‘ಸಲಾರ್’ ಕನ್ನಡ ಚಿತ್ರದ ರೀಮೇಕ್ ಎಂದ ಪ್ರೇಕ್ಷಕರು; ಸಕ್ಸಸ್ ಮುಖ್ಯ ಎಂದ ಪ್ರಶಾಂತ್ ನೀಲ್

Date:

Advertisements

ಸಲಾರ್ಸಿನಿಮಾ ನೋಡಿದ ಬಹುತೇಕರು, ಒಂಬತ್ತು ವರ್ಷಗಳ ಹಿಂದೆ ಕನ್ನಡದಲ್ಲಿ ಬಿಡುಗಡೆಯಾಗಿದ್ದಉಗ್ರಂಸಿನಿಮಾದ ರೀಮೇಕ್ ಇದು ಎನ್ನುತ್ತಿದ್ದಾರೆ. ವಿಷಯವನ್ನು ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳ ಮುಂಚೆ ನಿರ್ದೇಶಕರಾದ ಪ್ರಶಾಂತ್ ನೀಲ್ ಕೂಡ ಒಪ್ಪಿಕೊಂಡಿರುವ ವಿಡಿಯೋ ಎಕ್ಸ್ನಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.

ಕ್ರಿಸ್‌ಮಸ್‌ ರಜೆಯಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ಅತಿ ಹೆಚ್ಚು ಸದ್ದು ಮಾಡಿದ್ದು ಶಾರುಖ್ ನಟನೆಯ ‘ಡಂಕಿ’ ಮತ್ತು ‘ಸಲಾರ್’ ಸಿನಿಮಾಗಳು. ಬಿಡುಗಡೆ ಪೂರ್ವದಲ್ಲೇ ಇವೆರಡನ್ನೂ ಪರಸ್ಪರ ವಿರುದ್ಧ ಎಂಬಂತೆ ಬಿಂಬಿಸಲಾಗಿತ್ತು. ಉತ್ತರ ವರ್ಸಸ್ ದಕ್ಷಿಣ, ಶಾರುಖ್ ವರ್ಸಸ್ ಪ್ರಭಾಸ್, ರಾಜ್‌ಕುಮಾರ್ ಹಿರಾನಿ ವರ್ಸಸ್ ಪ್ರಶಾಂತ್ ನೀಲ್ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಪ್ರಿಯರು ಸಂಘರ್ಷಕ್ಕಿಳಿದಿದ್ದರು. ಇವುಗಳ ಪೈಕಿ ನಿನ್ನೆ (ಡಿ.21) ಬಿಡುಗಡೆಯಾದ ಶಾರುಖ್‌ನ ‘ಡಂಕಿ’ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ವಿಶೇಷವೆಂದರೆ, ಇಂದು (ಡಿ.22) ಬಿಡುಗಡೆಯಾದ ಪ್ರಭಾಸ್‌ನ ‘ಸಲಾರ್’ಗೂ ಕೂಡ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

‘ಡಂಕಿ’ ರಾಜ್‌ಕುಮಾರ್ ಹಿರಾನಿಯ ಹಿಂದಿನ ಸಿನಿಮಾಗಳಂತಿಲ್ಲ ಎನ್ನುವುದು ಅದರ ಬಗೆಗಿನ ಅತಿ ದೊಡ್ಡ ಟೀಕೆ. ಅದಕ್ಕೆ ವಿರುದ್ಧವಾಗಿ ‘ಸಲಾರ್‌’ ಪ್ರಶಾಂತ್ ನೀಲ್‌ರ ಹಿಂದಿನ ಸಿನಿಮಾಗಳಂತೆಯೇ ಇದೆ ಎನ್ನುವುದು ಅದರ ಮುಖ್ಯ ಮಿತಿ ಎನ್ನುತ್ತಿದ್ದಾರೆ ಪ್ರೇಕ್ಷಕರು. ಅದರಲ್ಲೂ ಸಿನಿಮಾ ನೋಡಿದ ಬಹುತೇಕರು, ಒಂಬತ್ತು ವರ್ಷಗಳ ಹಿಂದೆ ಕನ್ನಡದಲ್ಲಿ ಬಿಡುಗಡೆಯಾಗಿದ್ದ ‘ಉಗ್ರಂ’ ಸಿನಿಮಾದ ರೀಮೇಕ್ ‘ಸಲಾರ್’ ಎನ್ನುತ್ತಿದ್ದಾರೆ. ಈ ವಿಷಯವನ್ನು ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳ ಮುಂಚೆ ಪ್ರಶಾಂತ್ ನೀಲ್ ಕೂಡ ಒಪ್ಪಿಕೊಂಡಿರುವ ವಿಡಿಯೋ ಎಕ್ಸ್‌ನಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.

ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾ ನಿರ್ಮಾಣ ಆರಂಭಿಸಿದಾಗಲೇ ಅದು ‘ಉಗ್ರಂ’ ರೀಮೇಕ್ ಎಂದು ಕೆಲವರು ಹೇಳತೊಡಗಿದ್ದರು. ಆದರೆ, ಚಿತ್ರತಂಡ ಅದನ್ನು ನಿರಾಕರಿಸಿತ್ತು. ಪ್ರಶಾಂತ್ ನೀಲ್ ಅದರ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಇನ್ನೇನು ಚಿತ್ರ ಬಿಡುಗಡೆಯಾಗುತ್ತಿದೆ ಎನ್ನುವಾಗ ಅವರು ಆ ಕುರಿತ ಸತ್ಯವನ್ನು ಒಪ್ಪಿಕೊಂಡಿದ್ದಾರೆ.

‘ಉಗ್ರಂ’ ಚಿತ್ರ ಮಾಡುವಾಗ ಪ್ರಶಾಂತ್ ನೀಲ್ ಚಿತ್ರರಂಗಕ್ಕೆ ಹೊಸಬರಾಗಿದ್ದರು. ಹಾಗೂ ಹೀಗೂ ಚಿತ್ರ ಮಾಡಿದ್ದರಾದರೂ ಅದನ್ನು ಬಿಡುಗಡೆ ಮಾಡಲೂ ಅವರಿಗೆ ಸಾಧ್ಯವಾಗಿರಲಿಲ್ಲ. ಕೊನೆಗೆ ನಟ ದರ್ಶನ್ ಸಹಾಯದಿಂದ ಚಿತ್ರ ಬಿಡುಗಡೆ ಕಂಡಿತ್ತು. ಚಿತ್ರದಿಂದ ಪ್ರಶಾಂತ್ ನೀಲ್‌ಗೆ ಹೆಸರು ಬಂತಾದರೂ ಚಿತ್ರ ಚೆನ್ನಾಗಿ ಓಡಿರಲಿಲ್ಲ. ಅದೇ ಕಾರಣಕ್ಕೆ ಆ ಕಥೆಯನ್ನು ಕೊಂಚ ಬದಲಾಯಿಸಿ ‘ಸಲಾರ್’ ಮಾಡಿದ್ದೇನೆ ಎನ್ನುವುದು ಪ್ರಶಾಂತ್ ನೀಲ್ ವಾದ.

‘‘ಉಗ್ರಂ’ ಮಾಡುವಾಗ ನನಗೆ ಸಿನಿಮಾ ಬಗ್ಗೆ ಪ್ಯಾಷನ್ ಇತ್ತು. ಆದರೆ, ಈಗ ನನಗೆ ಚಿತ್ರಮಂದಿರಕ್ಕೆ ಜನರನ್ನು ಕರೆದುಕೊಂಡು ಬರುವುದೇ ಮುಖ್ಯ’ ಎಂದು ಪ್ರಶಾಂತ್ ನೀಲ್ ‘ಉಗ್ರಂ’ ಅನ್ನೇ ಮತ್ತೆ ಹೊಸ ಬಾಟಲಿಗೆ ಹಾಕಿ ‘ಸಲಾರ್’ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಮೂರೇ ಸಿನಿಮಾಗೆ ಪ್ಯಾಷನ್ ಕಳೆದುಕೊಂಡರೆ ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.

Advertisements

ವಿಚಿತ್ರವೆಂದರೆ, ಈ ವರ್ಷ ತೆರೆಗೆ ಬಂದ ಚಿತ್ರಗಳಲ್ಲಿ, ಅದರಲ್ಲೂ ಸ್ಟಾರ್‌ಗಳ ಸಿನಿಮಾಗಳ ಪೈಕಿ, ಸೆನ್ಸಿಬಲಿಟಿ ದೃಷ್ಟಿಯಿಂದ ಉತ್ತಮ ಎನ್ನುವಂಥ ಸಿನಿಮಾಗಳೇ ಇಲ್ಲ. ಶಾರುಖ್ ಖಾನ್‌ನ ‘ಜವಾನ್’, ರಣ್‌ಬೀರ್ ಕಪೂರ್‌ನ ‘ಅನಿಮಲ್’, ರಜನಿಕಾಂತ್ ಅಭಿನಯದ ‘ಜೈಲರ್’ ಮುಂತಾದ ಚಿತ್ರಗಳಲ್ಲಿ ಕಥೆಗಿಂತ ಆಕ್ಷನ್ ದೃಶ್ಯಗಳು, ಹೀರೋ ಬಿಲ್ಡಪ್‌ಗಳು ಇವೇ ಮುಖ್ಯವಾಗಿದ್ದವು. ಇವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡವು ಎನ್ನುವುದು ಬಿಟ್ಟರೆ, ಯಾವ ಅರ್ಥದಲ್ಲೂ ಇವು ಉತ್ತಮ ಚಿತ್ರಗಳೇನಲ್ಲ. ‘ಸಲಾರ್’ ಕೂಡ ಅದೇ ಪಟ್ಟಿಗೆ ಸೇರುತ್ತದೆ ಎನ್ನಲಾಗುತ್ತಿದೆ. ಆದರೆ, ‘ಸಲಾರ್’ ಚಿತ್ರ ಕಮರ್ಷಿಯಲ್ ಆಗಿ ಯಶಸ್ಸು ಕಾಣುವುದೇ ಎನ್ನುವುದರ ಬಗ್ಗೆ ಇನ್ನೂ ಖಾತ್ರಿ ಇಲ್ಲ.
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X