ಸಂಕ್ರಾಂತಿ | ತರಕಾರಿ, ಹೂ-ಹಣ್ಣು ಖರೀದಿಗೆ ಮುಗಿಬಿದ್ದ ಜನ; ಬೆಲೆ ಏರಿಕೆ

Date:

Advertisements

ರಾಜ್ಯ ರಾಜಧಾನಿ ಬೆಂಗಳೂರಿನ ಜನತೆ ವರ್ಷದ ಮೊದಲನೆಯ ಹಬ್ಬ, ಸಂಕ್ರಾಂತಿ ಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡೋಕೆ ಸಿದ್ಧರಾಗಿದ್ದಾರೆ. ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿ ಮಾಡೋಕೆ ನಗರದ ಜನತೆ ಕೆ.ಆರ್‌.ಮಾರುಕಟ್ಟೆ ಸೇರಿದಂತೆ ಹಲವೆಡೆ ಮುಗಿಬಿದ್ದಿದ್ದಾರೆ. ಈ ನಡುವೆ ತರಕಾರಿ, ಹೂ, ಹಣ್ಣು ಬೆಲೆ ಏರಿಕೆ ಬಿಸಿ ತಟ್ಟಿದಂತಾಗಿದೆ. ಈ ಬಾರಿ‌ ತರಕಾರಿಗಳ ಬೆಲೆ ₹10 ರಿಂದ ₹20 ಜಾಸ್ತಿಯಾಗಿದ್ದರೇ, ಹಣ್ಣು-ಹೂವಿನ ಬೆಲೆ ಗಗನಕ್ಕೆ ಏರಿದೆ.‌

ಸಂಕ್ರಾಂತಿ ಹಬ್ಬಕ್ಕೆ ಬೇಕಾದ ಹೂ, ಹಣ್ಣು, ತರಕಾರಿಗಳನ್ನ ಖರೀದಿ ಮಾಡಲು ಕೆ.ಆರ್.ಮಾರುಕಟ್ಟೆಗೆ ಜನ ಮುಗಿಬಿದ್ದಿದ್ದಾರೆ.‌ ಹೀಗಾಗಿ ಕೆ.ಆರ್.ಮಾರುಕಟ್ಟೆಯ ಸುತ್ತ-ಮುತ್ತ ವಾಹನ ಸಂಚಾರ ದಟ್ಟಣೆ ಹೆಚ್ಚಳವಾಗಿದೆ.

ತರಕಾರಿಗಳ ಇಗೀನ ದರ

Advertisements

ಕ್ಯಾರೆಟ್ ಬೆಲೆ-60 (ಕೆಜಿ), ಬಟಾಣಿ ಬೆಲೆ-40, ಅವರೆಕಾಯಿ ಬೆಲೆ-80, ಬೀನ್ಸ್-60, ಗೆಣಸು-40, ಮೂಲಂಗಿ-40, ನವಿಲುಕೋಸು ಬೆಲೆ-80, ದಪ್ಪ ಮೆಣಸಿನ ಕಾಯಿ-200, ಆಲೂಗೆಡ್ಡೆ-30, ಹಸಿರುಮೆಣಸಿನಕಾಯಿ-60, ಈರುಳ್ಳಿ ಬೆಲೆ-30, ಬೆಳ್ಳುಳ್ಳಿ-280, ಶುಂಠಿ-120, ಟೋಮಾಟೋ ಬೆಲೆ-25, ತೊಂಡೆಕಾಯಿ ಬೆಲೆ-60, ಬದನೆಕಾಯಿ-50, ಹೀರೇಕಾಯಿ ಬೆಲೆ-40 ಇದೆ.

ಹೂವಿನ ದರ

ಸಂಪಿಗೆ 400, ಚೆಂಡು ಹೂ 50, ಸೇವಂತಿಗೆ 150, ಕಾಕಡ 500, ಕನಕಾಂಬರ 600, ಗಣಿಗಲು ಹೂ 300, ತುಳುಸಿ ಮಾರು 50, ದವನ ಕಟ್ ಗೆ 50, ಕಮಲ ಜೋಡಿ 40, ಮಲ್ಲಿಗೆ 1600, ಗುಲಾಬಿ 240,

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರನ್‌ವೇನಲ್ಲಿ ಆವರಿಸಿಕೊಂಡ ಮಂಜು; 34 ವಿಮಾನಗಳ ಹಾರಾಟ ವ್ಯತ್ಯಯ

ಹಣ್ಣುಗಳ ಬೆಲೆ

ಸೇಬು ಕೆಜಿಗೆ 120, ಆರೆಂಜ್ 50, ದ್ರಾಕ್ಷಿ 100, ದಾಳಿಂಬೆ ಕೆಜಿಗೆ 180 ರಿಂದ 140, ಸಪೋಟ ಕೆಜಿಗೆ 100, ಕಿವಿ ಪ್ರೋಟ್ ಕೆಜಿಗೆ 100, ಅನಾಸಸ್ ಕೆಜಿಗೆ ₹50 – 40, ಮೊಸಂಬಿ ಕೆಜಿಗೆ ₹120-125, ಕಪ್ಪ ದ್ರಾಕ್ಷಿ ₹200-200, ಬಾಳೆಹಣ್ಣು ₹70-60, ಕೋವಾ ಕಣ್ಣ ₹120-60, ಗ್ರೀನ್ ಆ್ಯಪಲ್ ₹240-300, ಕಬ್ಬು ಜೋಡಿ ₹100 ಇದೆ.

“ಪ್ರತಿ ಬಾರಿ ಹಬ್ಬ ಬಂದಾಗಲ್ಲೆಲ್ಲ ಹೂವು, ಹಣ್ಣು ಹಾಗೂ ತರಕಾರಿಗಳ ಬೆಲೆ ಧಿಢೀರನೇ ಏರಿಕೆಯಾಗುತ್ತವೆ. ಹೀಗೆ ಆದರೆ, ಜೀವನ ನಡೆಸೋದು ಹೇಗೆ? ನಮಗೆ ಹಬ್ಬ ಮಾಡಲೇಬೇಕು. ಬೆಲೆಗಳು ಏರಿಕೆ ಆದರೂ ಖರೀದಿ ಮಾಡಬೇಕಾಗುತ್ತದೆ” ಎಂದು ಗ್ರಾಹಕರು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X