಮಿ’ ರಾಜ್ಯದ ಬಹುತೇಕ ಮನೆಗಳಿಗೆ ತಲುಪಿಲ್ಲ. ಇನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಒಂದೇ ಒಂದು ರೂಪಾಯಿ ಸಹ ಇದುವರೆಗೂ ರಾಜ್ಯದ ಗೃಹಲಕ್ಷ್ಮಿಯರಿಗೆ ಜಮೆಯಾಗಿಲ್ಲ” ಎಂದು ಕುಟುಕಿದೆ.
“ರಾಹುಲ್ ಗಾಂಧಿಯವರನ್ನು ಕರೆಸಿ, ಸಿಎಂ ಸಿದ್ದರಾಮಯ್ಯ ಅವರು ಮತ್ತು ಡಿಸಿಎಂ ಡಿಕೆ ಶಿವಕುಮಾರ್
ಅವರು ಅಬ್ಬರಿಸಿ ಬೊಬ್ಬಿರಿದು ಭಾಷಣ ಮಾಡಿದ್ದು, ಕೇವಲ ಬೂಟಾಟಿಕೆಗೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ!” ಎಂದು ಟೀಕಿಸಿದೆ.
ಪ್ರತಿ ತಿಂಗಳು ಮನೆ ಯಜಮಾನಿಯ ಅಕೌಂಟ್ಗೆ ₹2000 ಹಾಕುತ್ತೇವೆಂದು ಅಧಿಕಾರಕ್ಕೆ ಬಂದಿರುವ @INCKarnataka ಸರ್ಕಾರ, ಈಗ ರಾಜ್ಯದ ಮಹಿಳೆಯರಿಗೆ ಎಂದಿನಂತೆ ಟೋಪಿ ಹಾಕಿದೆ.
ಆಗಸ್ಟ್ ತಿಂಗಳಲ್ಲಿ ಆರಂಭವಾದ "ಗೃಹಲಕ್ಷ್ಮಿ" ರಾಜ್ಯದ ಬಹುತೇಕ ಮನೆಗಳಿಗೆ ತಲುಪಿಲ್ಲ. ಇನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಒಂದೇ ಒಂದು ರೂಪಾಯಿ ಸಹ ಇದುವರೆಗೂ… pic.twitter.com/jEAN4FfevN
— BJP Karnataka (@BJP4Karnataka) October 27, 2023
“ಹಣಕ್ಕಾಗಿ ಪೋಸ್ಟಿಂಗ್ ದಂಧೆ ಮಾಡಿ ಬೀದಿಯಲ್ಲಿ ಮಾನ ಹರಾಜು ಹಾಕಿಕೊಂಡಿದ್ದ ಎಟಿಎಂ ಸರ್ಕಾರ, ಇದೀಗ ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳಿಗೆ ಬಡ್ತಿ ನೀಡಿ, ಹುದ್ದೆ ನೀಡದೆ ಮನೆಯಲ್ಲಿ ಕೂರಿಸಿದೆ. ಬಡ್ತಿ ನೀಡಿರುವ ಅಧಿಕಾರಿಗಳಿಂದ ಇನ್ನೂ ಕಲೆಕ್ಷನ್ ಆಗಿಲ್ಲವೆಂಬ ಕಾರಣಕ್ಕೆ ಹುದ್ದೆ ನೀಡದೆ ಅರಾಜಕತೆ ಸೃಷ್ಟಿಸಿದೆ. ಸಿದ್ದರಾಮಯ್ಯ ಅವರ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿರುವುದು, ಭ್ರಷ್ಟಾಚಾರದಲ್ಲಿ ಮುಳುಗಿರುವುದರಿಂದಲೇ ಈ ಸ್ಥಿತಿ ಎದುರಾಗಿದೆ” ಎಂದು ಹರಿಹಾಯ್ದಿದೆ.