ಸೈಬರ್ ವಂಚನೆ | ₹15 ಸಾವಿರಕ್ಕೆ ಹಳೇ ಬೆಡ್ ಮಾರಲು ಹೋಗಿ ₹68 ಲಕ್ಷ ಕಳೆದುಕೊಂಡ ಸಾಫ್ಟ್‌ವೇರ್‌ ಉದ್ಯೋಗಿ

Date:

Advertisements

ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ ದಿನಕ್ಕೊಂದು ಸೈಬರ್ ವಂಚನೆ ಪ್ರಕರಣಗಳು ನಡೆಯುತ್ತಲೇ ಇವೆ. ಬೆಂಗಳೂರು ನಗರ ಪೊಲೀಸ್ ಇಲಾಖೆ ಯಾವುದೇ ರೀತಿಯ ಓಟಿಪಿ ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿದ್ದರೂ ಸಹ ಇಂತಹ ಕೃತ್ಯಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಇದೀಗ, ಓಎಲ್‌ಎಕ್ಸ್‌ನಲ್ಲಿ ₹15 ಸಾವಿರಕ್ಕೆ ತಮ್ಮ ಹಳೆಯ ಬೆಡ್ ಮಾರಾಟ ಮಾಡಲು ಹೋಗಿ ವ್ಯಕ್ತಿಯೊಬ್ಬರು ಬರೋಬ್ಬರಿ ₹68 ಲಕ್ಷ ಕಳೆದುಕೊಂಡ ಪ್ರಕರಣ ವರದಿಯಾಗಿದೆ.

ಸಂತೋಷ್ (ಹೆಸರು ಬದಲಾಯಿಸಲಾಗಿದೆ) ಹಣ ಕಳೆದುಕೊಂಡವರು. ಇವರು ಬೆಂಗಳೂರಿನ ಖಾಸಗಿ ಸಾಫ್ಟ್‌ವೇರ್‌ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ನೆಲೆಸಿದ್ದಾರೆ.

ಇವರು ತಮ್ಮ ಹಳೆಯ ಬೆಡ್‌ ಮಾರಾಟ ಮಾಡಲು ಮುಂದಾಗಿದ್ದರು. ಈ ಹಿನ್ನೆಲೆ, ಕೆಲವು ಫೋಟೋಗಳ ಸಮೇತ ₹15 ಸಾವಿರಕ್ಕೆ ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದರು.

Advertisements

ಇದನ್ನು ಕಂಡ ರೋಹಿತ್ ಮಿಶ್ರಾ ಎಂಬ ವ್ಯಕ್ತಿ ಡಿಸೆಂಬರ್ 6ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ಸಂತೋಷ್ ಅವರಿಗೆ ಕರೆ ಮಾಡಿ ಬೆಡ್‌ ತೆಗೆದುಕೊಳ್ಳುವ ಬಗ್ಗೆ ವಿಚಾರಿಸುತ್ತಾನೆ ಹಾಗೂ ಇಂದಿರಾನಗರದಲ್ಲಿ ತನ್ನದು ಫರ್ನಿಚರ್ ಮಳಿಗೆ ಎಂದು ಹೇಳಿಕೊಂಡಿದ್ದಾನೆ.

ಬೆಡ್‌ ಖರೀದಿಸುತ್ತೇನೆ ಎಂದು ಹೇಳಿದ ಈತ ಡಿಜಿಟಲ್‌ ಮೂಲಕ ಹಣ ಪಾವತಿ ಮಾಡುತ್ತೇನೆ ಎಂದು ಹೇಳಿದ್ದಾನೆ. ಸ್ವಲ್ಪ ಸಮಯದ ಬಳಿಕ ಕರೆ ಮಾಡಿ ನಿಮಗೆ ಹಣ ಪಾವತಿಯಾಗುತ್ತಿಲ್ಲ. ಹಾಗಾಗಿ, ನಿಮ್ಮ ಖಾತೆಯಿಂದ ₹5 ಕಳಿಸಿ, ಅದಕ್ಕೆ ನಾನು ಹಣ ಹಾಕುತ್ತೇನೆ ಎಂದು ಹೇಳಿದ್ದಾನೆ.

ಇದನ್ನು ನಂಬಿದ ಸಂತೋಷ್ ಆತನಿಗೆ ₹5 ಕಳಿಸಿದ್ದಾನೆ. ಆ ಕಡೆಯಿಂದ ಆತ ಪ್ರತಿಯಾಗಿ ₹10 ಕಳಿಸಿದ್ದಾನೆ. ಮತ್ತೆ ಹಣ ಕಳಿಸಲು ತೊಂದರೆಯಾಗುತ್ತಿದೆ ಎಂದು ತಿಳಿಸಿದ ಆತ ₹5000 ಕಳಿಸುವಂತೆ ಕೇಳಿದ್ದಾನೆ. ಅದರಂತೆ ಹಣ ಕಳಿಸಿದ ಸಂತೋಷ್‌ನಿಗೆ ಆತ ಪ್ರತಿಯಾಗಿ ₹10,000 ಕಳಿಸಿದ್ದಾನೆ. ಬಳಿಕ ₹7500 ಕಳಿಸಿದರೆ ₹15,000 ಕಳಿಸುವುದಾಗಿ ಹೇಳಿದ್ದಾನೆ. ಅದರಂತೆ ಸಂತೋಷ್ ₹7,500 ಕಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಾಮಾನ್ಯ ಸ್ಥಿತಿಗೆ ಮರಳಿದ ಹಸಿರು ಮಾರ್ಗದ ಮೆಟ್ರೋ ಸಂಚಾರ

ಈ ವೇಳೆ ತಪ್ಪಿ ಸಂತೋಷ್ ₹30,000 ಸಾವಿರ ಕಳುಹಿಸಿದ್ದಾರೆ. ಈ ಬಗ್ಗೆ ಮಿಶ್ರಾಗೆ ತಿಳಿಸುತ್ತಾರೆ. ಇದಕ್ಕೆ ಮಿಶ್ರಾ ತಾನು ಕಳಿಸುವ ಲಿಂಕ್ ಕ್ಲಿಕ್ ಮಾಡಿ ತನಗೆ ಒಟಿಪಿ ಕಳಿಸಿ ಎಂದು ಸಂತೋಷ್‌ಗೆ ಹೇಳಿದ್ದಾನೆ.

ಅದನ್ನು ನಂಬಿದ ಸಂತೋಷ್ ಆತ ಹೇಳಿದಂತೆ ನಡೆದುಕೊಂಡಿದ್ದಾನೆ. ಇದಾದ ಬಳಿಕ ತಾಂತ್ರಿಕ ದೋಷ ಎಂಬ ನೆಪ ಹೇಳಿ ಮಿಶ್ರಾ ಲಿಂಕ್‌ ಕಳಿಸಿ ಒಟಿಪಿ ಕೇಳಿದ್ದಾನೆ. ಇದರಿಂದ ಸಂತೋಷ್ ಹಂತಹಂತವಾಗಿ ತನ್ನ ಖಾತೆಯಿಂದ ಹಣ ಕಳೆದುಕೊಂಡಿದ್ದಾರೆ.

ಮೊದಮೊದಲು ಸಾವಿರ ಲೆಕ್ಕದಲ್ಲಿ ಲಪಟಾಯಿಸುತ್ತಿದ್ದ ಹಣ, ಬಳಿಕ ಲಕ್ಷಾಂತರ ಹಣವನ್ನು ಆತ ಪೀಕಲು ಆರಂಭಿಸಿದ್ದನು. ಬಳಿಕ ಸಂತೋಷ್‌ಗೆ ತಾನು ಮೋಸ ಹೋಗಿರುವುದು ತಿಳಿದುಬಂದಿದೆ. ಅಂತಿಮವಾಗಿ ಸಂತೋಷ್‌ ₹68 ಲಕ್ಷ ಕಳೆದುಕೊಂಡಿದ್ದಾರೆ.

ಐಎಂಪಿಎಸ್ ಟ್ಪಾನ್ಸ್ ಫರ್ ಮೂಲಕ ಸೈಬರ್ ಕಳ್ಳ ಹಣ ಲಪಟಾಯಿಸುತ್ತಿದ್ದನು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X