ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಕುರಿತ ’ಸಾಕ್ಷ್ಯಚಿತ್ರ’ ಪ್ರದರ್ಶನ ಇಂದು

Date:

Advertisements

ಜ್ಯೋತಿ ನಿಶಾ ನಿರ್ದೇಶನದ “ಡಾ.ಬಿ.ಆರ್‌.ಅಂಬೇಡ್ಕರ್‌: ದೆನ್ ಅಂಡ್‌ ನೌ” ಸಾಕ್ಷ್ಯಚಿತ್ರ ಪ್ರದರ್ಶನವನ್ನು ಜಂಗಮ ಮತ್ತು ತಮಟೆ ಬಳಗದ ವತಿಯಿಂದ ವಸಂತನಗರದ ಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರದರ್ಶನದ ನಂತರ ನಿರ್ದೇಶಕರೊಂದಿಗೆ ಸಂವಾದ ಏರ್ಪಡಿಸಲಾಗಿದೆ.

Ambedkar Then and Now

ಸಂಜೆ 5.30ಕ್ಕೆ ಮಿಲ್ಲರ್‌ ರಸ್ತೆಯಲ್ಲಿರುವ ಸ್ಟುಡಿಯೋದಲ್ಲಿ (m48/3) ಪ್ರದರ್ಶನ ನಡೆಯಲಿದೆ. (ಟಿಕೆಟ್ ಬುಕ್ಕಿಂಗ್‌ಗಾಗಿ ’ಇಲ್ಲಿ’ ಕ್ಲಿಕ್ ಮಾಡಬಹುದು.)

ಈ ಸಾಕ್ಷ್ಯಚಿತ್ರದ ವೈಶಿಷ್ಟ್ಯವೇನು?

Advertisements

ಭಾರತೀಯ ಸಮಾಜದ ಅಡಿಪಾಯ ಆಗಿರುವ ಜಾತಿವ್ಯವಸ್ಥೆ ಮತ್ತು ಅದರ ಉತ್ಪನ್ನವಾಗುರುವ ಶ್ರೇಣಿಕೃತ ಅಸಮಾನತೆಯ ಕುರಿತು ಜನಪ್ರಿಯ ಸಂಸ್ಕೃತಿ, ಇತಿಹಾಸದ ಬರವಣಿಗೆ, ಮಾಧ್ಯಮಗಳು ಕುರುಡುತನ ಪ್ರದರ್ಶಿಸಿಕೊಂಡೆ ಬಂದಿವೆ. ಜಾತಿ ಅಸಮಾನತೆಯನ್ನು ಮರೆಮಾಚಿರುವ ಈ ಪ್ರಜ್ಞಾಪೂರ್ವಕ ಕುರುಡುತನದ ಹಿಂದಿರುವುದು ಮೇಲು ಜಾತಿಗಳ ಹಿಡಿತ. ಯಾಕೆಂದರೆ ಇಲ್ಲಿನ ಅಕಡೆಮಿಕ್ ವಲಯ, ಜನಪ್ರಿಯ ಸಂಸ್ಕೃತಿ, ಸಾಮಾಜಿಕ ಹೋರಾಟಗಳು, ಮಾಧ್ಯಮ ಸೇರಿದಂತೆ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಯಾವುದೇ ವಲಯವಾಗಲಿ ಮೇಲುಜಾತಿಗಳ ಹಿಡಿತದಲ್ಲಿರುವುದು. ಹಾಗಾಗಿಯೇ ಈ ಮೇಲುಜಾತಿಗಳು ಇವೆಲ್ಲವನ್ನು ತಮ್ಮ ಹಿತಾಸಕ್ತಿಗೆ ಪೂರಕಾವಾಗಿ ಬಳಸಿಕೊಂಡು ಬಂದು ದಲಿತರನ್ನು ನಿರಂತರವಾಗಿ ಅಂಚಿಗೆ ತಳ್ಳುತ್ತಿದ್ದಾರೆ. ತಮ್ಮ Caste privilege ಅನ್ನು ಕಳೆದುಕೊಳ್ಳಲು ಇಷ್ಟವಿಲ್ಲದ ಮತ್ತು ಶ್ರೇಣೀಕೃತ ಅಸಮಾನತೆಯನ್ನು ಅದು ಸಾಮಾನ್ಯ ಅಂತ ಭಾವಿಸಿರುವ ಜಾತಿ ಸಮಾಜ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ,‌ ಶೋಷಣೆ, ಹಿಂಸೆಯನ್ನು ಕೇವಲ ದಿನನಿತ್ಯ ನಡೆಯುವ ಸಾಮಾನ್ಯ ಘಟನೆಗಳು ಅಂತ Normalise ಮಾಡಲು ಪ್ರಯತ್ನಿಸುತ್ತದೆ. ದಲಿತರ ಮೇಲಿನ ಹಿಂಸೆಯ ಪ್ರಕರಣಗಳು ಸರ್ಕಾರಿ ಸಂಸ್ಥೆಗಳಲ್ಲಿ ಕೇವಲ ಅಪರಾಧ ಪ್ರಕರಣಗಳ ಅಂಕಿಅಂಶಗಳಾಗಿ ದಾಖಲಾಗುತ್ತಿವೆ.

ಇದು ಇಂದು ನೆನ್ನೆಯದಲ್ಲ ಇದಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ.
ಹಾಗಾದರೆ ಏನು ಆ ಇತಿಹಾಸ? ಈ ಮರೆಮಾಚುವ ರಾಜಕಾರಣದ ಹಿಂದಿರುವ ಶಕ್ತಿ ಯಾವುದು? ಬಾಬಾಸಾಹೇಬರ ಬೌದ್ಧಿಕತೆಯನ್ನು ಅಕಡೆಮಿಕ್ ವಲಯದಿಂದ ದೂರ ಇಟ್ಟಿರುವವರು ಯಾರು?

ಅದರಲ್ಲೂ ಮಹಿಳಾ ವಿಮೋಚನೆಯ ಮಾತಾಡುವ ಸವರ್ಣ ಸ್ತ್ರೀವಾದ ಹೇಗೆ ದಲಿತ ಮಹಿಳೆಯರ ಪ್ರಾತಿನಿಧ್ಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಜಾತಿವಾದವನ್ನು ಆಚರಿಸಿಕೊಂಡು ಬಂದಿದೆ?

ಈ ಎಲ್ಲ ಪ್ರಶ್ನೆಗಳನ್ನು ಜ್ಯೋತಿ ನಿಶಾ ಅವರ
“B.R. Ambedkar: Then and Now” ನಮ್ಮ ಮುಂದಿಡುತ್ತದೆ.

ದಲಿತರ ಪ್ರಶ್ನೆಯನ್ನು ಇತಿಹಾಸದ ಹಿನ್ನಲೆಯಲ್ಲಿ ಸಮಕಾಲೀನ ಸಮಾಜದ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳಲು ಈ ಸಾಕ್ಷ್ಯಚಿತ್ರ ಮುಖ್ಯವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X