2024ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಜಾತಿಗಣತಿಯ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಈ ನಡುವೆ ಜಾತಿಗಣತಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಆರ್ಎಸ್ಎಸ್, “ಜಾತಿಗಣತಿಯಿಂದ ದೇಶದ ಏಕತೆಗೆ ಅಪಾಯವಿದೆ” ಎಂದು ತಿಳಿಸಿದೆ.
ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿದರ್ಭ ಸಹ ಸಂಘಚಾಲಕ ಶ್ರೀಧರ ಗಾಡ್ಗೆ, “ಜಾತಿ ಗಣತಿಯಿಂದ ಏನನ್ನೂ ಸಾಧಿಸಲಾಗದು. ಅದರ ಅವಶ್ಯಕತೆಯೂ ಇಲ್ಲ. ಅದರಿಂದ ಯಾವ ಲಾಭವೂ ಇಲ್ಲ. ನಮಗೆ ಅದರಿಂದ ಹಾನಿ ಮಾತ್ರ ಕಾಣುತ್ತಿದೆ” ಎಂದು ಹೇಳಿದ್ದಾರೆ.
“ಜಾತಿ ಆಧಾರಿತ ಜನಗಣತಿಯಿಂದ ಒಂದು ನಿರ್ದಿಷ್ಟ ಜಾತಿಯ ಜನಸಂಖ್ಯೆಯ ದತ್ತಾಂಶ ಒದಗಿಸಬಹುದು. ಇಂತಹ ಕಸರತ್ತು, ರಾಜಕೀಯವಾಗಿ ಕೆಲವು ವ್ಯಕ್ತಿಗಳಿಗೆ ಮಾತ್ರ ಲಾಭವಾಗಬಹುದು. ಆದರೆ, ಇದು ಸಾಮಾಜಿಕವಾಗಿ ಮತ್ತು ರಾಷ್ಟ್ರೀಯ ಏಕತೆಯ ದೃಷ್ಟಿಯಿಂದ ಒಳಿತಲ್ಲ” ಎಂದು ತಿಳಿಸಿದರು.
#WATCH | On caste census, RSS leader Shridhar Gadge in Nagpur says, “Inequality will increase means that if you count, then the census report will have to be displayed…What is its use? If its benefits are explained we can use it, we do not see any benefit in it, we see harm, it… pic.twitter.com/xjcVMaiq7T
— ANI (@ANI) December 19, 2023
“ನಮಗೆ ಜಾತಿ ಗಣತಿಯ ಅವಶ್ಯಕತೆ ಇಲ್ಲವೆನಿಸುತ್ತದೆ. ಇದಕ್ಕೆ ಬೇರೆ ಕಾರಣವೇನಿಲ್ಲ, ಜಾತಿ ಆಧಾರಿತ ಸಮೀಕ್ಷೆಯಿಂದ ನಾವು ಏನು ಸಾಧಿಸಬಹುದು? ಇದು ತಪ್ಪು. ಅಸಮಾನತೆ, ದ್ವೇಷ, ಜಗಳ ಇರಬಾರದು ಎಂಬುದು ನಮ್ಮ ಸ್ಪಷ್ಟ ನಿಲುವು” ಎಂದು ಶ್ರೀಧರ ಗಾಡ್ಗೆ ತಿಳಿಸಿದರು.
ಅಮಿತ್ ಶಾ ಹೇಳಿಕೆಯನ್ನು ಪ್ರಸ್ತಾಪಿಸಿದ ಗಾಡ್ಗೆ, “ರಾಜಕೀಯ ಪಕ್ಷಗಳು ತಮ್ಮದೇ ಆದ ನಿಲವು ಹೊಂದಿರಬಹುದು. ಆದರೆ ಆರ್ಎಸ್ಎಸ್ ಜಾತಿ ಆಧರಿತ ಗಣತಿಯನ್ನು ಖಂಡತುಂಡವಾಗಿ ವಿರೋಧಿಸುತ್ತದೆ. ಆರ್ಎಸ್ಎಸ್ ಸಾಮಾಜಿಕ ಸಮಾನತೆಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ನಮ್ಮ ದೇಶದಲ್ಲಿ ಜಾತಿ ಹೆಸರಿನಲ್ಲಿ ಒಡಕು ಮೂಡಿಸಲಾಗುತ್ತದೆ. ಸಮಾಜದಲ್ಲಿ ಜಾತಿ ಎನ್ನುವುದು ಅಸಮಾನತೆಯ ಮೂಲವಾದರೆ, ಜಾತಿಗಣತಿಯಂಥ ಕ್ರಮಗಳಿಂದ ಇದು ಮತ್ತಷ್ಟು ಉಲ್ಬಣಗೊಳ್ಳಲಿದೆ ಎನ್ನುವುದು ನಮ್ಮ ಸ್ಪಷ್ಟ ನಿಲುವು” ಎಂದು ಆರ್ಎಸ್ಎಸ್ ಮುಖಂಡ ಶ್ರೀಧರ ಗಾಡ್ಗೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ಬಿಜೆಪಿ ಮತ್ತು ಶಿವಸೇನೆ ಶಾಸಕರು ಆರ್ಎಸ್ಎಸ್ ಕೇಂದ್ರ ಕಚೇರಿಗೆ ಮಂಗಳವಾರ ಭೇಟಿ ನೀಡಿ, ಸಭೆ ನಡೆಸಿದ ಬಳಿಕ ಈ ಹೇಳಿಕೆಯನ್ನು ಶ್ರೀಧರ ಗಾಡ್ಗೆ ನೀಡಿದ್ದಾರೆ.
ಜಾತಿ ಗಣತಿಯಿಂದ ದೇಶಕ್ಕೆ ಯಾವ ಅಪಾಯವೂ ಇಲ್ಲ ಅಪಾಯ ಇರುವುದು ಸಂಘದ ಮನುವಾದಿ ಸಿದ್ಧಾಂತಗಳಿಗೆ,,, ಬಹುಸಂಖ್ಯೆಯ ದಲಿತ ಹಿಂದುಳಿದ ಮತ್ತು ತಳವರ್ಗದವರು ಜನಸಂಖ್ಯೆ ಅನುಪಾತದಲ್ಲಿ ರಾಜಕೀಯ ಅಧಿಕಾರ ಮತ್ತು ಸಂಪತ್ತಿನ ಹಂಚಿಕೆ ಬೇಡಿಕೆ ಸುರುವಾದರೆ,, ಇಲ್ಲಿಯವರೆಗೆ ಈ ವರ್ಗಗಳ ಮೇಲಿದ್ದ ತಮ್ಮ ನಿಯಂತ್ರಣ ಎಲ್ಲಿ ಕೈತಪ್ಪುವುದೋ ಅನ್ನುವ ಭಯ,,, ದೇಶದ ಒಗ್ಗಟ್ಟು ಅರ್ಥವೇನು,,ಬಲಿಷ್ಠ ಸಮುದಾಯಗಳು ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಎಲ್ಲಾ ಅಧಿಕಾರ ಸಂಪತ್ತು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ ಅದ್ಕೆ ಸಂಚಕಾರ ಬರುವ ಭಯ,,ಸಂಘ ಯಾವಾಗಲೂ ಮೇಲ್ವರ್ಗದವರ ಪರವಾಗಿ ಇರುವುದು ಗುಟ್ಟೇನಲ್ಲ