ಭಾರತ, ಪಾಕಿಸ್ತಾನ ನಾಯಕರು ಈಗ ಜೊತೆಯಾಗಿ ಭೋಜನಕ್ಕೆ ಹೋಗಬಹುದು: ಡೊನಾಲ್ಡ್ ಟ್ರಂಪ್

Date:

Advertisements

ಸದ್ಯ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದ ನಡೆಯಲು ತನ್ನ ಮಧ್ಯಸ್ಥಿಕೆಯ ಕಾರಣ ಎಂದು ಹೇಳಿಕೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಜೊತೆಯಾಗಿ ಉತ್ತಮ ಭೋಜನಕೂಟ ಆಯೋಜಿಸುವಂತೆ ಉಭಯ ದೇಶಗಳಿಗೆ ಸಲಹೆ ನೀಡಿದ್ದಾರೆ.

ಸುಮಾರು 26 ಭಾರತೀಯರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಹೆಸರಲ್ಲಿ ಭಾರತೀಯ ಸೇನೆ ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

ಇದನ್ನು ಓದಿದ್ದೀರಾ? ಟ್ರಂಪ್ ಒತ್ತಡಕ್ಕೆ ಬಗ್ಗಿ ‘ಸ್ಟಾರ್‌ಲಿಂಕ್’ ಪರವಾನಗಿ ನೀಡಿದರೆ ಮೋದಿ?

Advertisements

ಇದಾದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ತನ್ನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನ ಒಪ್ಪಿಕೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು. ಉಭಯ ದೇಶಗಳೂ ಇದನ್ನು ದೃಢಪಡಿಸಿದೆ.

ಅದಾದ ಬಳಿಕ ನಿರಂತರವಾಗಿ ಈ ಕದನ ವಿರಾಮದ ‘ಕ್ರೆಡಿಟ್’ ಅನ್ನು ಪಡೆಯುವುದರಲ್ಲೇ ಟ್ರಂಪ್ ಮಗ್ನರಾಗಿದ್ದಾರೆ. ರಿಯಾದ್‌ನಲ್ಲಿ ನಡೆದ ಹೂಡಿಕೆ ವೇದಿಕೆಯಲ್ಲಿ ಮಾತನಾಡುತ್ತಾ “ಭಾರತ ಮತ್ತು ಪಾಕಿಸ್ತಾನದ ನಾಯಕರು ಈಗ ಜೊತೆಯಾಗಿ ಒಳ್ಳೆಯ ಭೋಜನಕ್ಕೆ ಹೋಗಬಹುದು” ಎಂದು ವ್ಯಂಗ್ಯವಾಡಿದ್ದಾರೆ. ಅಂದರೆ ತನ್ನ ಮಧ್ಯಸ್ಥಿಕೆಯಲ್ಲಿ ಉಭಯ ದೇಶಗಳ ಸಂಬಂಧ ಜೊತೆಯಾಗಿ ಊಟ ಮಾಡುವಷ್ಟು ಬದಲಾಗಿದೆ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.

“ಕೆಲವೇ ದಿನಗಳ ಹಿಂದೆ, ನನ್ನ ಆಡಳಿತವು ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಹಿಂಸಾಚಾರವನ್ನು ನಿಲ್ಲಿಸಲು ಐತಿಹಾಸಿಕ ಕದನ ವಿರಾಮವನ್ನು ಯಶಸ್ವಿಯಾಗಿ ಮಧ್ಯಸ್ಥಿಕೆ ವಹಿಸಿತು. ಕದನ ವಿರಾಮ ಒಪ್ಪಂದ ಮಾಡಿಸಲು ನಾನು ವ್ಯಾಪಾರವನ್ನು ಅಸ್ತ್ರವಾಗಿ ಬಳಸಿಕೊಂಡೆ. ‘ಬನ್ನಿ, ಪ್ಪಂದ ಮಾಡಿಕೊಳ್ಳೋಣ. ಸ್ವಲ್ಪ ವ್ಯಾಪಾರ ಮಾಡೋಣ’ ಎಂದು ಹೇಳಿದೆ” ಎಂದು ಹೇಳಿಕೊಂಡಿದ್ದಾರೆ.

ಇದನ್ನು ಓದಿದ್ದೀರಾ? BREAKING NEWS | ‘ತಕ್ಷಣ ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಕೊಂಡಿವೆ’ ಎಂದ ಅಮೆರಿಕ ಅಧ್ಯಕ್ಷ ಟ್ರಂಪ್

ಕದನ ವಿರಾಮಕ್ಕೆ ಒಪ್ಪದಿದ್ದರೆ ಅಮೆರಿಕದೊಂದಿಗಿನ ವ್ಯಾಪಾರ ಸಂಬಂಧ ಕಳೆದುಕೊಳ್ಳಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ಬಳಿಕ ಉಭಯ ದೇಶಗಳು ಒಪ್ಪಂದಕ್ಕೆ ಒಪ್ಪಿದೆ ಎಂದು ಇತ್ತೀಚೆಗೆ ಟ್ರಂಪ್ ಹೇಳಿದ್ದಾರೆ. ಆದರೆ ಈ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ. ಆದರೆ ಟ್ರಂಪ್ ಮಾತ್ರ ಒಪ್ಪಂದಕ್ಕೆ ಕಾರಣ ಅಮೆರಿಕ ಎಂದು ಹೇಳುತ್ತಿದ್ದಾರೆ.

“ಪರಮಾಣು ಕ್ಷಿಪಣಿಗಳ ವ್ಯಾಪಾರ ಬೇಡ. ನೀವು ಮಾಡುವ ವಸ್ತುಗಳನ್ನು ಸುಂದರವಾಗಿ ವ್ಯಾಪಾರ ಮಾಡೋಣ ಎಂದು ಹೇಳಿದೆ. ಉಭಯ ದೇಶಗಳು ಬಹಳ ಶಕ್ತಿಶಾಲಿ, ಬಲಿಷ್ಠ, ಉತ್ತಮ, ಬುದ್ಧಿವಂತ ನಾಯಕರನ್ನು ಹೊಂದಿವೆ. ನಮ್ಮ ಮಧ್ಯಸ್ಥಿಕೆ ಮಾತಿನಿಂದ ಎಲ್ಲಾ ಕದನವೂ ನಿಂತುಹೋಯಿತು. ಈ ಸ್ಥಿತಿ ಹಾಗೆಯೇ ಉಳಿಯುತ್ತದೆ ಎಂಬ ಆಶಾಭಾವನೆಯಿದೆ” ಎಂದು ಮಂಗಳವಾರ ರಿಯಾದ್‌ನಲ್ಲಿ ಟ್ರಂಪ್ ಹೇಳಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಮಾರ್ಕೊ ರುಬಿಯೊ ಮತ್ತು ಭಾರತ, ಪಾಕಿಸ್ತಾನ ‘ಕದನ ವಿರಾಮ’ಕ್ಕೆ ಒಪ್ಪುವಂತೆ ಮಾಡಲು ಶ್ರಮಿಸಿದ ಎಲ್ಲ ಜನರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದೂ ಹೇಳಿದ್ದಾರೆ. “ಮಾರ್ಕೊ, ಎದ್ದು ನಿಲ್ಲಿ. ಈ ಕದನ ವಿರಾಮಕ್ಕಾಗಿ ನೀವು ಉತ್ತಮ ಕೆಲಸ ಮಾಡಿದ್ದೀರಿ. ಧನ್ಯವಾದಗಳು. ಇಡೀ ತಂಡ ನಿಮ್ಮೊಂದಿಗೆ ಕೆಲಸ ಮಾಡಿದೆ. ಇದು ಉತ್ತಮ ಕೆಲಸ” ಎಂದು ತನ್ನ ತಂಡವನ್ನು ಹಾಡಿಹೊಗಳಿದರು.

ಹಾಗೆಯೇ ಈ ವೇಳೆ ವ್ಯಂಗ್ಯವಾಡಿದ ಟ್ರಂಪ್, “ಬಹುಶಃ ನಾವು ಅವರನ್ನು (ಭಾರತ ಪಾಕಿಸ್ತಾನ) ಸ್ವಲ್ಪ ಜೊತೆ ಸೇರಿಸಬಹುದು. ಉಭಯ ದೇಶದ ನಾಯಕರು ಹೊರಗೆ ಹೋಗಿ ಒಟ್ಟಿಗೆ ಉತ್ತಮ ಭೋಜನ ಮಾಡುತ್ತಾರೆ. ಅದು ಚೆನ್ನಾಗಿರುವುದಿಲ್ಲವೇ ಮಾರ್ಕೊ” ಎಂದು ಪ್ರಶ್ನಿಸಿದರು.

“ಆದರೆ ನಾವು, ನಾವು ಬಹಳ ದೂರ ಬಂದಿದ್ದೇವೆ. ಅದು ನಿಮಗೆ ತಿಳಿದಿದೆ. ಲಕ್ಷಾಂತರ ಜನರು ಆ ಸಂಘರ್ಷದಿಂದ ಸಾಯಬಹುದಿತ್ತು. ಸಣ್ಣದಾಗಿ ಪ್ರಾರಂಭವಾದ ಸಂಘರ್ಷ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿತ್ತು” ಎಂದಿದ್ದಾರೆ

ಅಮೆರಿಕದ ಅಧ್ಯಕ್ಷ ಟ್ರಂಪ್ ಶನಿವಾರ, ಭಾನುವಾರ ಮತ್ತು ಸೋಮವಾರದಂದು ತಮ್ಮ ಆಡಳಿತವು ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯವರ್ತಿಯ ಪಾತ್ರವನ್ನು ವಹಿಸುತ್ತಿದೆ ಎಂಬ ತಮ್ಮ ಹೇಳಿಕೆಗಳನ್ನು ಪುನರಾವರ್ತಿಸಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ...

Download Eedina App Android / iOS

X