ಹಡಬಿ ದುಡ್ಡಲ್ಲಿ ಚುನಾವಣೆ ಎದುರಿಸಿದ್ದೀರಿ; ಯಡಿಯೂರಪ್ಪ ವಿರುದ್ಧ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ

Date:

Advertisements

ಬಿ ಎಸ್ ಯಡಿಯೂರಪ್ಪ‌ ಅವರು ಮೂರು ಬಾರಿ ಮುಖ್ಯಮಂತ್ರಿಯಾಗಿದ್ದವರು. 110 ಸೀಟಿನ ಮೇಲೆ ಯಾವತ್ತೂ ಅವರ ಪಕ್ಷ ಹೋಗಿಲ್ಲ. ಇನ್ನು 28 ಕ್ಷೇತ್ರವನ್ನೂ ಗೆಲ್ಲುತ್ತೇವೆ ಎನ್ನುವುದು ಹಾಸ್ಯಾಸ್ಪದ. ಅಪ್ಪ ಮಕ್ಕಳ ಬಳಿ ಹಡಬಿ ದುಡ್ಡು ಇರಬಹುದು, ಆ ದುಡ್ಡಿನಿಂದ ಚುನಾವಣೆ ಎದುರಿಸಿದ್ದೀರಿ ಎಂಬುದು ಗೊತ್ತಿದೆ ಎಂದು ಸಾಗರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿ ಗುರುವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಕಾಂಗ್ರೆಸ್ ಅನ್ನೋದು ಅಷ್ಟು ನಿಷ್ಕಿಯವಾಗಿದೆ ಎನ್ನುವುದು ಯಡಿಯೂರಪ್ಪ ಮಾತಿನ ಅರ್ಥವಾ? ಕಾಂಗ್ರೆಸ್ಸಿಗೆ ಒಂದೂ ಸೀಟ್ ಬರುವುದಿಲ್ಲ ಎನ್ನುತ್ತಾರೆ. ಕಾಂಗ್ರೆಸ್, ಜೆಡಿಎಸ್ ಸರ್ಕಾರ ಉರುಳಿಸಿ, ಹಡಬಿ ದುಡ್ಡು ಮಾಡಿದ್ದು ಯಾರು ಎಂಬುದು ಗೊತ್ತಿದೆ” ಎಂದರು.

“ಯಡಿಯೂರಪ್ಪ ಅವರಿಗೆ ಓಪನ್ ಚಾಲೆಂಜ್ ಹಾಕುತ್ತೇನೆ. 28ಕ್ಕೆ 28 ಕ್ಷೇತ್ರವನ್ನೂ ನೀವು ಗೆದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಇಲ್ಲದಿದ್ದರೆ, ಅಪ್ಪಮಕ್ಕಳು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೀರಾ” ಎಂದು ಪ್ರಶ್ನಿಸಿದರು.

Advertisements

“ಮೋದಿಯವರ ಹೆಸರು ಹೇಳಿ ವೋಟ್ ಕೇಳುವ ಪರಿಸ್ಥಿತಿ ರಾಘವೇಂದ್ರ ಅವರಿಗೆ ಬಂದಿದೆ ಎಂದರೆ ಅವರ ಕೆಲಸ ಶೂನ್ಯ ಎಂದರ್ಥಲ್ಲವೇ? ಯಡಿಯೂರಪ್ಪ ಏನು ಬೇಕಾದರೂ ಮಾತನಾಡುತ್ತಾರೆ. ಬಂಗಾರಪ್ಪ ಮತ್ತು ರಾಜ್ ಕುಮಾರ್ ಕುಟುಂಬದಿಂದ ಬಂದ, ನಮ್ಮ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಸ್ಪರ್ಧಿಸಿದಾಗ ಜನರಿಗೆ ಮನವರಿಕೆಯಾಗಿದೆ” ಎಂದರು.

“ಯಡಿಯೂರಪ್ಪ ಅವರ ಅಭಿವೃದ್ಧಿ ಏನಂದರೆ ಶಿಕಾರಿಪುರಕ್ಕೆ ಬಂದು ಹಡಬಿ ದುಡ್ಡು ಮಾಡಿದ್ದು, ನಿಮ್ಮ ಕ್ಷೇತ್ರವನ್ನು ಬಿಟ್ಟು ನಿಮಗೆ ಜಿಲ್ಲೆಯ ಬೇರೆ ಯಾವ ತಾಲೂಕುಗಳೂ ಕಾಣಿಸಲಿಲ್ಲ. ವಿಮಾನ ನಿಲ್ದಾಣವನ್ನು ನೀವು ನಿರ್ಮಿಸಿಲ್ಲದಿದ್ದರೆ ನಮ್ಮ ಸರ್ಕಾರ ನಿರ್ಮಿಸುತ್ತಿತ್ತು, ಆ ತಾಕತ್ ನಮಗಿದೆ” ಎಂದು ಹರಿಹಾಯ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

Download Eedina App Android / iOS

X