ಜನರ ಪ್ರೀತಿಗೆ ನನ್ನ ಸ್ಪೀಕರ್ ಸ್ಥಾನ ಯಾವತ್ತೂ ಅಡ್ಡಿಯಾಗಲ್ಲ: ಯು ಟಿ ಖಾದರ್

Date:

Advertisements

ನನ್ನಿಂದ ಜನಸಾಮಾನ್ಯರಿಗೆ, ಅಭಿಮಾನಿಗಳಿಗೆ ಹಾಗೂ ನನ್ನ ಜಿಲ್ಲೆಯ ಜನರಿಗೆ ನಿರಾಸೆಯಾಗಲು ನಾನು ಬಿಡುವುದಿಲ್ಲ. ಜನರ ಪ್ರೀತಿಗೆ ನನ್ನ ಸ್ಪೀಕರ್ ಸ್ಥಾನ ಯಾವತ್ತೂ ಅಡ್ಡಿಯಾಗಲ್ಲ. ನಾನು ಯಾರಿಂದಲೂ ದೂರವಾಗಲು ಇಷ್ಟಪಡುವುದಿಲ್ಲ ಎಂದು ನೂತನ ಸಭಾಧ್ಯಕ್ಷ ಯು ಟಿ ಖಾದರ್‌ ಹೇಳಿದರು.

ಸಭಾಧ್ಯಕ್ಷರಾಗಿ ತವರು ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಯು ಟಿ ಖಾದರ್‌ ನಮ್ಮಿಂದ ದೂರವಾಗಲಿದ್ದಾರೆ ಎನ್ನುವ ಅನುಮಾನ ಕೆಲವೇ ತಿಂಗಳಲ್ಲಿ ದೂರವಾಗಲಿದೆ. ಆ ರೀತಿ ನಾನು ನಡೆದುಕೊಳ್ಳುವೆ” ಎಂದು ತಿಳಿಸಿದರು.

“ನಮ್ಮ ಜನರ ಪ್ರೀತಿಗೆ ನನ್ನ ಸಭಾಧ್ಯಕ್ಷ ಸ್ಥಾನ ಅಡ್ಡಿಯಾಗಲ್ಲ. ನಾನು ಮಂತ್ರಿಯಾಗಿದ್ದರೆ ಒಂದು ಇಲಾಖೆಗೆ ಮಾತ್ರ ಮಂತ್ರಿ ಆಗಿರುತ್ತಿದ್ದೆ. ಈಗ ಎಲ್ಲ ಶಾಸಕರು, ಅಧಿಕಾರಿಗಳು ನನ್ನ ವ್ಯಾಪ್ತಿಯಲ್ಲೇ ಬರುತ್ತಾರೆ. ನನ್ನ ಜಿಲ್ಲೆಗೆ ಏನು ಬೇಕು ಅದನ್ನು ಅಲ್ಲಿಂದಲೇ ಮಾಡಿಸುವೆ. ಕ್ಷೇತ್ರದ ಅಭಿವೃದ್ಧಿಯನ್ನು ನಾನು ಮರೆಯುವುದಿಲ್ಲ” ಎಂದರು.

Advertisements

“ಈ ಸಭಾಧ್ಯಕ್ಷ ಸ್ಥಾನವನ್ನು ನಾನು ಸಂತೋಷದಿಂದಲೇ ಸ್ವೀಕರಿಸಿದ್ದೇನೆ. ಈ ಬಾರಿ ಹೊಸದಾಗಿ ಬಹಳಷ್ಟು ಶಾಸಕರು ಆಯ್ಕೆಯಾಗಿದ್ದಾರೆ. ಅವರಲ್ಲೂ ಹೊಸ ಜ್ಞಾನ, ಹೊಸ ವಿಚಾರ ಇರುತ್ತದೆ. ಅದನ್ನು ಹೊರತಗೆಯಲು ಪ್ರಯತ್ನಿಸುವೆ. ಹೆಚ್ಚಿನ ಅವಕಾಶ ಯುವ ಶಾಸಕರಿಗೆ ಕೊಡುವೆ. ಈ ಮೂಲಕ ರಾಜ್ಯಕ್ಕೆ ಮತ್ತು ನನ್ನ ಜಿಲ್ಲೆಗೆ ಗೌರವ ತಂದುಕೊಡುವ ಪ್ರಯತ್ನ ಮಾಡುವೆ” ಎಂದು ಹೇಳಿದರು.

“ಈ ಹಿಂದೆ ಶಾಸಕನಾಗಿ, ಮಂತ್ರಿಯಾಗಿ ಕೆಲಸ ಮಾಡಿರುವೆ. ಇಂದು ಸಭಾಧ್ಯಕ್ಷ ಆಗಿರುವೆ. ಜನರ ಪ್ರೀತಿ ಉಳಿಸಿಕೊಳ್ಳುವೆ. ಆ ಪೀಠದ ಘನತೆಯನ್ನು ಹೆಚ್ಚಿಸುವೆ” ಎಂದು ಭರವಸೆಯ ಮಾತುಗಳನ್ನಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

Download Eedina App Android / iOS

X