ಲೋಕಸಭೆ ದಾಳಿ | ‘ಕಲರ್ ಸ್ಮೋಕ್’ನ ಸ್ಟಿಕ್ ತೋರಿಸಲು ಕಿತ್ತಾಡಿಕೊಂಡ ಪತ್ರಕರ್ತರು!

Date:

Advertisements

ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಒಳಗೆ ನುಗ್ಗಿ ‘ಕಲರ್ ಸ್ಮೋಕ್’ ಬರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಮೂಲದ ಓರ್ವ ಯುವಕ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ.

ಲೋಕಸಭೆಯ ಒಳಗಡೆ ‘ಕಲರ್ ಸ್ಮೋಕ್’ ಬರಿಸಿದ್ದಕ್ಕೆ ಸಂಬಂಧಿಸಿ ಮೈಸೂರು ಮೂಲದ ಮನೋರಂಜನ್ ಡಿ ಹಾಗೂ ಸಾಗರ್ ಶರ್ಮಾ ಎಂಬುವವರನ್ನು ಬಂಧಿಸಿದರೆ, ಲೋಕಸಭೆಯ ಹೊರಗಡೆ ಪ್ರತಿಭಟನೆ ನಡೆಸಿದ ಅಮೋಲ್ ಶಿಂಧೆ ಹಾಗೂ ನೀಲಂ ಎಂಬುವವರನ್ನು ಬಂಧಿಸಲಾಗಿದೆ.

“ಈ ಸರ್ಕಾರ ಸರ್ವಾಧಿಕಾರಿಯಾಗಿದ್ದು ನಮ್ಮ ಮಾತು ಕೇಳುತ್ತಿಲ್ಲ. ನಿರುದ್ಯೋಗಿಗಳಾಗಿದ್ದೇವೆ. ಅದಕ್ಕಾಗಿಯೇ ನಾವು ಈ ಮಾರ್ಗವನ್ನು ಆರಿಸಿಕೊಂಡಿದ್ದೇವೆ” ಎಂದು ಲೋಕಸಭೆಯ ಹೊರಗಡೆ ‘ಕಲರ್ ಸ್ಮೋಕ್’ ಬರಿಸಿ ಯುವತಿ ನೀಲಂ ತಿಳಿಸಿದ್ದಾರೆ.

Advertisements

ಇದನ್ನು ಓದಿದ್ದೀರಾ? ಈ ಸರ್ಕಾರ ಸರ್ವಾಧಿಕಾರಿ, ನಮ್ಮ ಮಾತು ಕೇಳುತ್ತಿಲ್ಲ: ಲೋಕಸಭೆಯ ದಾಳಿ ಬಳಿಕ ಯುವತಿ ನೀಲಂ ಹೇಳಿಕೆ

‘ಕಲರ್ ಸ್ಮೋಕ್’ ವಸ್ತು ತೋರಿಸಲು ಜಗಳಾಡಿಕೊಂಡ ಪತ್ರಕರ್ತರು: ವಿಡಿಯೋ ವೈರಲ್

ಲೋಕಸಭೆಯ ಹೊರಗಡೆ ಪ್ರತಿಭಟನೆ ನಡೆಸಿದ್ದ ವೇಳೆ ಅಮೋಲ್ ಶಿಂಧೆ ಹಾಗೂ ನೀಲಂ ‘ಕಲರ್ ಸ್ಮೋಕ್’ ಬರಿಸಿ ಘೋಷಣೆ ಕೂಗುತ್ತಿದ್ದರು. ಕೂಡಲೇ ಅವರನ್ನು ಪೊಲೀಸರು ವಿಚಾರಣೆ ನಡೆಸಲು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ನಡುವೆ ಕಲರ್ ಸ್ಮೋಕ್‌ನ ಅವಶೇಷವನ್ನು ತೋರಿಸಲು ರಾಷ್ಟ್ರೀಯ ಮಾಧ್ಯಮಗಳ ಪತ್ರಕರ್ತರು ನೇರಪ್ರಸಾರದಲ್ಲೇ ಜಗಳಾಡಿಕೊಂಡ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ವೈರಲಾಗಿದೆ.

‘ಕಲರ್ ಸ್ಮೋಕ್’ ವಸ್ತುವನ್ನು ಮೊದಲು TV9 ಹಿಂದಿ ಚಾನೆಲ್‌ನ ವರದಿಗಾರ ಮನೀಷ್ ಎಂಬುವವರು ಕೈಯಲ್ಲಿ ಹಿಡಿದು ಕ್ಯಾಮೆರಾಕ್ಕೆ ತೋರಿಸುತ್ತಿದ್ದಂತೆಯೇ, ಬಂದ ಇನ್ನೋರ್ವ ಪತ್ರಕರ್ತ ಕಸಿಯಲು ಯತ್ನಿಸಿದ್ದಾನೆ. ಇದೇ ವೇಳೆ ನಾಲ್ಕೈದು ಪತ್ರಕರ್ತರೂ ದಾಳಿ ನಡೆಸಿದ್ದಾರೆ. ಈ ಗುಂಪಿನಲ್ಲಿ ನ್ಯೂಸ್‌ 18 ಸಂಸ್ಥೆಯ ಪತ್ರಕರ್ತೆ ಪಲ್ಲವಿ ಘೋಷ್ ಕೂಡ ಸೇರಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ಗಂಭೀರ ಪ್ರಕರಣವಾದಾಗಲೂ ‘ನಮ್ಮಲ್ಲೇ ಮೊದಲು ತೋರಿಸುವ ಹಪಾಹಪಿಗೆ ಪತ್ರಿಕೋದ್ಯಮ ಬಡವಾಗುತ್ತಿದೆ. ಇದು ಗೋದಿ ಮೀಡಿಯಾಗಳ ಇಂದಿನ ಅವಸ್ಥೆ. ನಾಚಿಕೆಯಾಗಬೇಕು’ ಎಂದು ನೆಟ್ಟಿಗರು ವಿಡಿಯೋ ಹಂಚಿಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಈ ಬೆಳವಣಿಗೆಯ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲೂ ಕೂಡ ಸೆರೆಹಿಡಿದಿದ್ದು, ಪತ್ರಕರ್ತರ ಅವಸ್ಥೆಗೆ ಬಿದ್ದು ಬಿದ್ದು ನಗಾಡಿದ್ದಾರೆ.

ವಿಡಿಯೋ ವೈರಲಾದ ಬಳಿಕ ಟ್ವೀಟ್ ಮಾಡಿರುವ ಪಲ್ಲವಿ ಘೋಷ್, “ಇದರಲ್ಲಿ ನಾಚಿಕೆಯಾಗುವಂಥದ್ದೇನಿಲ್ಲ. ಗ್ರೌಂಡ್‌ನಲ್ಲಿ ಕೆಲಸ ಮಾಡಲು ಬನ್ನಿ, ಆಗ ಗೊತ್ತಾಗುತ್ತದೆ ಎಷ್ಟು ಕಷ್ಟ ಇದೆ ಎಂಬುದು” ಸಮರ್ಥನೆ ಮಾಡಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X