ಹಿಟ್ಲರ್ ನಡೆಸಿದ್ದ ನರಮೇಧದಿಂದ ತಪ್ಪಿಸಿಕೊಂಡು ಬದುಕಿದ್ದ ಬಾಲಕಿ ಇನ್ನಿಲ್ಲ

Date:

Advertisements

ಅದು 1942ರ ಸಮಯ. ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್‌ನ ಆಡಳಿತವು ನರಮೇಧ ನಡೆಸಲು ಆರಂಭಿಸಿದ್ದ ಕಾಲ. ಇಡೀ ಜಗತ್ತನ್ನೇ ಗೆಲ್ಲುತ್ತೆನೆಂದು ಹಿಟ್ಲರ್ ತನ್ನ ನಾಝಿ ಪಡೆಯೊಂದಿಗೆ ನಾನಾ ದೇಶಗಳ ಮೇಲೆ ಆಕ್ರಮ ನಡೆಸಲು ಆರಂಭಿಸಿದ್ದ ಮತ್ತು ಎರಡನೇ ಮಹಾಯುದ್ಧ ನಡೆಯುತ್ತಿದ್ದ ಸಮಯ. ಹಿಟ್ಲರ್‌ನ ನಾಝಿ ಪಡೆ ಫ್ರಾನ್ಸ್‌ನ ಪ್ಯಾರಿಸ್‌ಗೂ ನುಗ್ಗಿ ಯಹೂದಿಗಳ ನರಮೇಧ ನಡೆಸಲಾರಂಭಿಸಿತ್ತು. ಅಂದು, ನಾಝಿಗಳ ನರಮೇಧದಿಂದ ತಪ್ಪಿಸಿಕೊಂಡು ಬದುಕುಳಿದಿದ್ದ ಅಂದಿನ ಬಾಲಕಿ (ಈಗ 88 ವರ್ಷದ ಮಹಿಳೆ) ಕಳೆದ ವಾರ ಸಾವನ್ನಪ್ಪಿದ್ದಾರೆ. ಅವರೇ ಸುಝೇನ್ ರಪ್ಪಪೋರ್ಟ್ ರಿಪ್ಟನ್.

1942ರಲ್ಲಿ ಸುಝೇನ್ ಅವರಿಗೆ ಕೇವಲ 6 ವರ್ಷಗಳು. ಅವರು ತಮ್ಮ ಪೋಷಕರೊಂದಿಗೆ ಪ್ಯಾರಿಸ್‌ನಲ್ಲಿ ನೆಲೆಸಿದ್ದರು. ಆದರೆ, ಪ್ಯಾರಿಸ್‌ ಮೇಲೆ ನಾಝಿಗಳು ದಾಳಿ ಮಾಡಿ, ಭೀಕರ ನರಮೇಧ ನಡೆಸಿದರು. ಆ ವೇಳೆ, ಸುಝೇನ್ ಅವರ ತಂದೆ-ತಾಯಿಯನ್ನು ಬಂಧಿಸಿ, ಆಶ್ವಿಟ್ಜ್-ಬಿರ್ಕೆನಾವ್ ಎಂಬ ಕುಖ್ಯಾತ ಹತ್ಯಾಕಾಂಡದ ಶಿಬಿರಕ್ಕೆ ಎಳೆದೊಯ್ಯಲಾಗಿತ್ತು. ಅದೃಷ್ಟವಶಾತ್ ಸುಝೇನ್ ಅವರನ್ನು ನೆರೆಹೊರೆಯವರು ರಕ್ಷಿಸಿದ್ದರು. ಅಂದು ಬದುಕುಳಿದ ಸುಝೇನ್ ಅವರ ಬದುಕಿನ ದಿಕ್ಕು ಅಂದೇ ಬದಲಾಗಿತ್ತು.

ಸುಝೇನ್ ಅವರನ್ನು ಪಕ್ಕದ ಮನೆಯವರು ರಕ್ಷಿಸಿ, ವಾರಗಳ ಕಾಲ ತಮ್ಮ ಅಡುಗೆ ಮನೆಯಲ್ಲಿಯೇ ಬಚ್ಚಿಟ್ಟಿದ್ದರು. ಯುದ್ಧ ಮುಗಿದ ಬಳಿಕ, ಅವರನ್ನು ಇಂಗ್ಲೆಂಡ್‌ಗೆ ಸ್ಥಳಾಂತರಿಸಲಾಯಿತು. ಇಂಗ್ಲೆಂಡ್‌ಗೆ ಬಂದ ಸುಝೇನ್ ಅವರು ಲಂಡನ್‌ನಲ್ಲಿ ಶಿಕ್ಷಣ ಪಡೆದರು. ಮಾತ್ರವಲ್ಲ,ಸಮಾಜದಲ್ಲಿ ಸಕ್ರಿಯ ಸಾಮಾಜಿಕ ಕಾರ್ಯಕರ್ತೆಯಾಗಿ ತೊಡಗಿಸಿಕೊಂಡರು. ಆ ನಂತರ ಲೀಡ್ಸ್‌ಗೆ ಬಂದು ನೆಲೆಸಿದ ಅವರು ‘ಲೀಡ್ಸ್ ಜ್ಯೂಯಿಶ್ ಹೌಸಿಂಗ್ ಅಸೋಸಿಯೇಷನ್’ನಲ್ಲಿ (LJHA) 13 ವರ್ಷಗಳ ಕಾಲ ಕೆಲಸ ಮಾಡಿದರು.

Advertisements

ಅವರ ನಡೆ, ನುಡಿ, ಕೆಲಸಗಳನ್ನು ಹತ್ತಿರರಿಂದ ನೋಡಿದ್ದ LJHA ಸಮುದಾಯ ಸಂಯೋಜಕ ಸೈಮನ್ ಫಿಲಿಪ್ಸ್ ಅವರು, “ಸುಝೇನ್ ಯಾವಾಗಲೂ ನಗುಮುಖದಿಂದ ನಮ್ಮೊಂದಿಗೆ ಇರುತ್ತಿದ್ದರು. ಅವರು ನಿಜವಾದ ‘ಎಯ್ಸೆತ್ ಚಾಯಿಲ್’ (ಮೌಲ್ಯಯುತ ಮಹಿಳೆ) ಆಗಿದ್ದರು,” ಎಂದು ಸ್ಮರಿಸಿದ್ದಾರೆ.

ಸುಝೇನ್.jpg1

ಸುಝೇನ್ ರಪ್ಪಪೋರ್ಟ್ ರಿಪ್ಟನ್ ಅವರು ತಾವು ನಾಝಿ ಆಕ್ರಮಣದ ಸಮಯದಲ್ಲಿ ಕಂಡಿದ್ದ, ಅದುರಿಸಿದ್ದ ಭೀಕರತೆಯನ್ನು, ನರಮೇಧದ ಕ್ರೌರ್ಯವನ್ನು ಜಗತ್ತಿಗೆ ತಿಳಿಸುವ ಕೆಲಸವನ್ನೂ ಮಾಡಿದರು. ಹಡ್ಡರ್ಸ್‌ಫೀಲ್ಡ್‌ನಲ್ಲಿ ಸ್ಥಾಪನೆಗೊಂಡ ‘ಹೋಲೋಕಾಸ್ಟ್ ಸರ್ವೈವರ್ಸ್ ಫ್ರೆಂಡ್‌ಶಿಪ್ ಅಸೋಸಿಯೇಷನ್‌’ (ಹೋಲೋಕಾಸ್ಟ್ ಸೆಂಟರ್ ನಾರ್ತ್‌)ನ ಸ್ಥಾಪಕ ಸದಸ್ಯರಾಗಿದ್ದ ಸುಝೇನ್, ತಾವು ಬಾಲ್ಯದಲ್ಲಿ ಎದುರಿಸಿದ್ದ ಭೀರಕತೆಯನ್ನು ಸಾಕ್ಷ್ಯಚಿತ್ರವಾಗಿ ದಾಖಲಿಸಿದ್ದಾರೆ. ಅವರ ಈ ಕಾರ್ಯಕ್ಕಾಗಿ ಅವರಿಗೆ BEM (British Empire Medal) ಪ್ರಶಸ್ತಿಯೂ ದೊರೆತಿದೆ.

ಈ ಲೇಖನ ಓದಿದ್ದೀರಾ?: ಟಿವಿಯಲ್ಲಲ್ಲ, ಮನೆಯ ಹೊರಗೆ ಯುದ್ಧ ನಡೆಯುತ್ತಿದೆ: ಇರಾನ್-ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರು

2025ರ ಜನವರಿಯಲ್ಲಿ, ಲೀಡ್ಸ್‌ನಲ್ಲಿ ನಡೆದ ‘ನರಮೇಧ ಸ್ಮರಣ ದಿನ’ದ ಕಾರ್ಯಕ್ರಮದಲ್ಲಿ ಸುಝೇನ್‌ ಅವರು ಬರೆದ ಸಂದೇಶವನ್ನು ಓದಲಾಗಿತ್ತು. ಆ ಸಂದೇಶವು ಅವರ ಕೊನೆಯ ಸಾರ್ವಜನಿಕ ಸಂದೇಶವಾಗಿದೆ. ಈ ಸಂದೇಶದಲ್ಲಿ ಅವರು ತಮ್ಮ ಜೀವನದ ಕಥೆಯ ಜೊತೆಗೆ, ತಾಳ್ಮೆ, ಸಹಿಷ್ಣುತೆ ಹಾಗೂ ಮಾನವೀಯತೆಯ ಮೌಲ್ಯಗಳ ಬಗ್ಗೆ ಒತ್ತಿಹೇಳಿದ್ದಾರೆ.

ಸುಝೇನ್‌ರ ನಿಧನಕ್ಕೆ ಸಂತಾಪ ಸೂಚಿಸಿರುವ ಹೋಲೋಕಾಸ್ಟ್ ಸೆಂಟರ್ ನಾರ್ತ್‌ನ ನಿರ್ದೇಶಕ ಡಾ. ಅಲೆಸ್ಸಾಂಡ್ರೊ ಬುಕ್ಕಿ, “ಸುಝೇನ್‌ರ ಕೊಡಗೆಗಳನ್ನು ನೆನೆಯುವುದರ ಜೊತೆಗೆ, ಅವರ ಕೆಲಸಗಳನ್ನು ಮುಂದುವರೆಸುತ್ತೇವೆ” ಎಂದು ಹೇಳಿದ್ದಾರೆ.

ಸುಝೇನ್ ಅವರು ಭಯಾನಕ ದುರಂತದ ನಡುವೆಯೂ, ಸಾಮಾಜಿಕ ನ್ಯಾಯಕ್ಕಾಗಿ, ಶಿಕ್ಷಣಕ್ಕಾಗಿ ಹಾಗೂ ಒಗ್ಗಟ್ಟಿಗಾಗಿ ಕೆಲಸ ಮಾಡಿದ್ದಾರೆ. ಆ ಮೂಲಕ ಜಗತ್ತನ್ನುಉತ್ತಮ ಹಾದಿಯನ್ನು ಮುಂದುಯ್ಯಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಅವರ ಜೀವನಗಾಥೆಯು ಯುವಜನರಿಗೆ ಸ್ಫೂರ್ತಿಯಾಗಲಿದೆ ಎಂದು ಬುಕ್ಕಿ ಹೇಳಿದ್ದಾರೆ.

ಮಾಹಿತಿ ಮೂಲ: ಬಿಬಿಸಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

Download Eedina App Android / iOS

X