ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡರು, ಮುಖಂಡರು ಹಾಗೂ ಕಾರ್ಯಕರ್ತರನ್ನು ಶೀಘ್ರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬಾಗಲಕೋಟೆ ಪಟ್ಟಣದ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ, “ಕನ್ನಡ ಸೇನಾನಿ, ಕನ್ನಡಪರ ಚಿಂತಕ, ನಾಡ ಹೋರಾಟಗಾರ, ಕನ್ನಡ ಚಳುಚಳಿಯ ಭೀಷ್ಮ ಟಿ ಎ ನಾರಾಯಣಗೌಡರು ಬೆಂಗಳೂರು ನಗರದ ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳು, ಕಟ್ಟಡಗಳು ಹಾಗೂ ಇನ್ನಿತರೆ ವ್ಯಾಪಾರ ಸ್ಥಳಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.60ರಷ್ಟು ಕನ್ನಡ ಬಳಸುವಂತೆ ಒತ್ತಾಯಿಸಿ ಸ್ಥಳೀಯ ಪ್ರಾಧಿಕಾರ ಹಾಗೂ ಬಿಬಿಎಂಪಿ ಮತ್ತು ಸರ್ಕಾರದ ಆದೇಶಗಳಿದ್ದರೂ ಕೂಡ ಸದರಿ ಆದೇಶಗಳನ್ನು ಉಲ್ಲಂಘಿಸಿ ಆಂಗ್ಲ ಭಾಷೆಗಳಲ್ಲಿ ನಾಮ ಫಲಕಗಳನ್ನು ಹಾಕಿದ್ದು ಸದರಿ ಆಂಗ್ಲ ನಾಮ ಫಲಕಗಳನ್ನು ತೆರವುಗೊಳಿಸಬೇಕೆಂದು ಕಳೆದ ಸುಮಾರು 45 ದಿನಗಳಿಂದ ಕರವೇ ಕಾರ್ಯಕರ್ತರು ಕರಪತ್ರ ನೀಡಿದ್ದರು” ಎಂದು ಹೇಳಿದರು.
“ನಾಮಫಲಕಗಳು ಬದಲಾಣೆ ಮಾಡದ ಕಾರಣ ದಿನಾಂಕ ಡಿಸೆಂಬರ್ 27ರಂದು ಕರವೇ ರಾಜ್ಯಧ್ಯಕ್ಷ ಟಿ ಎ ನಾರಾಯಣಗೌಡರ ನಾಯಕತ್ವದಲ್ಲಿ ಬೆಂಗಳೂರು ನಗರದ ಸಾದಹಳ್ಳಿ ಗೇಟ್ ಬಳಿ ಸಾವಿರಾರು ಕರವೇ ಕಾರ್ಯಕರ್ತರು ಸೇರಿ ಪ್ರತಿಭಟನಾ ಮೆರವಣಿಗೆ ಹೋಗುತ್ತದ್ದರು. ಇದೇ ಸಂದರ್ಭದಲ್ಲಿ ಕನ್ನಡ ಕಡ್ಡಾಯ ನಾಮ ಫಲಕಗಳನ್ನು ಹಾಕಬೇಕೆಂದು ಕರವೇ ಕಾರ್ಯಕರ್ತರು ಘೋಷಣೆ ಕೂಗುತ್ತಾ ಸಾಗುತ್ತಿದ್ದು, ಟಿ ಎ ನಾರಾಯಣಗೌಡರು ಪ್ರತಿಭಟನೆ ಸ್ಥಳಕ್ಕೆ ಬರುವ ಮುನ್ನವೇ ಟಿ ಎ ನಾರಾಯಣಗೌಡರನ್ನು ಮದ್ಯಾಹ್ನ 12 ಗಂಟೆಯ ಸಂದರ್ಭದಲ್ಲಿ ಕಾರಿನಲ್ಲಿಯೇ ಬಂಧಿಸಿ ಬಾಗಲೂರು ಕ್ರಾಸ್ ಬಳಿ ಇರುವ ಯಲಹಂಕ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಕೂಡಿಹಾಕಿದ್ದಾರೆ. ಇವರ ಜೊತೆಯಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನು ಬಂಧಿಸಿದ್ದಾರೆ” ಎಂದು ಆರೋಪಿಸಿದರು.
“ಬೆಂಗಳೂರು ನಗರದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಕರವೇ ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸುಮಾರು 14 ಮಂದಿ ಕನ್ನಡ ಹೋರಾಟಗಾರರನ್ನು ಬಟ್ಟೆ ಬಿಚ್ಚಿಸಿ ಪೊಲೀಸ್ ಠಾಣೆಯಲ್ಲಿ ಕೂಡಿಹಾಕಿ ಮತ್ತು ಒಬ್ಬ ಕಾರ್ಯಕರ್ತರ ಕೈ ಮುರಿಯುವ ರೀತಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಹೊಡೆದಿರುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಟಿ ಎ ನಾರಾಯಣಗೌಡರ ಜೊತೆಯಲ್ಲಿ ಕೂಡಿಹಾಕಿರುವ ಕರವೇ ಕಾರ್ಯಕರ್ತರನ್ನು ರಾತ್ರಿ ಸುಮಾರು 8 ರ ಸಮಯದಲ್ಲಿ ಮಹಿಳೆಯರು ಸೇರಿದಂತೆ ಸುಮಾರು ಸಾವಿರಾರು ಕರವೇ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿದ್ದಾರೆ. ಆದರೆ ಟಿ ಎ ನಾರಾಯಣಗೌಡರು ಮತ್ತು ಅವರ ಜೊತೆಯಲ್ಲಿದ್ದ 21 ಮಂದಿ ಕರವೇ ಕಾರ್ಯಕರ್ತರನ್ನು ಪೊಲೀಸ್ ಠಾಣೆಯಲ್ಲಿ ಅಕ್ರವಾಗಿ ಇಟ್ಟುಕೊಂಡು ಟಿ ಎ ನಾರಾಯಣಗೌಡರ ಮೊಬೈಲನ್ನು ಕಸಿಸಿದಿರುವ ಡಿಸಿಪಿಯವರ ವರ್ತನೆ ಖಂಡನೀಯ” ಎಂದರು.
“ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪಿಎಸ್ರವರಿಂದ ದೂರನ್ನು ತೆಗೆದುಕೊಂಡು ಟಿ ಎ ನಾರಾಯಣಗೌಡರು ಮತ್ತು 21 ಮಂದಿ ಕರವೇ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು ಮಾಡಿ ಬೆಳಗಿನ ಜಾವ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಅವರನ್ನು ಜೈಲಿಗೆ ಕಳುಹಿಸಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಶಿಕ್ಷಣ ಸಚಿವರಿಗೆ ಅವಮಾನ; ತಪ್ಪಿತಸ್ಥರ ಬಂಧನಕ್ಕೆ ಆಗ್ರಹ
ಕರ್ನಾಟಕ ಸರ್ಕಾರ ಮಾಡಬೇಕಾಗಿರುವ ಕೆಲಸವನ್ನು ಟಿ ಎ ನಾರಾಯಣಗೌಡರು ಸೇರಿದಂತೆ ಕರವೇ ಕಾರ್ಯಕರ್ತರು ಮಾಡಿದ್ದಾರೆ. ಇದನ್ನು ರಾಜ್ಯ ಸರ್ಕಾರ ಪೊಲೀಸರ ಮುಖಾಂತರ ಹತ್ತಿಕ್ಕುತ್ತಿರುವ ಕೆಲಸವನ್ನು ಕೈಬಿಡಬೇಕು. ಬಂಧಿತರಾಗಿರುವ ಟಿ ಎ ನಾರಾಯಣಗೌಡರು ಸೇರಿದಂತೆ ಕರವೇ ಕಟ್ಟಾಳುಗಳನ್ನು ಬಿಡುಗಡೆಗೊಳಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು, ಕಾರ್ಯಕರ್ತರು ಇದ್ದರು.