ತಮಿಳುನಾಡಿನಲ್ಲಿ ‘ಕವಿ ಸರ್ವಜ್ಞರ ಜನ್ಮದಿನ’ ಆಚರಿಸಿದ ದಿನೇಶ್ ಗುಂಡೂರಾವ್ ಅಭಿಮಾನಿಗಳು

Date:

Advertisements

ರಾಜಧಾನಿ ಬೆಂಗಳೂರಿನಲ್ಲಿ ನಡೆದ ಕವಿ ತಿರುವಳ್ಳುವರ್ ಅವರ ಜನ್ಮ ದಿನಾಚರಣೆ ಮಾದರಿಯಲ್ಲಿಯೇ ತಮಿಳುನಾಡಿನಲ್ಲೂ ಕನ್ನಡದ ಸಂತ ಕವಿ ಸರ್ವಜ್ಞ ಅವರ ಜನ್ಮದಿನಾಚರಣೆ ಆಚರಿಸಲಾಗಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಮಾನಿಗಳು ಸಮೃದ್ಧ ಕರ್ನಾಟಕ ವೇದಿಕೆ ಹಾಗೂ ಸರ್ವಜ್ಞ ತಿರುವಳ್ಳುವರ್ ಸೌಹಾರ್ದ ವೇದಿಕೆ ಹೆಸರಲ್ಲಿ ಇಂದು ತಮಿಳುನಾಡಿಗೆ ತೆರಳಿ ಸರ್ವಜ್ಞ ಅವರ ಜನ್ಮದಿನಾಚರಣೆ ಆಚರಿಸಿದರು.

ತಮಿಳುನಾಡಿನ ಚೆನ್ನೈ ನಗರದ ಜೀವ ಪಾರ್ಕ್‌ನಲ್ಲಿರುವ ಸರ್ವಜ್ಞ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕನ್ನಡದ ಸಂತ ಸರ್ವಜ್ಞರಿಗೆ ನಮನ ಸಲ್ಲಿಸಿದರು. ತಮಿಳು ನೆಲದಲ್ಲಿ ಇಂದು ಕನ್ನಡದ ಕಂಪು ಪಸರಿಸಿತ್ತು.
ಸಮೃದ್ದ ಕರ್ನಾಟಕ ಹಾಗೂ ಸರ್ವಜ್ಞ ತಿರುವಳ್ಳುವರ್ ಸೌಹಾರ್ದ ವೇದಿಕೆಗಳು ಇಬ್ಬರು ಶ್ರೇಷ್ಠಕವಿಗಳ ಜನ್ಮದಿನಾಚರಣೆಯನ್ನ ಅರ್ಥಪೂರ್ಣವಾಗಿ ಆಚರಿಸಿಕೊಂಡು‌ ಬರುತ್ತಿರುವುದು ಶ್ಲಾಘನೀಯ.

Advertisements
WhatsApp Image 2025 02 20 at 1.21.03 PM

ಈ ಸುದ್ದಿ ಓದಿದ್ದೀರಾ?:ದಾವಣಗೆರೆ | ಸಮ ಸಮಾಜ ಬಯಸಿದ್ದ ಸಾಕ್ಷಿಪ್ರಜ್ಞೆ ತ್ರಿಪದಿ ಬ್ರಹ್ಮ ಸರ್ವಜ್ಞ; ಪ್ರೊ. ಚಿತ್ತಯ್ಯ ಪೂಜಾರ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ತ್ರಿಪದಿಗಳ ಮೂಲಕ ಸಮಾಜದ ಕೊಳಕನ್ನು ಹೊರಹಾಕಿದ, ಜಾತಿ ವ್ಯವಸ್ಥೆಯನ್ನು ವಿಡಂಬನೆ ಮಾಡಿ ಮಾನವೀಯ ಮೌಲ್ಯ ಬಿತ್ತಿದ್ದ ಮಹಾನ್ ಸಂತರನ್ನು ಗೌರವದಿಂದ ಸ್ಮರಿಸೋಣ ಎಂದು ಕರೆ ನೀಡಿ, ನಾಡಿನ ಸಮಸ್ತ ಜನತೆಗೆ ತ್ರಿಪದಿ ಬ್ರಹ್ಮ ಎಂದು ಪ್ರಸಿದ್ಧಿ ಪಡೆದ ಸಮಾಜ ಸುಧಾರಕರಾದ ಕವಿ ಸರ್ವಜ್ಞ ಅವರ ಜನ್ಮದಿನದ ಶುಭಾಶಯ ಕೋರಿದರು.

WhatsApp Image 2025 02 20 at 1.21.01 PM
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X