ಅರಕಲಗೂಡು ತಾಲ್ಲೂಕಿನ ಸುಳುಗೋಡು ಗ್ರಾಮದಲ್ಲಿ ಸೋಮವಾರ ರೈತರೊಬ್ಬರ ಜಮೀನಿನಲ್ಲಿ ಉಳುಮೆ ಮಾಡುವ ವೇಳೆ, ಜೈನ ತೀರ್ಥಂಕರರ ವಿಗ್ರಹ ಹಾಗೂ ಕೆತ್ತನೆಯುಳ್ಳ ಕಲ್ಲಿನ ಪುರಾತನ ಸ್ತಂಭ ಪತ್ತೆಯಾಗಿದೆ.
ಮಂಜು ಎಂಬ ರೈತ ಸೋಮವಾರ ಬೆಳಿಗ್ಗೆ ಟ್ರಾಕ್ಟರ್ ಬಳಸಿ ಉಳುಮೆ ಮಾಡುವಾಗ, ಈ ಕಲಾಕೃತಿಗಳು ನೆಲದಡಿಯಿಂದ ಹೊರಬಂದವು. ಮಂಜು ಹಾಗೂ ಸ್ಥಳೀಯ ಗ್ರಾಮಸ್ಥರು ಈ ವಿಷಯವನ್ನು ತಕ್ಷಣ ಪುರಾತತ್ವ ಇಲಾಖೆಗೆ ತಿಳಿಸಿದ್ದಾರೆ.

ಈ ಗ್ರಾಮದಲ್ಲಿ ಈ ಮೊದಲು ಕೂಡಾ ಭೂಮಿಯಿಂದ ಪುರಾತನ ಕಾಲದ ವಿಗ್ರಹ, ಕೆತ್ತನೆಗಳು ಪತ್ತೆಯಾಗಿದ್ದವು. ಇದರಿಂದಾಗಿ ಗ್ರಾಮ ಐತಿಹಾಸಿಕವಾಗಿ ಬಹುಮುಖ್ಯತೆ ಹೊಂದಿರುವ ಸ್ಥಳವಾಗಿದೆ ಎಂದು ಗುರುತಿಸಲಾಗಿದೆ.
ಹಾಗೆಯೇ ಪತ್ತೆಯಾದ ಕಲಾಕೃತಿಗಳು ತೀರ್ಥಂಕರರ ವಿಗ್ರಹ ಮತ್ತು ಸ್ತಂಭದ ಶಿಲ್ಪಗಳನ್ನು ಹೊಂದಿದ್ದು, ಅವು ಪುರಾತನ ಕಾಲಕ್ಕೆ ಸೇರಿದವು ಎಂದು ಊಹಿಸಲಾಗಿದೆ.
ಇದನ್ನೂ ಓದಿದ್ದೀರಾ?ಹಾಸನ | ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ; ಆರೋಪಿಗಳ ಗಡಿಪಾರು ಮಾಡುವಂತೆ ಮಾದಿಗ ದಂಡೋರ ಆಗ್ರಹ
ಘಟನೆಯ ಬಗ್ಗೆ ಪುರಾತತ್ವ ಇಲಾಖೆ ತಕ್ಷಣವಾಗಿ ಪರಿಶೀಲನೆ ಪ್ರಾರಂಭಿಸಿದ್ದು, ಇನ್ನೂ ಹೆಚ್ಚಿನ ಪುರಾತನ ಕಾಲದ ಅವಶೇಷಗಳು ಈ ಪ್ರದೇಶದಲ್ಲಿ ಇರಬಹುದು ಎಂಬ ನಿರೀಕ್ಷೆಯಿದೆ ಎಂದು ತಿಳಿಸಿದರು.
