₹51 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆ, ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೀಗ ಜಡಿದಿದೆ.
ಬಾಕಿ ಉಳಿಸಿಕೊಂಡಿದ್ದ ತೆರಿಗೆ ಹಣವನ್ನು ಒಂದು ಬಾರಿ ಪೂರ್ತಿ ಪಾವತಿ ಮಾಡುವಂತೆ ಮಂತ್ರಿಮಾಲ್ಗೆ ಬಿಬಿಎಂಪಿ ತಾಕೀತು ಮಾಡಿತ್ತು. ಅಲ್ಲದೇ, ಸಮಯಾವಕಾಶ ಕೂಡ ನೀಡಿತ್ತು. ಆದರೆ, ಈ ಮದ್ಯೆ ಮತ್ತೆ ಮಾಲ್ ₹32 ಕೋಟಿ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆ, ಬಿಬಿಎಂಪಿ ಕ್ರಮಕ್ಕೆ ಮುಂದಾಗಿದೆ.
ಶನಿವಾರ ವಾರಾಂತ್ಯದ ದಿನವಾಗಿರುವುದರಿಂದ ಮಂತ್ರಿ ಮಾಲ್ ವಹಿವಾಟು ಹೆಚ್ಚಾಗಿರುತ್ತದೆ. ಆದರೆ, ವಾರಾಂತ್ಯದ ದಿನವೇ ಮಾಲ್ನ ಮುಖ್ಯ ದ್ವಾರಗಳಿಗೆ ಬೀಗ ಹಾಕುವ ಮೂಲಕ ಬಿಬಿಎಂಪಿ ಮಂತ್ರಿ ಮಾಲ್ಗೆ ಬಿಸಿ ಮುಟ್ಟಿಸಿದೆ.
ಈ ಹಿಂದೆಯೂ ಮಂತ್ರಿ ಮಾಲ್ ಹಲವು ಬಾರಿ ತೆರಿಗೆ ಬಾಕಿ ಉಳಿಸಕೊಂಡು ನಿರ್ಬಂಧಕ್ಕೊಳಗಾಗಿತ್ತು. ಮಾರ್ಚ್ 16ರ ಮುಂಜಾನೆಯೇ ಮಾಲ್ಗೆ ಬೀಗ ಹಾಕಲಾಗಿದ್ದು, ಲೈಸೆನ್ಸ್ ರದ್ದು ಮಾಡಲಾಗಿದೆ.
ಈ ಹಿಂದೆಯೂ ಅನೇಕ ಬಾರಿ ತೆರಿಗೆ ವಿಚಾರವಾಗಿ ಮಂತ್ರಿ ಮಾಲ್ಗೆ ಬೀಗ ಹಾಕಲಾಗಿತ್ತು. ಇದೀಗ, ಮತ್ತೆ ಶನಿವಾರ ಮುಂಜಾನೆ ಬಿಬಿಎಂಪಿ ಅಧಿಕಾರಿಗಳು, ಮಾರ್ಷಲ್ ಹಾಗೂ ಪೊಲೀಸರ ಬಿಗಿ ಭದ್ರತೆಯಲ್ಲಿ ಮಾಲ್ ಮುಖ್ಯ ಪ್ರವೇಶ ದ್ವಾರಕ್ಕೆ ಬೀಗ ಹಾಕಿದ್ದಾರೆ. ಜತೆಗೆ, ನೋಟಿಸ್ ಕೂಡ ಅಂಟಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾನವ ಕಳ್ಳಸಾಗಣೆ ಆರೋಪ; ಎನ್ಸಿಪಿಸಿಆರ್ ದಾಳಿ ವೇಳೆ 20 ಬಾಲಕಿಯರು ಪತ್ತೆ
ಬಿಬಿಎಂಪಿ ಕಾಯ್ದೆ 2020ರ ಕಲಂ 156 ಹಾಗೂ ದಿನಾಂಕ 2023ರ ಡಿಸೆಂಬರ್ 6ರ ಸುತ್ತೊಲೆಯಂತೆ, ನಿಮ್ಮ ವ್ಯಾಪಾರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ಬಿಬಿಎಂಪಿ ಆದೇಶ ಮೇರೆಗೆ ಬಾಕಿ ಆಸ್ತಿ ತೆರಿಗೆಗಳನ್ನು ಪಾವತಿಸದ ಕಾರಣಕ್ಕಾಗಿ ಆಸ್ತಿಯನ್ನು ಸೀಲ್ ಮಾಡಲಾಗಿದೆ ಎಂದು ಬ್ಯಾನರ್ ಅಳಡಿಸಲಾಗಿದೆ.