ಗಾಝಾ ವಶಪಡಿಸಿಕೊಳ್ಳುವ ಇಸ್ರೇಲ್ ತೀರ್ಮಾನ ದೊಡ್ಡ ತಪ್ಪು: ಅಮೆರಿಕ ಅಧ್ಯಕ್ಷ ಜೋ ಬೈಡನ್

Date:

Advertisements

ಗಾಝಾವನ್ನು ಇಸ್ರೇಲ್ ಮತ್ತೊಮ್ಮೆ ವಶಪಡಿಸಿಕೊಳ್ಳುವ ತೀರ್ಮಾನ ದೊಡ್ಡ ತಪ್ಪು ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಸಿಬಿಎಸ್ ನ್ಯೂಸ್‌ನ ’60 ಮಿನಿಟ್ಸ್’ಗೆ ನೀಡಿದ ಸಂದರ್ಶನದಲ್ಲಿ ಅಮೆರಿಕ ಅಧ್ಯಕ್ಷ ಈ ಮಾತನ್ನು ಹೇಳಿದ್ದಾರೆ.

ಭಾನುವಾರದ ನೀಡಿರುವ ಸಂದರ್ಶನದ ಸುಮಾರು 14 ನಿಮಿಷಗಳ ವಿಡಿಯೋವನ್ನು ಪ್ರಕಟಿಸಿರುವ ಸಿಬಿಎಸ್ ನ್ಯೂಸ್‌, ‘ಕಳೆದ ವಾರ ಹಮಸ್ ದಾಳಿಯ ನಂತರ ಇಸ್ರೇಲ್ ಪ್ರತಿಕ್ರಿಯಿಸಬೇಕಿತ್ತು. ಪ್ರತಿಕ್ರಿಯಿಸಿದೆ’ ಎಂದು ಬೈಡನ್ ತಿಳಿಸಿದ್ದಾರೆ.

Advertisements

ಗಾಝಾದ ಸಂಪೂರ್ಣ ಮುತ್ತಿಗೆಯನ್ನು ಒಪ್ಪುತ್ತೀರಾ ಎಂದು ಸಂದರ್ಶನಕಾರ ಕೇಳಿದಾಗ ಬೈಡನ್ ಅವರು, ‘ಗಾಝಾವನ್ನು ಪುನಃ ಇಸ್ರೇಲ್ ವಶಪಡಿಸಿಕೊಳ್ಳುವ ತೀರ್ಮಾನ ದೊಡ್ಡ ತಪ್ಪು. ಇಸ್ರೇಲ್ ಯುದ್ಧದ ನಿಯಮಗಳೊಳಗೆ ಕಾರ್ಯನಿರ್ವಹಿಸುತ್ತದೆ ಮತ್ತು ಗಾಜಾದಲ್ಲಿನ ಮುಗ್ಧರಿಗೆ ಔಷಧಿ, ಆಹಾರ, ನೀರು ಮತ್ತು ಔಷಧವನ್ನು ಪಡೆಯಲು ಸಾಧ್ಯವಾಗುವ ಸಾಮರ್ಥ್ಯವಿದೆ ಎಂದು ನಾನು ವಿಶ್ವಾಸ ಹೊಂದಿದ್ದೇನೆ’ ಎಂದು ಹೇಳಿದರು.

ಇದೇ ವೇಳೆ ಹಮಸ್ ನಡೆಸಿರುವ ದಾಳಿಯನ್ನು ಬೈಡನ್ ಹತ್ಯಾಕಾಂಡಕ್ಕೆ ಹೋಲಿಸಿದ್ದಾರೆ. ನನ್ನ ದೃಷ್ಟಿಯಲ್ಲಿ ಹಮಸ್ ಮತ್ತು ಹಮಸ್‌ನ ತೀವ್ರ ಅಂಶಗಳು ಎಲ್ಲ ಪ್ಯಾಲೆಸ್ತೀನ್ ಜನರನ್ನು ಪ್ರತಿನಿಧಿಸುವುದಿಲ್ಲ. ಆದರೆ ಜನರನ್ನು ಮಾನವ ಗುರಾಣಿಯನ್ನಾಗಿ ಬಳಸಿ, ಗುಪ್ತ ಸ್ಥಳಗಳಿಂದ ದಾಳಿ ನಡೆಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ತಿಳಿಸಿದ್ದಾರೆ.

ಹಮಸ್ ನಡೆಸಿದ ದಾಳಿಯಲ್ಲಿ ಇರಾನ್ ಸಂಬಂಧಿಸಿರುವ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಆದರೂ ಅಮೆರಿಕದ ಗುಪ್ತಚರ ಇಲಾಖೆ ಇದರ ಬಗ್ಗೆಯೂ ಕಣ್ಣಿಟ್ಟಿದೆ ಎಂದು ಅಧ್ಯಕ್ಷ ಬೈಡನ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಇಸ್ರೇಲ್ ಗಾಝಾದ ಭೂಪ್ರದೇಶವನ್ನು ದೀರ್ಘಾವಧಿಯವರೆಗೆ ನಿಯಂತ್ರಿಸುತ್ತದೆ ಎಂದು ನಾನು ನಂಬುವುದಿಲ್ಲ. ಬದಲಿಗೆ ಆ ಪ್ರದೇಶವನ್ನು ಪ್ಯಾಲೆಸ್ತೀನಿಯರೇ ತಮ್ಮ ಅಧಿಕಾರದಿಂದ ನಿಯಂತ್ರಿಸಬೇಕು ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X