ಬ್ರೇಕ್ ಒತ್ತುವ ಬದಲು ಎಕ್ಸ್ಲೇಟರ್ ಒತ್ತಿದ ಪರಿಣಾಮ ಎಸ್ಯುವಿ ವಾಹನ ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹುಳಿಮಾವು ಕಾಳೇನ ಅಗ್ರಹಾರ ಬಳಿ ಘಟನೆ ನಡೆದಿದ್ದು, ನಾಲ್ವರು ಬೈಕ್ ಸವಾರರು ಗಾಯಗೊಂಡಿದ್ದಾರೆ.
ಬೆಂಗಳೂರು ಹುಳಿಮಾವು ಬಳಿಯ ಕಾಳೇನ ಅಗ್ರಹಾರದಲ್ಲಿ ಸಿಗ್ನಲ್ ಇದ್ದ ಕಾರಣ ವಾಹನಗಳು ನಿಂತಿವೆ. ಈ ವೇಳೆ, ಹಿಂದಿನಿಂದ ಬಂದ ಎಸ್ಯುವಿ ಕಾರ್ನ ಚಾಲಕ ಸಿಗ್ನಲ್ ಬಿದ್ದದರಿಂದ ವಾಹವನ್ನು ನಿಲ್ಲಿಸಲು ಬ್ರೇಕ್ ಒತ್ತುವ ಬದಲಾಗಿ, ಎಕ್ಸ್ಲೇಟರ್ ಒತ್ತಿದ್ದಾನೆ. ಈ ವೇಳೆ, ಮುಂದುಗಡೆ ನಿಂತಿದ್ದ ಎರಡು ಬೈಕ್ಗಳಿಗೆ ವಾಹನ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರರು ಮತ್ತು ಹಿಂಬದಿ ಸವಾರರು ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ನಾಲ್ವರು ಗಾಯಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಕಿನ ಹಬ್ಬ | ಮೊದಲ ದಿನ ಪಟಾಕಿ ಸಿಡಿತಕ್ಕೆ 26 ಜನರಿಗೆ ಗಾಯ
ಈ ದೃಶ್ಯ ಮತ್ತೊಂದು ಕಾರಿನ್ ಡ್ಯಾಶ್ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಹುಳಿಮಾವು ಸಂಚಾರ ಠಾಣೆಯ ಸಿಬ್ಬಂದಿಯೊಬ್ಬರು, “ಸಿಗ್ನಲ್ ಬಿದ್ದಾಗ ಬ್ರೇಕ್ ಹಾಕುವ ಬದಲಾಗಿ, ಎಕ್ಸ್ಲೇಟರ್ ಒತ್ತಿದ್ದಾರೆ. ಇದರಿಂದ ಅವಘಡ ಸಂಭವಿಸಿದೆ. ಕಾರ್ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ” ಎಂದರು.
VIDEO | Four people were injured after a SUV hit three bikes near Hulimavu in Bengaluru. Police have registered a case and an investigation is underway. More details are awaited. pic.twitter.com/M8Sqg1ysaO
— Press Trust of India (@PTI_News) November 13, 2023
ಈ ಘಟನೆಗೆ ಸಂಬಂಧಿಸಿದಂತೆ ಹುಳಿಮಾವು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.