ಸದನವನ್ನು ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ಸ್ಥಳಾಂತರಿಸಿ: ಎಸ್ ಸುರೇಶ್ ಕುಮಾರ್ ವ್ಯಂಗ್ಯ

Date:

Advertisements

ಇಂದಿನ (ಜು.18) ವಿಧಾನಸಭಾ ಅಧಿವೇಶನ ಕಲಾಪದಲ್ಲಿ ಸಚಿವರ ಗೈರು ಎದ್ದು ಕಂಡಿತು. ಈ ವಿಚಾರವಾಗಿ ಪ್ರತಿಪಕ್ಷದ ಸದಸ್ಯ ‌ಎಸ್‌ ಸುರೇಶ್ ಕುಮಾರ್ ಹಾಸ್ಯದ ದಾಟಿಯಲ್ಲಿಯೇ ವಾಗ್ದಾಳಿ ನಡೆಸಿದರು.

“ಮೊದಲ ಸಾಲಲ್ಲಿ ಕುಳಿತು‌ಕೊಳ್ಳುವ ಒಂಬತ್ತು ಜನ ಸಚಿವರ ಪೈಕಿ ಒಬ್ಬರೂ ಕೂಡ ಇಲ್ಲಿ ಹಾಜರಿಲ್ಲ. ನಾವು ಹೇಗೆ ಚರ್ಚೆ ಮಾಡಬೇಕು. ಇಂದಿನ ಸದನವನ್ನು ಒಂದು ದಿನದ ಮಟ್ಟಿಗಾದರೂ ವಿರೋಧ ಪಕ್ಷಗಳ ಸಭೆ ನಡೆಯುತ್ತಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ಸ್ಥಳಾಂತರಿಸಿ. ಇದರಿಂದ ಸಚಿವರಿಗೆ ಅನುಕೂಲವಾಗುತ್ತದೆ” ಎಂದು ವ್ಯಂಗ್ಯವಾಗಿಯೇ ಕುಟುಕಿದರು.

“ಮಾಜಿ ಸಿಎಂ ಬೊಮ್ಮಾಯಿ ಅವರು ಸುರೇಶ್‌ ಕುಮಾರ್‌ ಮಾತಿಗೆ ಧ್ವನಿಗೂಡಿಸಿ, “ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಸದನ ನಡೆಸಿದ್ದರೆ ಕಾಂಗ್ರೆಸ್‌ ಸಚಿವರಿಗೆ ಬಹಳ ಅನುಕೂಲವಾಗುತ್ತಿತ್ತು” ಎಂದರು. ಬಿಜೆಪಿ ಸದಸ್ಯರು ಟೇಬಲ್‌ ತಟ್ಟಿ ಬೆಂಬಲ ಸೂಚಿಸಿದರು.

Advertisements

ಸಭಾಧ್ಯಕ್ಷ ಯು ಟಿ ಖಾದರ್ ಅವರು ಪ್ರತಿಕ್ರಿಯಿಸಿ, “ಅವಕಾಶವಿದ್ದರೆ ಖಂಡಿತವಾಗಿಯೂ ಅಲ್ಲೇ ಸದನ ನಡೆಸುತ್ತಿದ್ದೆ. ನಿಯಮಗಳಲ್ಲಿ ಅವಕಾಶವಿಲ್ಲ” ಎಂದು ಸುರೇಶ್ ಕುಮಾರ್‌ ಅವರನ್ನು ಸಮಾಧಾನಪಡಿಸಿದರು. ಇದಕ್ಕೆ ಸುರೇಶ್‌ ಕುಮಾರ್‌ ಮರು ಉತ್ತರಿಸಿ, “ನಿಮ್ಮ ಪರಮಾಧಿಕಾರ ಬಳಸಿ ಸದನ ಹೋಟೆಲ್‌ನಲ್ಲಿ ನಡೆಸಿ. ಮತ್ತಷ್ಟು ಬಿಗ್‌ ಇವೆಂಟ್‌ ಆಗುತ್ತದೆ” ಎಂದರು.

ಕಾಂಗ್ರೆಸ್‌ ಸದಸ್ಯರ ವಲಯದಿಂದ, “ನಿಮ್ಮ ಅವಧಿಯಲ್ಲೂ ಹೀಗೆ ಆಗಿತ್ತು” ಎಂದು ಸುರೇಶ್‌ ಕುಮಾರ್‌ಗೆ ತಿರುಗೇಟು ನೀಡಿದರು. ಸಭಾಧ್ಯಕ್ಷರು ಮಧ್ಯ ಪ್ರವೇಶಿಸಿ, “ಈ ಚರ್ಚೆ ಬೇಡ. ಸದನದ ವಿಷಯ ಮುಂದುವರಿಸಿ” ಎಂದು ಎಲ್ಲರಿಗೂ ಸಮಾಧಾನ ಮಾಡಿದರು.

ಸದನ
ಮಂಗಳವಾರದ ಸದನದಲ್ಲಿ ಸಚಿವರು ಗೈರಾದ ದೃಶ್ಯ.
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X