ಐಪಿಎಲ್‌ ಅಖಾಡದಲ್ಲಿದ್ದಾರೆ 13 ಕನ್ನಡಿಗ ಆಟಗಾರರು: ‘ಆರ್‌ಸಿಬಿ’ಯಲ್ಲಿ ಯಾರ್‍ಯಾರಿದ್ದಾರೆ?

Date:

Advertisements

ಕೋಲ್ಕತ್ತಾದಲ್ಲಿ 2025ರ ಐಪಿಎಲ್‌ ಟೂರ್ನಿಯ ಮೊದಲ ಪಂದ್ಯ ಇಂದು (ಮಾರ್ಚ್‌ 22) ನಡೆಯಲಿದೆ. ಈ ಬಾರಿಯ ಭಾರತೀಯ ಕ್ರಿಕೆಟಿಗರು ಹೆಚ್ಚಿನ ಸಾಧನೆ ಮಾಡುವ ನಿರೀಕ್ಷೆಗಳಿವೆ. ಜೊತೆಗೆ, ಟೂರ್ನಿಯಲ್ಲಿರುವ ಆಡುತ್ತಿರುವ ಕನ್ನಡಿಗರ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಸದ್ಯ, ಟೂರ್ನಿಯ ಅಖಾಡದಲ್ಲಿ 13 ಕನ್ನಡಿಗರಿದ್ದಾರೆ. ಅವರಲ್ಲಿ, ಇಬ್ಬರು ಆರ್‌ಸಿಬಿ ತಂಡದಲ್ಲಿದ್ದಾರೆ.

13 ಕನ್ನಡಿಗ ಕ್ರಿಕೆಟಿಗರ ಪಟ್ಟಿ ಇಲ್ಲಿದೆ:

  1. ಕೆಎಲ್ ರಾಹುಲ್: ಭಾರತೀಯ ತಂಡದಲ್ಲಿರುವ ಏಕೈಕ ಕನ್ನಡಿಗ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. ಹರಾಜಿನಲ್ಲಿ ಅವರನ್ನು 14 ಕೋಟಿ ರೂ.ಗೆ ಡೆಲ್ಲಿ ಪ್ರಾಂಚೈಸಿ ಖರೀದಿಸಿತ್ತು.
  2. ಪ್ರಸಿದ್ಧ್ ಕೃಷ್ಣ: ವೇಗಿ ಬೌಲರ್ – ಗುಜರಾತ್ ಟೈಟಾನ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಅವರು 9.50 ಕೋಟಿ ರೂ.ಗೆ ಬಿಕರಿಯಾಗಿದ್ದಾರೆ.
  3. ಅಭಿನವ್ ಮನೋಹರ್: ಬ್ಯಾಟರ್. ಸನ್‌ರೈಸರ್ಸ್‌ ಹೈದ್ರಾಬಾದ್ ತಂಡದಲ್ಲಿ ಆಡುತ್ತಿದ್ದಾರೆ. 3.20 ಕೋಟಿ ರೂ.ಗೆ ತಂಡದ ಪಾಲಾಗಿದ್ದಾರೆ.
  4. ದೇವದತ್ ಪಡಿಕ್ಕಲ್: ಆರ್‌ಸಿಬಿ ತಂಡದಲ್ಲಿದ್ದಾರೆ. 2 ಕೋಟಿ ರೂ. ಮೂಲ ಬೆಲೆಗೆ ಅವರನ್ನು ತಂಡ ಖರೀದಿಸಿದೆ.
  5. ವೈಶಾಕ್ ವಿಜಯಕುಮಾರ್: ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾರೆ. ಅವರನ್ನು 1.80 ಕೋಟಿ ರೂ.ಗೆ ತಂಡ ಖರೀದಿಸಿದೆ.
  6. ಮನೀಶ್ ಪಾಂಡೆ: ಕೆಕೆಆರ್‌ ತಂಡದಲ್ಲಿ ಆಡುತ್ತಿದ್ದಾರೆ. 75 ಲಕ್ಷ ರೂ.ಗೆ ತಂಡ ಸೇರಿದ್ದಾರೆ.
  7. ಕರುಣ್ ನಾಯರ್: ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. 50 ಲಕ್ಷ ರೂ. ಸಂಭಾವನೆಗೆ ತಂಡ ಸೇರಿದ್ದಾರೆ.
  8. ಮನೋಜ್ ಭಾಂಡಗೆ: ಕಳೆದ ಎರಡು ಸೀಸನ್​​ಗಳಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿದ್ದಾರೆ. ಅವರನ್ನು ಈ ಬಾರಿ 30 ಲಕ್ಷ ರೂ. ಮೂಲ ಬೆಲೆಗೆ ತಂಡ ಖರೀದಿಸಿದೆ.
  9. ಪ್ರವೀಣ್ ದುಬೆ: ಸ್ಪಿನ್ನರ್ – ಪಂಜಾಬ್‌ ಕಿಂಗ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. ಅವರನ್ನು 30 ಲಕ್ಷ ರೂ.ಗೆ ಪಂಜಾಬ್ ತಂಡ ಖರೀದಿಸಿದೆ.
  10. ಲವ್​ನೀತ್ ಸಿಸೋಡಿಯಾ: ವಿಕೆಟ್ ಕೀಪರ್ + ಬ್ಯಾಟರ್. ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. ಅವರನ್ನು 30 ಲಕ್ಷ ರೂ. ಮೂಲ ಬೆಲೆಗೆ ತಂಡ ಸೇರಿಸಿಕೊಂಡಿದೆ.
  11. ಮನ್ವಂತ್ ಕುಮಾರ್: ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. 30 ಲಕ್ಷ ರೂ. ಪಡೆದು ತಂಡಕ್ಕೆ ಸೇರಿದ್ದಾರೆ.
  12. ಶ್ರೇಯಸ್ ಗೋಪಾಲ್: ಸ್ಪಿನ್ನರ್. ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. 30 ಲಕ್ಷ ರೂ. ಮೂಲ ಬೆಲೆಗೆ ಅವರನ್ನು ತಂಡ ಖರೀದಿಸಿದೆ.
  13. ಶ್ರೀಜಿತ್ ಕೃಷ್ಣನ್: ವಿಕೆಟ್ ಕೀಪರ್ + ಬ್ಯಾಟರ್. ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದಾರೆ. 30 ಲಕ್ಷ ರೂ. ಮೂಲ ಬೆಲೆಗೆ ತಂಡ ಸೇರಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X