ಬಿಜೆಪಿ ಒಂದು ವಿಷಸರ್ಪ, ಎಐಎಡಿಎಂಕೆ ಕಸದ ರಾಶಿ: ಉದಯನಿಧಿ ಸ್ಟಾಲಿನ್

Date:

Advertisements

ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿ ಬಲಪಂಥೀಯರ ಕೋಪಕ್ಕೆ ಗುರಿಯಾಗಿದ್ದ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್, ಈಗ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಬಿಜೆಪಿ ಒಂದು ವಿಷ ಸರ್ಪ’ ಎಂದಿರುವ ಅವರು, ‘ಅದನ್ನು ತಮಿಳುನಾಡಿನಿಂದ ಹೊರಗೆ ಅಟ್ಟಬೇಕಿದೆ’ ಎಂದಿದ್ದಾರೆ.

ಕಡಲೂರಿನಲ್ಲಿ ಡಿಎಂಕೆ ಶಾಸಕ ಸಭಾ ರಾಜೇಂದ್ರನ್ ಅವರ ಮನೆಯ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಅವರು, ತಮಿಳುನಾಡಿನಲ್ಲಿ ಬಿಜೆಪಿ ಮಿತ್ರಪಕ್ಷವಾದ ಎಐಎಡಿಎಂಕೆಯನ್ನೂ ಟೀಕಿಸಿದ್ದಾರೆ. ‘ಎಐಎಡಿಎಂಕೆ ವಿಷಸರ್ಪಕ್ಕೆ ಆಶ್ರಯ ನೀಡಿರುವ ಒಂದು ಕಸದ ರಾಶಿ’ ಎಂದು ಅವರು ವಿಶ್ಲೇಷಿಸಿದ್ದಾರೆ. ‘ಕಸವನ್ನು ಕೂಡ ತೊಲಗಿಸಬೇಕಿದೆ’ ಎಂದು ಅವರು ಕರೆ ನೀಡಿದ್ದಾರೆ.

‘ಕಸದಲ್ಲಿ ಆಶ್ರಯ ಪಡೆದಿರುವ ಸರ್ಪ ನಮ್ಮ ಮನೆಗಳಿಗೆ ನುಗ್ಗುತ್ತಿದೆ. ಹಾವನ್ನು ಇಲ್ಲವಾಗಿಸಬೇಕೆಂದರೆ, ಮೊದಲು ಕಸ ಇಲ್ಲದಂತೆ ನೋಡಿಕೊಳ್ಳಬೇಕು. ಹೀಗಾಗಿ ತಮಿಳುನಾಡಿನ ಜನ 2024ರಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆಯನ್ನು ಕಿತ್ತೊಗೆಯಬೇಕು’ ಎಂದು ಅವರು ಕರೆ ನೀಡಿದರು. ‘2021ರ ವಿಧಾನಸಭಾ ಚುನಾವಣೆಯಲ್ಲಿ ನಾವು ಅವರ ಗುಲಾಮರನ್ನು ಕಿತ್ತೊಗೆದಿದ್ದೇವೆ. 2024ರ ಲೋಕಸಭಾ ಚುನಾವಣೆಯಲ್ಲಿ ಅವರ ಧಣಿಗಳನ್ನೂ ಒದ್ದೋಡಿಸಬೇಕಿದೆ’ ಎಂದರು.

Advertisements

ಸನಾತನ ಧರ್ಮದ ಬಗ್ಗೆ ತಾವು ಮುಂದೆಯೂ ಮಾತನಾಡುತ್ತಲೇ ಇರುವುದಾಗಿ ಇದೇ ಸಂದರ್ಭದಲ್ಲಿ ಅವರು ತಿಳಿಸಿದರು. ‘ತಮಿಳುನಾಡಿನಲ್ಲಿ ಕಳೆದ 100 ವರ್ಷಗಳಿಂದ ಸನಾತನ ಧರ್ಮದ ವಿರುದ್ಧದ ಧ್ವನಿ ಕೇಳಿಬರುತ್ತಿದೆ. ಇನ್ನೂ 200 ವರ್ಷ ನಾವು ಅದನ್ನು ಮುಂದುವರೆಸುತ್ತೇವೆ’ ಎಂದು ಅವರು ನುಡಿದರು.

ಈ ಸುದ್ದಿ ಓದಿದ್ದೀರಾ: ಉದಯನಿಧಿ ಎಂಬ ಉದಯಸೂರ್ಯ!

‘ಸನಾತನ ಧರ್ಮದ ಬಗೆಗಿನ ಟೀಕೆಗಳು ಹೊಸದೇನಲ್ಲ’ ಎಂದ ಉದಯನಿಧಿ, ‘ಡಾ.ಬಿ.ಆರ್.ಅಂಬೇಡ್ಕರ್, ಪೆರಿಯಾರ್, ಕರುಣಾನಿಧಿ ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಸನಾತನ ಧರ್ಮದ ವಿರುದ್ಧ ಮಾತನಾಡಿದ್ದಾರೆ. ಸನಾತನ ಧರ್ಮಕ್ಕೆ ಸಮರ್ಥ ವಿರೋಧ ವ್ಯಕ್ತವಾಗಿದ್ದರಿಂದಲೇ ಮಹಿಳೆಯರು ಹೊಸಿಲು ಬಿಟ್ಟು ಹೊರಬರುವಂತಾಯಿತು, ಸತಿ ಪದ್ಧತಿಯಂಥ ಅನಿಷ್ಟ ಆಚರಣೆಗಳು ಅಂತ್ಯಗೊಂಡವು. ಡಿಎಂಕೆ ಹುಟ್ಟಿಕೊಂಡದ್ದೇ ಅಂಥ ಅನಿಷ್ಟ ಆಚರಣೆಗಳ ವಿರೋಧದ ತಾತ್ವಿಕತೆಯ ಮೇಲೆ. ಆದರೆ, ಈಗ ಬಿಜೆಪಿಯು ನನ್ನ ಹೇಳಿಕೆಗಳನ್ನು ಸಂಪೂರ್ಣವಾಗಿ ತಿರುಚಿ, ನಾನು ಹೇಳದೇ ಇರುವುದನ್ನು ಪ್ರಚಾರ ಮಾಡುತ್ತಿದೆ’ ಎಂದು ಅವರು ಕಿಡಿ ಕಾರಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಣದಲ್ಲಿ ಅಸಮಾಧಾನ : ಎಂಎಲ್ ಸಿ ಕಾರು ತಡೆ ವಾಗ್ವಾದ

ಎಂಎಲ್ ಸಿ ಶರಣಗೌಡ ಪಾಟೀಲ್‌ ಅವರ ಕಾರಿಗೆ ಡಿ ಎಸ್ ಹುಲಗೇರಿ...

ಕಲಬುರಗಿ | ಮೂರು ತಿಂಗಳಿಂದ ಪಾವತಿಯಾಗದ ʼಗೃಹಲಕ್ಷ್ಮೀʼ ಹಣ : ವೆಲ್ಫೇರ್ ಪಾರ್ಟಿ ಆಕ್ರೋಶ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ ಯೋಜನೆಯ ಹಣ...

ಬೆಳಗಾವಿ : ಮೂರು ವರ್ಷದ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ತಂದೆ ತಾಯಿ

ತಾಯಿಯ ಮಡಿಲಿಗೆ ತವಕಿಸುತ್ತಿರುವ ಮೂರು ವರ್ಷದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲಿ ತಂದೆ ತಾಯಿಗಳು...

Download Eedina App Android / iOS

X