ಜೆಎನ್ಯುವಿನ ವಿದ್ಯಾರ್ಥಿ ನಾಯಕಿಯಾಗಿದ್ದ ಕಾಶ್ಮೀರದ ಶೆಹ್ಲಾ ರಶೀದ್, ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಕಟುವಾಗಿ ಟೀಕಿಸಿ, ಬಲಪಂಥೀಯರಿಂದ ದೇಶದ್ರೋಹಿ, ‘ತುಕ್ಡೇ ತುಕ್ಡೇ ಗ್ಯಾಂಗ್’ ಸದಸ್ಯೆ ಎನ್ನಿಸಿಕೊಂಡಿದ್ದರು. ಆದರೆ ಈಗ ಅದೇ ಶೆಹ್ಲಾ ರಶೀದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಹೊಗಳುತ್ತಿದ್ದಾರೆ. ಆ ಮೂಲಕ ಸುದ್ದಿಯಾಗಿದ್ದಾರೆ.
What caused my change of heart is the realisation that the Hon’ble PM @narendramodi is a selfless man who is taking radical decisions to transform India. He has braved intense criticism but remained steadfast to his vision of inclusive development that leaves no one behind. pic.twitter.com/s06cA2Q2ua
— Shehla Rashid (@Shehla_Rashid) November 16, 2023
ಎಎನ್ಐ(ANI) ಸುದ್ದಿ ಸಂಸ್ಥೆಯ ಸಂಪಾದಕಿ ಸ್ಮಿತಾ ಪ್ರಕಾಶ್ ಅವರ ‘ಪಾಡ್ಕಾಸ್ಟ್’ಗೆ ಶೆಹ್ಲಾ ರಶೀದ್ ಅವರು ಇತ್ತೀಚೆಗೆ ಸುಮಾರು ಎರಡೂವರೆ ಗಂಟೆಗಳ ಸಂದರ್ಶನ ನೀಡಿದ್ದು, ಹಲವಾರು ವಿಚಾರಗಳ ಬಗ್ಗೆ ಮಾತನಾಡುತ್ತಾ ಕೇಂದ್ರ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.
ಈ ಸಂದರ್ಶನದ ವೇಳೆ, ‘ನಾನು ಈ ಹಿಂದೆ ಎಡಪಂಥೀಯರ ಎಕೋ ಚೇಂಬರ್ ಒಳಗಿದ್ದೆ. ಅವರು ಕೋವಿಡ್ ಸಂದರ್ಭದಲ್ಲಿ ನಾನು ಲಾಕ್ ಡೌನ್ ವಿಷಯದಲ್ಲಿ ಕೇಂದ್ರವನ್ನು ಬೆಂಬಲಿಸಿದ್ದಕ್ಕಾಗಿ ನನ್ನ ಮೇಲೆ ಮುಗಿಬಿದ್ದಿದ್ದರು’ ಎಂದು ದೂರಿದ್ದಾರೆ.
“Out of touch with reality…” -Shehla Rashid on US Congressional reports on Kashmir#ShehlaRashid #ANIPodcastwithSmitaPrakash #Kashmir
Watch the full episode here: https://t.co/ijcjY28yiu pic.twitter.com/fnDA0dNzLf
— ANI (@ANI) November 16, 2023
ಮೋದಿ ಹಾಗೂ ಅಮಿತ್ ಶಾ ದೇಶವ್ಯಾಪಿ ಹಾಗೂ ಹೊರದೇಶಗಳಿಂದಲೂ ಸಾಕಷ್ಟು ವಿಮರ್ಶೆಗಳನ್ನು ಸಹಿಸಿಕೊಂಡಿದ್ದಾರೆ. ಅವರು ದೇಶಕ್ಕಾಗಿ ದುಡಿಯುತ್ತಿರುವುದನ್ನು ನಾವು ಗುರುತಿಸಬೇಕು. ಇಂದು ನಾವು ಬ್ರಿಟನ್ ಅನ್ನು ಹಿಂದಿಕ್ಕಿ ಆರ್ಥಿಕ ಶಕ್ತಿಯಾಗಿ ಬೆಳೆದಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಕೇಂದ್ರದ ಬಿಜೆಪಿ ಸರ್ಕಾರವನ್ನು ಶೆಹ್ಲಾ ರಶೀದ್ ಹಾಡಿ ಹೊಗಳಿದ್ದಾರೆ.
2020ರ ವೇಳೆಗೆ ಕೇವಲ ಟೀಕಿಸಲೇಬೇಕು ಎನ್ನುವ ಉದ್ದೇಶಕ್ಕಾಗಿ ಕೇಂದ್ರವನ್ನು ಟೀಕಿಸುತ್ತಿದ್ದೇವೆ ಎಂದು ನನನಿಸತೊಡಗಿತು. ನಾನು ಕೋವಿಡ್ ವಿಷಯದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಮಾತನಾಡಿದಾಗ ನನ್ನ ಬಾಯಿ ಮುಚ್ಚಿಸಲು ನೋಡಿದರು. ಲಾಕ್ ಡೌನ್ ವಿಷಯದಲ್ಲಿ ಕೇಂದ್ರಕ್ಕೆ ಲಾಕ್ ಡೌನ್ ಮಾಡುವುದನ್ನು ಬಿಟ್ಟು ಬೇರೆ ಅಯ್ಕೆಯೇ ಇರಲಿಲ್ಲ. ಲಾಕ್ ಡೌನ್ ಹೇರದ ಅಮೆರಿಕದ ಸ್ಥಿತಿ ಏನಾಗಿತ್ತು ಎನ್ನುವುದು ನಮಗೆಲ್ಲ ತಿಳಿದಿದೆ ಎಂದು ಶೆಹ್ಲಾ ರಶೀದ್ ಹೇಳಿದ್ದಾರೆ.
She breaks her silence on the JNU episode, on her lived experience post article 370 in JK, on the change of perception about the centre in the valley, her brief foray into politics, parental abuse & legal battles, on wanting to cut out noise, Kashmir Now with @Shehla_Rashid https://t.co/jPynKBaICD
— Smita Prakash (@smitaprakash) November 15, 2023
ಕಲ್ಲು ತೂರಾಟಗಾರ ನಡೆಸುತ್ತಿದ್ದವರ ಬಗ್ಗೆ ನೀವು ಈ ಹಿಂದೆ ಸಹಾನುಭೂತಿ ಹೊಂದಿದ್ದೀರಾ ಎಂದು ಕೇಳಿದ ಪ್ರಶ್ನೆಗೆ, ‘2010 ರಲ್ಲಿ ಸಹಾನುಭೂತಿ ಹೊಂದಿದ್ದೆ. ಕಾಶ್ಮೀರ ಈಗ ಬದಲಾಗಿದೆ. 2010ರಲ್ಲಿದ್ದ ಪರಿಸ್ಥಿತಿ ಈಗ ಅಲ್ಲಿ ಇಲ್ಲ. ಕಾಶ್ಮೀರ ಗಾಝಾಪಟ್ಟಿ ಅಲ್ಲ, ಅದು ತುಂಬಾ ಬದಲಾಗಿದೆ. ಕಾಶ್ಮೀರದಲ್ಲಿ ಪ್ರಧಾನಿ ಮೋದಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅಲ್ಲಿನ ಪರಿಸ್ಥಿತಿ ತುಂಬಾ ಸುಧಾರಿಸಿದೆ. ಅಲ್ಲಿನ ಜನ ತುಂಬಾ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಹಾಗಾಗಿಯೇ ಭಾರತ ಸರ್ಕಾರದ ನಡೆಯ ಪರವಾಗಿ ಮಾತನಾಡುತ್ತಿದ್ದೇನೆ. ಧನ್ಯವಾದ ಸಲ್ಲಿಸುತ್ತೇನೆ’ ಎಂದು ಶೆಹ್ಲಾ ರಶೀದ್ ಹೇಳಿದ್ದಾರೆ.
“Kashmir is not Gaza…” Shehla Rashid takes a U-turn, praises Modi govt for removing Article 370#ShehlaRashid #ANIPodcastwithSmitaPrakash #Podcast #Kashmir
Watch the full episode here: https://t.co/ijcjY28yiu pic.twitter.com/i4F4u2tzRi
— ANI (@ANI) November 16, 2023
ಜಮ್ಮು ಮತ್ತು ಕಾಶ್ಮೀರದಲ್ಲಿನ ಬದಲಾವಣೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೀತಿಗಳು ಕಾರಣ. ಅವರು ಅದಕ್ಕೆ ರಾಜಕೀಯ ಪರಿಹಾರವನ್ನು ನೀಡಿದ್ದಾರೆ. ಅದನ್ನು ನಾನು ಗಟ್ಟಿಯಾಗಿ ಹೇಳಲು ಬಯಸುತ್ತೇನೆ ಎಂದು ಶೆಹ್ಲಾ ತಿಳಿಸಿದ್ದಾರೆ.
ಮುಸ್ಲಿಮರ ವಿರುದ್ಧದ ತಾರತಮ್ಯದ ಕುರಿತು ಕೇಳಿದಾಗ ಅವರು, ‘ಭಾರತದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಲ್ಲ. ಅವರು ಇಲ್ಲಿ ಎರಡನೇ ಅತಿ ದೊಡ್ಡ ಜನಸಂಖ್ಯೆ. ಇದನ್ನು ಹಲವು ಮುಸ್ಲಿಂ ನಾಯಕರು ಕೂಡ ಪ್ರತಿಪಾದಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.
View this post on Instagram
‘ದೇಶದಲ್ಲಿ ಕೋಮುವಾದ ಇದೆಯೇ ಎಂದು ಕೇಳಿದರೆ, ಹೌದು ಎನ್ನಬೇಕಾಗುತ್ತದೆ. ಎಪ್ಪತ್ತು ವರ್ಷಗಳ ಹಿಂದೆ ದೇಶ ವಿಭಜನೆಯಾಗಿದ್ದೇ ಧಾರ್ಮಿಕ ಆಧಾರದಲ್ಲಿ. 2014ರ ನಂತರ ಅಥವಾ ಬಿಜೆಪಿಯಿಂದ ಕೋಮುವಾದ ಇದೆಯೆನ್ನುವುದು ಸರಿಯಲ್ಲ. ಕೋಮುವಾದಕ್ಕೆ ದೀರ್ಘ ಇತಿಹಾಸವಿದೆ. ಅದು ಮುಂದೆಯೂ ಇರುತ್ತದೆ. ನಾವು ಅತಿಯಾದ ನಕಾರಾತ್ಮಕತೆಯನ್ನು ಆಚರಿಸಿದಷ್ಟು, ಸಕಾರಾತ್ಮಕತೆಯನ್ನು ಆಚರಿಸುವುದಿಲ್ಲ’ ಎಂದು ಅವರು ಹೇಳಿದರು.
You’re right. In fact, I mentioned it in the podcast. The “Jan Aushadhi Kendras” are colloquially known as “Modi Dukaan” in Kashmir. Generic medicines are a huge talking point within the Left globally. Even from a Leftist perspective, it is an appreciable initiative of the govt. https://t.co/m9jcNzQQJJ pic.twitter.com/j1aSzJscm6
— Shehla Rashid (@Shehla_Rashid) November 16, 2023
ಭಾರತವು ಅತಿದೊಡ್ಡ ದೇಶವಾಗಿದ್ದು, ಈ ಹಿಂದೆಯೂ ಮುಸ್ಲಿಮರ ವಿರುದ್ಧ ಗುಂಪು ಹತ್ಯೆ ಮತ್ತು ದುರದೃಷ್ಟಕರ ಹೇಳಿಕೆಗಳನ್ನು ನೀಡಿದ ಘಟನೆಗಳು ನಡೆದಿವೆ ಎಂದು ಶೆಹ್ಲಾ ಹೇಳಿದರು.
‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶ್ರೀನಗರಕ್ಕೆ ಭೇಟಿ ನೀಡಿದಾಗ ಕಾಶ್ಮೀರಿಗಳಿಗೆ ಇದು ಅವರ ದೇಶ ಮತ್ತು ಅವರು ಎಲ್ಲಿ ಬೇಕಾದರೂ ವಾಸಿಸಬಹುದು ಮತ್ತು ಹೋಗಬಹುದು ಎಂದು ಹೇಳಿದ್ದಾರೆ. ಇದು ಅವರ ನಿಖರವಾದ ಮಾತುಗಳು. ಮತ್ತು ನಾವು ಒಂದು ಕ್ಷಣ ಯೋಚಿಸಬೇಕು. ನಾವು ಐತಿಹಾಸಿಕ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಇದೊಂದು ದೇಶದ ಇತಿಹಾಸದ ಪ್ರಮುಖ ಹಂತ. ನಮ್ಮನ್ನು ನಾವು ಅದೃಷ್ಟವಂತರೆಂದು ಪರಿಗಣಿಸಬೇಕು. ಏಕೆಂದರೆ ಇನ್ಯಾವುದೋ ದೇಶದಲ್ಲಿ ವಾಸಿಸುತ್ತಿಲ್ಲ. ನಾವು ಈ ದೇಶದಲ್ಲಿ ವಾಸಿಸುತ್ತಿರುವುದರ ಕುರಿತು ಹೆಮ್ಮೆ ಪಡಬೇಕು. ಏಕೆಂದರೆ ಇಲ್ಲಿ ಶಾಂತಿಯಿದೆ, ಅಭಿವೃದ್ಧಿಯಿದೆ ಮತ್ತು ನಾವು ನಮ್ಮ ಹಿಂದಿನ ವಸಾಹತುಶಾಹಿಗಳಾದ ಇಂಗ್ಲೆಂಡನ್ನು ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದ್ದೇವೆ’ ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ರಶೀದ್ ಹೊಗಳಿದ್ದು ಇದೇ ಮೊದಲಲ್ಲ. ಆಗಸ್ಟ್ 5, 2019ರಂದು ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತ ಸ್ಥಾನಮಾನವನ್ನು ತೆಗೆದು ಹಾಕಿ, ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಮೋದಿ ಸರ್ಕಾರದ ನಿರ್ಧಾರದ ಬಗ್ಗೆ ಈ ವರ್ಷದ ಆಗಸ್ಟ್ನಲ್ಲಿ ತೀವ್ರವಾಗಿ ರಶೀದ್ ಅವರು ಟೀಕಿಸಿದ್ದರು. ಆದರೆ ಇದೀಗ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಶ್ಲಾಘಿಸಿದ್ದಾರೆ.