ಮೇ 17 ,18 ರಂದು ಸಿಂಧನೂರು ನಗರದ ಸತ್ಯ ಗಾರ್ಡ್ನಲ್ಲಿ ಮೇ ಮೆದಕಿನಾಳ ಭೂ ಹೋರಾಟದ ನೆನಪಿಗಾಗಿ ಅಸಮಾನತೆ ಭಾರತ, ಸಮಾನತೆಗಾಗಿ ಎಂದು ಮೇ ಸಾಹಿತ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ಸಾಹಿತ್ಯದ ಸಂಚಾಲಕರಾದ ಬಸವರಾಜ ಸುಳಿಭಾವಿ ಹೇಳಿದರು.
ನಗರದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ ಅವರು, ಮೇಳದ ಉದ್ಘಾಟನೆಯನ್ನು ಮೇದಕಿನಾಳ ಭೂ ಹೋರಾಟವು ಜಿಲ್ಲೆಯ ಹಾಗೂ ಕರ್ನಾಟಕದ ಐಕ್ಯ ಹೋರಾಟವೆಂದು ಈ ಹೋರಾಟದಲ್ಲಿ ಭಾಗವಹಿಸಿದ್ದ ಸಂಗಮ್ಮ, ದಲಿತ ಚಳುವಳಿ ಭೀಮಣ್ಣ ನಗನೂರು, ಕಾರ್ಮಿಕ ಚಳುವಳಿಯ ನರಸಿಂಹಪ್ಪ, ಮದ್ಯ ವಿರೋಧಿ ಹೋರಾಟ ಸಮಿತಿಯ ಚಿನ್ನಮ್ಮ ಮುದ್ದನಗುಡ್ಡಿ, ರೈತ ಚಳುವಳಿಯ ತಿಮ್ಮನಗೌಡ ಚಿಲ್ಕರಾಗಿ ಮಾಡಲಿದ್ದಾರೆ ಎಂದರು.
ಕಾರ್ಯಕ್ರಮದ ದಿಕ್ಸೂಚಿ ಮಾತುಗಳನ್ನು ಮುಂಬೈನ ರಾಮ್ ಪುನಿಯಾನಿ,ಔರಂಗಾಬಾದ್ನ ಮಾಲತಿ ವರಾಳೆ, ನವದೆಹಲಿಯ ಶಂಶುಲ್ ಇಸ್ಲಾಂ, ಬೆಂಗಳೂರಿನ ಎ.ನಾರಾಯಣ ಮಾತನಾಡಲಿದ್ದಾರೆ ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕುಡಿಯುವ ನೀರಿನ ಸಮಸ್ಯೆ : ಶಾಸಕ ಮಾನಪ್ಪ ವಜ್ಜಲಗೆ ತರಾಟೆ ತೆಗೆದುಕೊಂಡ ಗ್ರಾಮಸ್ಥರು
17 ರಂದು ಹೊಸಪೇಟೆಯ ಬಹುತ್ವ ಪ್ರತಿಷ್ಠಾನದಿಂದ ನಾ ಯಾರು? ರಂಗ ಪ್ರಸ್ತುತಿ ನಡೆಯಲಿದೆ. ಮಧ್ಯಾಹ್ನ 1ಗಂಟೆಗೆ ಅಸಮಾನತೆ ಮತ್ತು ಸಂಘರ್ಷ ಹೊರಳು ನೋಟ ಕುರಿತು ನಡೆಯಲಿದೆ. ವರ್ಗನೆಲೆ ಕುರಿತು ರವೀಂದ್ರ ಹಳಿಂಗಳಿ, ಜಾತಿ ನೆಲೆ ಕುರಿತು ಸಿ.ಜಿ.ಲಕ್ಷ್ಮೀಪತಿ, ಬಿಂಗ ನೆಲೆ ಕೆ.ಎಸ್.ಲಕ್ಷ್ಮೀ, ಭಾಷಾ ನೆಲೆ ಕುರಿತು ರೆಹಮತ್ ತರೀಕೆರೆ ಮಾತನಾಡಲಿದ್ದಾರೆ ಎಂದು ಹೇಳಿದರು.
ಮೇ 18 ರಂದು ಬೆಳಿಗ್ಗೆ 9 ಗಂಟೆಗೆ ಕವಿಗೋಷ್ಟಿ ನಡೆಯಲಿದೆ. ಆಶಯ ನುಡಿಗಳನ್ನು ಡಾರ್ಜಲಿಂಗ್ನ ಮನೋಜ್ ಭೋಗಾಟ ಪ್ರಸ್ತುತಪಡಿಸಲಿದ್ದಾರೆ. 11 ಗಂಟೆಗೆ ಅಭಿವೃದ್ದಿಯ ಸತ್ಯ- ಮಿಥ್ಯ ವಿಷಯದ ಮೇಲೆ ಗೋಷ್ಟಿ ನಡೆಯಲಿದೆ. ಅಭಿವೃದ್ದಿಯ ಪರಿಕಲ್ಪನೆ, ವಾಸ್ತವಾಂಶಗಳು ಕುರಿತು ನಾಗೇಗೌಡ ಕೀಲಾರ, ಕಲ್ಯಾಣ ಕರ್ನಾಟಕದ ಅಭಿವೃದ್ದಿ ಕುರಿತು ಚಂದ್ರಶೇಖರ ಗೋರೆಬಾಳ, ಉತ್ತರ ಕರ್ನಾಟಕದ ಕುರಿತು ಬಿ.ಎಸ್.ಸೋಪ್ಪಿನ ಮಾತನಾಡಲಿದ್ದಾರೆ. ಅಲ್ಲದೇ ಈ ಎಲ್ಲ ಕಾರ್ಯಕ್ರಮಗಳಲ್ಲಿ ಹೋರಾಟಗಾರರು, ಸಾಹಿತಿಗಳು, ಚಿಂತಕರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಮುಖಂಡರಾದ ಬಾಬು ಬಂಡಾರಿಗಲ್, ದೇವೆಂದ್ರಗೌಡ, ಎಸ್.ಮಾರೆಪ್ಪ, ಶ್ರೀನಿವಾಸ ಕಲವಲದೊಡ್ಡಿ, ಡಿ.ಎಚ್.ಕಂಬಳಿ ಹಾಗೂ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.