ಪಹಲ್ಗಾಮ್ ದಾಳಿ | ‘ಅಂತಾರಾಷ್ಟ್ರೀಯ ತನಿಖೆ’ಗೆ ಪಾಕಿಸ್ತಾನ ಒತ್ತಾಯ

Date:

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂಬ ಆರೋಪವನ್ನು ಪಾಕ್‌ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ನಿರಾಕರಿಸಿದ್ದಾರೆ. ಆ ಭಯೋತ್ಪಾದಕ ದಾಳಿಯ ಕುರಿತು ಅಂತಾರಾಷ್ಟ್ರೀಯ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಯಾವುದೇ ತನಿಖೆಗೆ ಪಾಕಿಸ್ತಾನ ಸಹಕರಿಸಲು ಸಿದ್ಧವಿದೆ ಎಂದು ಅವರು ನ್ಯೂಯಾರ್ಕ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

“ಭಾರತವು ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆಂದು ದೂಷಿಸುತ್ತಿದೆ. ಭದ್ರತಾ ಸಂಸ್ಥೆಗಳು 2008ರ ಮುಂಬೈ ದಾಳಿಗೆ ಕಾರಣವಾದ ಲಷ್ಕರ್-ಎ-ತೈಬಾ ಸಂಘಟನೆಯ ಮೇಲೆ ಆರೋಪ ಮಾಡಿವೆ. ಆದರೆ, ಲಷ್ಕರ್-ಎ-ತೈಬಾ ಕತೆ ಮುಗಿದುಹೋಗಿದೆ. ಪಹಲ್ಗಾಮ್‌ನಲ್ಲಿನ ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ” ಎಂದಿದ್ದಾರೆ.

“ಭಾರತದ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ. ಯಾವುದೇ ತನಿಖೆ ನಡೆದಿಲ್ಲ. ಪುರಾವೆಯಿಲ್ಲದೆ, ತನಿಖೆ ನಡೆಸದೆ ಪಾಕಿಸ್ತಾನವನ್ನು ಶಿಕ್ಷಿಸಲು ಭಾರತ ಯತ್ನಿಸುತ್ತಿದೆ. ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದರಿಂದ ಪಾಕಿಸ್ತಾನಕ್ಕೆ ಯಾವುದೇ ಲಾಭವಿಲ್ಲ. ಭಾರತವು ಈ ಘಟನೆಯನ್ನು ರಾಜಕೀಯ ಲಾಭ ಪಡೆಯಲು ಮತ್ತು ಸಿಂಧು ನದಿ ಒಪ್ಪಂದದಿಂದ ಹಿಂದೆ ಸರಿಯುವುದನ್ನು ಸಮರ್ಥಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.

“ಸಂಘರ್ಷವು ಭುಗಿಲೆದ್ದರೆ ಕಾಶ್ಮೀರ ಪ್ರದೇಶಕ್ಕೆ ವಿಪತ್ತು ಉಂಟಾಗಬಹುದು. ಆದ್ದರಿಂದ ನಾವು ಈ ಸಂಘರ್ಷ ಭುಗಿಲೆದ್ದಂತೆ ಭಾವಿಸುವುದಿಲ್ಲ. ಪಾಕಿಸ್ತಾನದ ಅಧಿಕಾರಿಗಳು ವಿವಾದವನ್ನು ಪರಿಹರಿಸಲು ಅಮೆರಿಕವನ್ನು ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಂಡಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಲಷ್ಕರ್-ಎ-ತೈಬಾ ನಿಷ್ಕ್ರಿಯವಾಗಿದೆ. ಅದು ಪಾಕಿಸ್ತಾನದಲ್ಲಿ ಯಾವುದೇ ಕಾರ್ಯಾಚರಣೆ ನಡೆಸಿರುವ ಅಥವಾ ಉಪಸ್ಥಿತಿ ಹೊಂದಿರುವ ಯಾವುದೇ ಉದಾಹರಣೆಗಳಿಲ್ಲ. ಲಷ್ಕರ್-ಎ-ತೈಬಾ ಕತೆ ಮುಗಿದಿದೆ. ಅವರಿಗೆ ಪಾಕಿಸ್ತಾನದಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಅದರ ಕೆಲವು ಸದಸ್ಯರು ಗೃಹಬಂಧನ ಅಥವಾ ಬಂಧನದಲ್ಲಿದ್ದಾರೆ” ಎಂದು ಆಸಿಫ್ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಕಿಸ್ತಾನದ ಪ್ರಜೆಗಳ 14 ರೀತಿಯ ವೀಸಾಗಳು ರದ್ದು: ಯಾರು, ಯಾವಾಗ ದೇಶದಿಂದ ಹೊರಹೋಗಬೇಕು?

ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ...

‘ಆದಿವಾಸಿ ಜಾತಿಯಲ್ಲ’ ಎಂದ ಜಾರ್ಖಂಡ್ ಹೈಕೋರ್ಟ್; ಜಾತಿ ನಿಂದನೆ ಮಾಡಿದ ಅಧಿಕಾರಿಯ ವಿರುದ್ಧದ ಎಫ್‌ಐಆರ್ ರದ್ದು

ಮಹಿಳೆಯನ್ನು 'ಹುಚ್ಚು ಆದಿವಾಸಿ' ಎಂದು ಕರೆದ ಆರೋಪವನ್ನು ಹೊತ್ತಿರುವ ಸರ್ಕಾರಿ ಅಧಿಕಾರಿಯ...

‘ನಾಯಿಗಳು, ಮುಸ್ಲಿಮರಿಗೆ ಪ್ರವೇಶವಿಲ್ಲ’: ಕೃಷಿ ವಿವಿಯಲ್ಲಿ ದ್ವೇಷದ ಪೋಸ್ಟ್‌

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ದೇಶಾದ್ಯಂತ ಮುಸ್ಲಿಂ ವಿರೋಧಿ ದ್ವೇಷವನ್ನು ಮಾಧ್ಯಮಗಳು,...