ಹವಾಮಾನ ವೈಪರೀತ್ಯಗಳ ಕಥೆ ಸಾರುವ ವಿನೂತನ ಡಿಜಿಟಲ್‌ ಪ್ರದರ್ಶನ

Date:

Advertisements

ಹವಾಮಾನ ಬದಲಾವಣೆಯ ಬಿಕ್ಕಟ್ಟು ಪ್ರಸ್ತುತ ಎಲ್ಲೆಡೆ ಚರ್ಚಿತವಾಗುತ್ತಿರುವ ವಿಷಯ. ಈಗಾಗಲೇ ಈ ಹವಾಮಾನ ಬದಲಾವಣೆಯ ದುಷ್ಪರಿಣಾಮವನ್ನು ಮನುಕುಲ ಎದುರಿಸಲಾರಂಭಿಸಿದೆ. ಈ ಹವಾಮಾನ ಬದಲಾವಣೆಯ ದುಷ್ಪರಿಣಾಮ ಲಿಂಗ, ವರ್ಗ, ಜಾತಿಗಳ ನಡುವಣ ಇದರ ಸಂಬಂಧ ಮತ್ತು ನಾನಾ ಆಯಾಮಗಳನ್ನು ಸಮಾಜದ ಮುಂದೆ ತೆರೆದಿಡುವ ವಿಶಿಷ್ಟ ವಸ್ತು ಪ್ರದರ್ಶನ ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ಮ್ಯೂಸಿಯಂ ಆಫ್‌ ಆರ್ಟ್‌ ಆಂಡ್‌ ಫೋಟೋಗ್ರಫಿಯಲ್ಲಿ ಶನಿವಾರ ಆರಂಭಗೊಂಡಿದೆ. ಪ್ರದರ್ಶನ ಭಾನುವಾರವೂ ಇರಲಿದೆ.

ಅಜರ್ಬೈಜಾನ್ ದೇಶದ ರಾಜಧಾನಿ ಬಕು ನಗರದಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ನಡೆಸಲಾಗುತ್ತಿರುವ ಸಿಒಪಿ 29 ಸಮ್ಮೇಳನದಲ್ಲಿ ಜಾಗತಿಕ ನಾಯಕರು ಹವಾಮಾನ ಕಾಳಜಿ ಮತ್ತು ಇದರಿಂದ ಮನುಕುಲ ರಕ್ಷಿಸಲು ನಿರ್ದಿಷ್ಟ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕಾದ ಗುರಿಗಳನ್ನು ಚರ್ಚಿಸುತ್ತಿರುವ ಸಂದರ್ಭದಲ್ಲಿ ಗ್ರೀನ್‌ಪೀಸ್ ಇಂಡಿಯಾ ಮತ್ತು ಮ್ಯೂಸಿಯಂ ಆಫ್ ಆರ್ಟ್ ಅಂಡ್ ಫೋಟೋಗ್ರಫಿ (ಎಂ ಎ ಪಿ /MAP) ಜೊತೆಯಾಗಿ “ಅಪಾಯದ ಅಂಚಿನಲ್ಲಿ ಹವಾಮಾನ: ವಿವಿಧ ಲಿಂಗ, ಜಾತಿ, ವರ್ಗಗಳ ಅಸಹಾಯಕತೆ” ಎಂಬ ವಿಷಯದ ಕುರಿತಾದ ವಸ್ತು ಪ್ರದರ್ಶನವನ್ನು ಆಯೋಜಿಸಿದೆ.

ಇಲ್ಲಿ ಹವಾಮಾನ ಬದಲಾವಣೆಯ ನೈಜ ಬಲಿಪಶುಗಳಾದ ಜನರ ಕಥೆಗಳು, ದುರ್ಬಲ ವರ್ಗಗಳು, ಲಿಂಗ, ಮತ್ತು ಜಾತಿಗಳು ಹೇಗೆ ಈ ಬಿಕ್ಕಟ್ಟಿನಿಂದ ಇನ್ನಷ್ಟು ಅಪಾಯದ ಅಂಚಿಗೆ ಸರಿಯುತ್ತಿವೆ ಎಂಬ ವಿಷಯಗಳ ಕುರಿತಾಗಿಯೂ ಚರ್ಚಿಸಲಾಯಿತು. ಹವಾಮಾನ ಬದಲಾವಣೆಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಈ ಜನರು ಎದುರಿಸುತ್ತಿರುವ ಕಷ್ಟ- ನಷ್ಟಗಳು, ಈ ವೈಪರೀತ್ಯಗಳ ನಡುವೆಯೂ ಸಾಗುತ್ತಿರುವ ಅವರ ಬದುಕು ಹಾಗೂ ಈ ಸವಾಲುಗಳನ್ನು ಎದುರಿಸಲು ಅವರು ಮೈಗೂಡಿಸಿಕೊಂಡಿರುವ ಪ್ರತಿರೋಧವನ್ನು ಇಲ್ಲಿ ಡಿಜಿಟಲ್‌ ಮೂಲಕ ಪ್ರದರ್ಶಿಸಲಾಗುತ್ತಿದೆ.

Advertisements

ಈ ವಿಶಿಷ್ಟ ಪ್ರದರ್ಶನದ ಪ್ರಮುಖ ಆಕರ್ಷಣೆ ಎಂದರೆ ಭಾರತದ ವಿವಿಧ ಭಾಗಗಳಲ್ಲಿ ಹವಾಮಾನ ಬದಲಾವಣೆಯ ತೀವ್ರತರದ ಪರಿಣಾಮಗಳಿಗೆ ಬಲಿಪಶುಗಳಾದ ಜನರು, ಅದರ ವಿರುದ್ಧ ಪ್ರತಿರೋಧವಾಗಿ ಬಳಸಿಕೊಂಡ ದೈನಂದಿನ ಬಳಕೆಯ ವಸ್ತುಗಳ ಡಿಜಿಟಲ್ ಮ್ಯೂಸಿಯಂ. ಈ ವಸ್ತುಗಳು ನಮ್ಮ ದೇಶದ ವಿವಿಧ ಭಾಗಗಳಲ್ಲಿ ಹವಾಮಾನ ವೈಪರೀತ್ಯಗಳನ್ನು ಸಹಿಸಿಕೊಂಡ ಜನರ ನೈಜ ಕಥೆಗಳನ್ನು ಹೇಳುತ್ತವೆ.

ತಮ್ಮ ಹಾಸ್ಯ ಮತ್ತು ಸೃಜನಶೀಲತೆಗಾಗಿ ಇನ್‌ಸ್ಟಾಗ್ರಾಮ್ ನಲ್ಲಿ ಮೀನ್ಕರಿ ಎಂದೇ ಜನಪ್ರಿಯವಾಗಿರುವ ಶಬರಿ ವೇಣು ಅವರು ಈ ವಿಶಿಷ್ಟ ಪ್ರದರ್ಶನವನ್ನು ವಿನ್ಯಾಸಗೊಳಿಸಿದ್ದಾರೆ. ‘ಇಲ್ಲಿ ಹೇಳಲಾಗುತ್ತಿರುವ ಕಥೆಗಳಿಗೆ ಜೀವ ತುಂಬಲು ನಾವು ವಸ್ತುಸಂಗ್ರಹಾಲಯದಲ್ಲಿ ಲಭ್ಯವಿರುವ ತಂತ್ರಜ್ಞಾನದೊಂದಿಗೆ ವಿವಿಧ ದೃಶ್ಯ ಮತ್ತು ಕಥೆ ಹೇಳುವ ತಂತ್ರಗಳನ್ನು ಸಂಯೋಜಿಸಿದ್ದೇವೆ. ಸಾಮಾನ್ಯವಾಗಿ ಹವಾಮಾನ ವಿಪತ್ತುಗಳ ಕುರಿತಾದ ಸುದ್ದಿಗಳು ಈ ವಿಪತ್ತಿಗೆ ಬಲಿಯಾದವರ ಸಂಖ್ಯೆಗಳು ಮತ್ತು ಹಾನಿಯ ಅಂಕಿಅಂಶಗಳನ್ನು ಕಡಿಮೆ ಪ್ರಮಾಣದಲ್ಲಿ ತೋರಿಸುತ್ತವೆ. ಈ ಪ್ರದರ್ಶನದ ಮೂಲಕ, ಮರೆಮಾಚಲಾದ ನೈಜ ಸಂಖ್ಯೆಗಳು ಹಾಗು ಮಾನವೀಯ ಅಂತಃಕರಣ ಕಲಕುವ ಕಥೆಗಳನ್ನು ಹಂಚಿಕೊಳ್ಳಲು ನಮಗೆ ಅವಕಾಶ ಸಿಕ್ಕಿದೆ’ ಎಂದು ಶಬರಿ ಹೇಳುತ್ತಾರೆ.

ಡಿಜಿಟಲ್ ಪ್ರದರ್ಶನ ವೀಕ್ಷಣೆ

‘ಹವಾಮಾನ ಬದಲಾವಣೆ ತಗ್ಗಿಸುವ ಸಂಬಂಧ ಅಗತ್ಯವಿರುವ ಹಣಕಾಸು ನೆರವಿನ ಲಭ್ಯತೆ ಹಾಗೂ ಈ ನಿಟ್ಟಿನಲ್ಲಿ ನಿರ್ಣಾಯಕ ನಿರ್ಣಯವೊಂದರ ನಿರೀಕ್ಷೆಯನ್ನು ಇಡೀ ಜಗತ್ತು ಬಕುವಿನಲ್ಲಿ ನಡೆಯುತ್ತಿರುವ ಸಮ್ಮೇಳನದಿಂದ ನಿರೀಕ್ಷಿಸುತ್ತಿದೆ. ಈ ನಿರ್ಣಾಯಕ ಹಂತದಲ್ಲಿ ಈ ಮ್ಯೂಸಿಯಂ ಆಫ್ ಮೆಮೊರೀಸ್ ಒಂದು ನೈಜ ಸತ್ಯವನ್ನು ಎತ್ತಿ ತೋರಿಸುತ್ತದೆ. ವಿಪರ್ಯಾಸ ಎಂದರೆ ಸಾಮಾನ್ಯವಾಗಿ ಹವಾಮಾನ ವಿಪತ್ತುಗಳಿಂದ ಹೆಚ್ಚು ಬಿಕ್ಕಟ್ಟು, ಸಮಸ್ಯೆ ಎದುರಿಸುತ್ತಿರುವವರು ವಾಸ್ತವದಲ್ಲಿ ಈ ಸಮಸ್ಯೆಗೆ ಕಾರಣೀಭೂತರಾಗಿರುವುದಿಲ್ಲ. ಈ ಸಮಸ್ಯೆಗೆ ಅವರ ಪಾಲುದಾರಿಕೆ ತೀರ ಕಡಿಮೆ ಪ್ರಮಾಣದ್ದಾಗಿರುತ್ತದೆ. ಇದಕ್ಕೆ ಪ್ರಮುಖ ಕಾರಣವಾಗಿರುವ ಫಾಸಿಲ್ /ಪಳೆಯುಳಿಕೆ ಇಂಧನ ಉದ್ಯಮವು ಯಾವುದೇ ಹೊಣೆಗಾರಿಕೆಯಿಲ್ಲದೆ ಲಾಭದಾಯಕವಾಗಿ ಮುಂದುವರಿಯುತ್ತಿದೆ. ಈ ಕಾರಣದಿಂದಾಗಿ, ಹವಾಮಾನ ವೈಪರೀತ್ಯ ಬಿಕ್ಕಟ್ಟು ಎದುರಿಸುತ್ತಿರುವ ಪ್ರದೇಶಗಳ ಸಮುದಾಯಗಳಿಗೆ ಹೆಚ್ಚಿನ ಹಾಗು ತುರ್ತು ಬೆಂಬಲದ ಅಗತ್ಯವಿದೆʼʼ ಎನ್ನುತ್ತಾರೆ ಗ್ರೀನ್‌ಪೀಸ್ ಇಂಡಿಯಾದ ಪ್ರಚಾರಕಿ ಅಮೃತ ಎಸ್ ಎನ್.

ಹವಾಮಾನ, ಜಾತಿ ಮತ್ತು ಲಿಂಗತ್ವಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತೆ ಮತ್ತು ಚಲನಚಿತ್ರ ನಿರ್ಮಾಪಕಿ ಭೂಮಿಕಾ ಸರಸ್ವತಿ ಅವರು ಕಾರ್ಯಕ್ರಮದಲ್ಲಿ ಕಾರ್ಯಾಗಾರವೊಂದನ್ನು ನಡೆಸಿದ್ದು, ಇದು ತಾಪಮಾನದ ತೀವ್ರ ಏರಿಕೆಯ ಪರಿಣಾಮ ನಮ್ಮ ದೈನಂದಿನ ಬದುಕಿನಲ್ಲಿ ಲಿಂಗ, ಜಾತಿ ಮತ್ತು ಅಸ್ತಿತ್ವದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ದಾಖಲೀಕರಣದ ಮೇಲೆ ಬೆಳಕು ಚೆಲ್ಲಿತು. ಪ್ರಸ್ತುತ ಮನುಕುಲವು ಎದುರಿಸುತ್ತಿರುವ ಹಲವು ಬಿಕ್ಕಟ್ಟುಗಳಲ್ಲಿರುವ ಲಿಂಗತ್ವದ ಆಯಾಮಗಳು ಮತ್ತು ಅವು ಸಮಾಜದಲ್ಲಿಈಗಾಗಲೇ ಅಸ್ತಿತ್ವದಲ್ಲಿರುವ ಅಸಮಾನತೆಗಳನ್ನು ಹೇಗೆ ಉಲ್ಬಣಗೊಳಿಸುತ್ತಿವೆ ಎಂಬುದನ್ನು ಈ ಕಾರ್ಯಕ್ರಮವು ಪ್ರತಿಬಿಂಬಿಸಿತು.

ಡಿಜಿಟಲ್ ಪ್ರದರ್ಶನ ೧

ಈ ಎರಡು ದಿನಗಳ ಕಾರ್ಯಕ್ರಮ ಸ್ಟೋರಿ ಸರ್ಕಲ್‌- ಕಥಾ ಸಮಯವನ್ನೂ ಸಹ ಒಳಗೊಂಡಿದೆ. ಸಮುದಾಯದ ಕಥೆಗಾರರು ಹವಾಮಾನ ಬಿಕ್ಕಟ್ಟಿನ ಸಂದರ್ಭದಲ್ಲಿ ತಾವು ಎದುರಿಸಿದ ನಷ್ಟ, ಕಂಡುಕೊಂಡ ಭರವಸೆ ಮತ್ತು ಸವಾಲುಗಳನ್ನು ಮೆಟ್ಟಿನಿಂತ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು. ಮೀನುಗಾರ ಬಾದಲ್ ದಾಸ್ ಅವರ ಕಥೆಯ ಮೂಲಕ ಸುಂದರಬನ್ಸ್‌ನ ಸೌಂದರ್ಯ ಮತ್ತು ಸೂಕ್ಷ್ಮತೆಯನ್ನು ಅನುಭವಿಸಲು ವೀಕ್ಷಕರಿಗೆ ಅನುವು ಮಾಡಿಕೊಡುವ ತಲ್ಲೀನಗೊಳಿಸುವ ವರ್ಚುವಲ್ ರಿಯಾಲಿಟಿ ವಿಡಿಯೋವನ್ನು ಸಹ ಇಲ್ಲಿ ಪ್ರದರ್ಶಿಸಲಾಯಿತು.

ಗ್ರೀನ್‌ಪೀಸ್ ಇಂಡಿಯಾ ಬಗ್ಗೆ

ಗ್ರೀನ್‌ಪೀಸ್ ಇಂಡಿಯಾ ಜಾಗತಿಕ ಪರಿಸರ ಸಂಘಟನೆಯ ಒಂದು ಭಾಗವಾಗಿದ್ದು, ಅಡ್ವೊಕೆಸಿ, ಪ್ರಚಾರಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ತುರ್ತಾಗಿ ಪರಿಹರಿಸಬೇಕಾಗಿರುವ ಪರಿಸರ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಸಂಸ್ಥೆಯಾಗಿದೆ.

ಮ್ಯೂಸಿಯಂ ಆಫ್ ಆರ್ಟ್ ಅಂಡ್ ಫೋಟೋಗ್ರಫಿ (MAP)
MAP ಎಂಬುದು ಭಾರತದ ಬೆಂಗಳೂರಿನಲ್ಲಿರುವ ಲಾಭರಹಿತ, ಖಾಸಗಿ ಕಲಾ ವಸ್ತುಸಂಗ್ರಹಾಲಯವಾಗಿದ್ದು, ಇದು ಹನ್ನೆರಡನೇ ಶತಮಾನದಿಂದ ಈವರೆಗೆ ವ್ಯಾಪಕವಾಗಿರುವ ವಿವಿಧ ಭಾರತೀಯ ಕಲೆಗಳು, ವಸ್ತ್ರಗಳು, ಛಾಯಾಗ್ರಹಣ, ಕರಕುಶಲ ವಸ್ತುಗಳು ಮತ್ತು ಕಲಾಕೃತಿಗಳ ಸಂಗ್ರಹವನ್ನು ಹೊಂದಿದೆ. ಶಾಶ್ವತ ಪ್ರದರ್ಶನದ ಪರಿಕಲ್ಪನೆ ಅಡಿಯಲ್ಲಿ ಮಾಡಲಾದ ಗೋಚರ/ಅಗೋಚರ (ವಿಸಿಬಲ್/ಇನ್‌ವಿಸಿಬಲ್) ಎಂಬ ಪರಿಕಲ್ಪನೆಯು ಇತ್ತೀಚಿನ ಹೊಸ ಸೇರ್ಪಡೆಯಾಗಿದ್ದು ಇದು ಕಲೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಪ್ರತಿನಿಧಿಸುತ್ತದೆ.

ಕಾರ್ಯಕ್ರಮದ ವಿವರ
● ಸ್ಥಳ: ಮ್ಯೂಸಿಯಂ ಆಫ್‌ ಆರ್ಟ್‌ ಆಂಡ್‌ ಫೋಟೋಗ್ರಫಿ (MAP) , ನಂಬರ್‌ 22, ಕಸ್ತೂರಿ ಬಾ ರಸ್ತೆ, ಶಾಂತಲಾ ನಗರ, ಬೆಂಗಳೂರು.
● ದಿನಾಂಕ: ನವೆಂಬರ್‌ 16- 17
● ಸಮಯ : ಬೆಳಿಗ್ಗೆ 11 ಗಂಟೆ ನಂತರ

05b4125da454a168537d9df817254267
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ...

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

Download Eedina App Android / iOS

X