ಮೈಸೂರು ದಸರಾ ಅಂಬಾರಿಯನ್ನು ಹೊತ್ತು ಜನರ ಪ್ರೀತಿಗೆ ಪಾತ್ರವಾಗಿದ್ದ ಅರ್ಜುನ ಅನೆಯ ಸಾವಿಗೆ ಹಲವರು ಕಂಬನಿ ಮಿಡಿದಿದ್ದಾರೆ. ಮೈಸೂರು ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ರಾತ್ರಿ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಮೇಣದಬತ್ತಿ ಬೆಳಗಿಸಿ ಆನೆಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್, “ಕಳೆದ ನಾಲ್ಕೂವರೆ ದಶಕಗಳಿಂದ ಅರ್ಜುನ ಆನೆ ನಾಡಿನ ಸೇವೆ ಮಾಡಿದೆ. ಸೇವೆ ಮಾಡುತ್ತಲೇ ಸಾವಿಗೀಡಾಗಿದೆ. ಸಾರ್ಥಕ ಜೀವನ ನಡೆಸಿದ ಅರ್ಜುನನಿಗೆ ನಾಡಿನ ಜನರ ಪರವಾಗಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಈ ಸಮಯದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಕೆ ಜೆ ರಮೇಶ್, ಅಹಿಂದ ಮುಖಂಡರಾದ ನಜರ್ಬಾದ್ ನಟರಾಜ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಜಯ್ ಶಾಸ್ತ್ರಿ, ಪ್ರತಾಪ್, ಮಧು ಏನ್ ಪೂಜಾರ್, ಟಿ ಎಸ್ ಅರುಣ್, ಶ್ರೀಕಾಂತ್ ಕಶ್ಯಪ್, ಬೈರತಿ ಲಿಂಗರಾಜು, ಚಕ್ರಪಾಣಿ, ಮೈ ಲಾ ವಿಜಯ್ ಕುಮಾರ್, ಕೃಷ್ಣನಾಯಕ, ವರುಣ ಮಹಾದೇವ್, ಜಟ್ಟಿ ಹುಂಡಿ ಗೋಪಾಲ್, ಪಂಕಜ್, ಮಧು, ಸೂರಜ್, ಸದಾಶಿವ, ದಯಾನಂದ್, ಶಿವಲಿಂಗ ಸ್ವಾಮಿ, ವಕೀಲರಾದ ಹೇಮಂತ್, ಶಿವರಾಜ್, ಬಸವರಾಜ್ ಬಸಪ್ಪ ಹಾಗೂ ಇನ್ನಿತರರು ಹಾಜರಿದ್ದರು.