‘ಗೃಹಲಕ್ಷ್ಮಿ’ ರಾಜ್ಯದ ಬಹುತೇಕ ಮನೆಗಳಿಗೆ ತಲುಪಿಲ್ಲ, ಕಾಂಗ್ರೆಸ್ಸಿಗರದು ಬರಿ ಬೂಟಾಟಿಕೆ: ಬಿಜೆಪಿ ಟೀಕೆ

Date:

Advertisements
  • ರಾಜ್ಯದ ಮಹಿಳೆಯರಿಗೆ ಎಂದಿನಂತೆ ಟೋಪಿ ಹಾಕಿದ ಕಾಂಗ್ರೆಸ್‌
  • ‘ಗೃಹಲಕ್ಷ್ಮಿ’ ರಾಜ್ಯದ ಬಹುತೇಕ ಮನೆಗಳಿಗೆ ತಲುಪಿಲ್ಲ: ದೂರು

ಪ್ರತಿ ತಿಂಗಳು ಮನೆ ಯಜಮಾನಿಯ ಅಕೌಂಟ್‌ಗೆ ₹2,000 ಹಾಕುತ್ತೇವೆಂದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌
ಸರ್ಕಾರ, ಈಗ ರಾಜ್ಯದ ಮಹಿಳೆಯರಿಗೆ ಎಂದಿನಂತೆ ಟೋಪಿ ಹಾಕಿದೆ ಎಂದು ಬಿಜೆಪಿ ಕಿಡಿಕಾರಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಗೃಹಶಕ್ತಿ ಯೋಜನೆಯ ಲೋಪದ ಬಗ್ಗೆ ವಾಗ್ದಾಳಿ ನಡೆಸಿ, “ಆಗಸ್ಟ್ ತಿಂಗಳಲ್ಲಿ ಆರಂಭವಾದ ‘ಗೃಹಲಕ್ಷ್ಮಿ’ ರಾಜ್ಯದ ಬಹುತೇಕ ಮನೆಗಳಿಗೆ ತಲುಪಿಲ್ಲ. ಇನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಒಂದೇ ಒಂದು ರೂಪಾಯಿ ಸಹ ಇದುವರೆಗೂ ರಾಜ್ಯದ ಗೃಹಲಕ್ಷ್ಮಿಯರಿಗೆ ಜಮೆಯಾಗಿಲ್ಲ” ಎಂದು ಕುಟುಕಿದೆ.

“ರಾಹುಲ್‌ ಗಾಂಧಿಯವರನ್ನು ಕರೆಸಿ, ಸಿಎಂ ಸಿದ್ದರಾಮಯ್ಯ ಅವರು ಮತ್ತು ಡಿಸಿಎಂ ಡಿಕೆ ಶಿವಕುಮಾರ್‌
ಅವರು ಅಬ್ಬರಿಸಿ ಬೊಬ್ಬಿರಿದು ಭಾಷಣ ಮಾಡಿದ್ದು, ಕೇವಲ ಬೂಟಾಟಿಕೆಗೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ!” ಎಂದು ಟೀಕಿಸಿದೆ.

Advertisements

“ಹಣಕ್ಕಾಗಿ ಪೋಸ್ಟಿಂಗ್ ದಂಧೆ ಮಾಡಿ ಬೀದಿಯಲ್ಲಿ ಮಾನ ಹರಾಜು ಹಾಕಿಕೊಂಡಿದ್ದ ಎಟಿಎಂ ಸರ್ಕಾರ, ಇದೀಗ ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳಿಗೆ ಬಡ್ತಿ ನೀಡಿ, ಹುದ್ದೆ ನೀಡದೆ ಮನೆಯಲ್ಲಿ ಕೂರಿಸಿದೆ. ಬಡ್ತಿ ನೀಡಿರುವ ಅಧಿಕಾರಿಗಳಿಂದ ಇನ್ನೂ ಕಲೆಕ್ಷನ್ ಆಗಿಲ್ಲವೆಂಬ ಕಾರಣಕ್ಕೆ ಹುದ್ದೆ ನೀಡದೆ ಅರಾಜಕತೆ ಸೃಷ್ಟಿಸಿದೆ. ಸಿದ್ದರಾಮಯ್ಯ ಅವರ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿರುವುದು, ಭ್ರಷ್ಟಾಚಾರದಲ್ಲಿ ಮುಳುಗಿರುವುದರಿಂದಲೇ ಈ ಸ್ಥಿತಿ ಎದುರಾಗಿದೆ” ಎಂದು ಹರಿಹಾಯ್ದಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

Download Eedina App Android / iOS

X