ಕನ್ನಡಕ್ಕೆ ಮತ್ತೊಂದು ಡಿಜಿಟಲ್ ಮಾಧ್ಯಮ: ‘ಕನ್ನಡ ಪ್ಲಾನೆಟ್’ ವೆಬ್‌ಸೈಟ್‌ ಲೋಕಾರ್ಪಣೆ

Date:

Advertisements

ಸುಳ್ಳೇ ಸತ್ಯವಾಗುತ್ತಿರುವ ಯುಗದಲ್ಲಿ ತಿಳಿವಿನ ಆಳ ಮತ್ತು ಸತ್ಯದ ಪರಿಮಳವನ್ನು ಹರಡಲು ಕನ್ನಡ ಪ್ಲಾನೆಟ್ (Kannada Planet) ಎಂಬ ನೂತನ ವೆಬ್‌ಸೈಟ್‌ ಆರಂಭವಾಗಿದೆ. ವೆಬ್‌ಸೈಟ್‌ಅನ್ನು ಹಿರಿಯ ಪತ್ರಕರ್ತೆ ಡಾ. ವಿಜಯಾ ಲೋಕಾರ್ಪಣೆಗೊಳಿಸಿದ್ದಾರೆ.

“ದುರಿತ ಕಾಲದಲ್ಲಿ ಮಾತಿನ ಶಕ್ತಿ ಕುಂದಬಾರದು. ಮಾತು ಸೋಲಬಾರದು, ಮಾತು ಮುಗಿದು ಹೋಗಿಬಿಡಬಾರದು. ಬರೆದು ಬದುಕುತ್ತ ಬಂದವರು ನಾವು. ಹಿಂದೆ ಪತ್ರಿಕೆ, ನಂತರ ಟಿವಿ, ಈಗ ಡಿಜಿಟಲ್ ಮಾಧ್ಯಮ. ಸುತ್ತ ನೂರು ಟೆಂಪ್ಲೇಟುಗಳು ಅಡ್ಡಾದಿಡ್ಡಿಯಾಗಿ ಬಿದ್ದಿರುವಾಗ, ನಾವು ಹೊಸದೊಂದು ಬೋರ್ಡು ಹಿಡಿದು ಬರಬೇಕು. ಮಾತಾಡಬೇಕು, ನಮ್ಮ ತಿಳಿವಿನ ಆಳ ಹರಡುತ್ತ ಸಾಗಬೇಕು” ಎಂದು ಕನ್ನಡ ಪ್ಲಾನೆಟ್ ಬಳಗ ಹೇಳಿದೆ.

“ಕನ್ನಡ ಪ್ಲಾನೆಟ್ ನಾವೇ ಕಟ್ಟಿಕೊಂಡ ಹೊಸ ವೇದಿಕೆ. ಇದನ್ನು ನಿಮ್ಮ ವೇದಿಕೆಯನ್ನಾಗಿಸುವುದು ನಮ್ಮ ಗುರಿ. ಕನ್ನಡ ಪ್ಲಾನೆಟ್ ಒಂದು ದೊಡ್ಡ ಕಿಟಕಿ, ನಿಮ್ಮನ್ನು ನೋಡಲು, ಜಗತ್ತನ್ನು ಅರ್ಥ ಮಾಡಿಕೊಳ್ಳಲು, ಸತ್ಯ ಮಾತಾಡಲು. ರಾಶಿರಾಶಿ ಕನಸುಗಳನ್ನು ಹರಡಿ ಕುಳಿತಿದ್ದೇವೆ. ಇದೆಲ್ಲ ಒಂದೇ ಏಟಿಗೆ ಸಾಧ್ಯವಾಗುವಂಥಾಗಲು ನಾವು ಸಹಸ್ರ ಬಾಹುಗಳಾಗಬಾರದೇ ಎಂಬ ಧಾವಂತ ನಮ್ಮದು. ನೀವು ಜತೆಗಿದ್ದರೆ ಯಾವುದೂ ಅಸಾಧ್ಯವಲ್ಲ” ಎಂದಿದೆ.

Advertisements

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೊಬೈಲ್ ಎತ್ತಿಕೊಳ್ಳಲು ಮೆಟ್ರೋ ಟ್ರ್ಯಾಕ್‌ಗೆ ಜಿಗಿದ ಮಹಿಳೆ; ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಣೆ

“ನಾವು ನೊಂದವರ ಧ್ವನಿಯಾಗಬೇಕು, ಶೋಷಿತರ ಕೊರಳಾಗಬೇಕು, ಸಮಾಜದ ಕಟ್ಟಕಡೆಯಲ್ಲಿ ನಿಲ್ಲಿಸಲ್ಪಟ್ಟ ಮನುಷ್ಯನ ಎದೆಯ ಕೂಗಾಗಬೇಕು. ಇದೆಲ್ಲ ಈಗ ಕ್ಲೀಷೆಯ ಮಾತುಗಳಾದವು. ತುಂಬ ತುರ್ತಾಗಿ ನಾವು ಈಗ ನೀವಾಗಬೇಕು. ನಿಮ್ಮ ಕಣ್ಣಲ್ಲಿ ಜಗತ್ತನ್ನು ನೋಡಬೇಕು. ಹಾಗಾದಾಗ ಎಲ್ಲ ದೊಡ್ಡದೊಡ್ಡ ಆಶಯಗಳೂ ಸಾವಯವವಾಗಿ ಸಾಧ್ಯವಾಗಿಬಿಡುತ್ತದೆ” ಎಂದು ಕನ್ನಡ ಪ್ಲಾನೆಟ್ ಹೇಳಿಕೆ.

“ಕನ್ನಡ ಪ್ಲಾನೆಟ್ ಬದಲಾದ ಕಾಲಘಟ್ಟದಲ್ಲಿ ನಮ್ಮ ಅಳಿದುಳಿದ ಸಂವೇದನೆಗಳನ್ನು ಎತ್ತಿಹೇಳುವ ವೇದಿಕೆ. ನಮ್ಮೆಲ್ಲರ ಆತ್ಮಸಾಕ್ಷಿಗಳನ್ನು ಬಡಿದು ಏಳಿಸುವ ವೇದಿಕೆ. ಸತ್ಯಕ್ಕಾಗಿ ಹಂಬಲಿಸುವ ವೇದಿಕೆ. ಸದ್ಯದಲ್ಲೇ ಯೂಟ್ಯೂಬ್, ಫೇಸ್ ಬುಕ್, ಇನ್‌ಸ್ಟಾಗ್ರಾಂ, ಎಕ್ಸ್ ಹೀಗೆ ಎಲ್ಲ ಕಡೆಗಳಲ್ಲೂ ನಿಮ್ಮ ಈ ಕನ್ನಡ ಪ್ಲಾನೆಟ್ ಇರುತ್ತದೆ. ಇದರ ಮೂಲಕವೇ ನಾವು ಮಾತನಾಡುತ್ತೇವೆ. ಮಾತಿನ ಧ್ವನಿ ಸೋಲದಂತೆ. ನಿಮ್ಮ ಎಲ್ಲ ಬಗೆಯ ಬೆಂಬಲವನ್ನೂ ಬೇಡುತ್ತೇವೆ. ಜತೆಗೆ, ನಿಂತುಕೊಳ್ಳಿ, ನಿಮಗೆ ನಿರಾಶೆಯಾಗದಂತೆ ಬದುಕುತ್ತೇವೆ” ಎಂದು ತಿಳಿಸಿದೆ.

ಕನ್ನಡ ಪ್ಲಾನೆಟ್ ಒಂದು ದೊಡ್ಡ ಕಿಟಕಿ, ನಿಮ್ಮನ್ನು ನೋಡಲು, ಜಗತ್ತನ್ನು ಅರ್ಥ ಮಾಡಿಕೊಳ್ಳಲು, ಸತ್ಯ ಮಾತಾಡಲು. ರಾಶಿರಾಶಿ ಕನಸುಗಳನ್ನು ಹರಡಿ ಕುಳಿತಿದ್ದೇವೆ. ಇದೆಲ್ಲ ಒಂದೇ ಏಟಿಗೆ ಸಾಧ್ಯವಾಗುವಂಥಾಗಲು ನಾವು ಸಹಸ್ರ ಬಾಹುಗಳಾಗಬಾರದೇ ಎಂಬ ಧಾವಂತ ನಮ್ಮದು. ನೀವು ಜತೆಗಿದ್ದರೆ ಯಾವುದೂ ಅಸಾಧ್ಯವಲ್ಲ. ನಾವೇ ಕಟ್ಟಿಕೊಂಡ ಹೊಸ ವೇದಿಕೆ. ಇದನ್ನು ನಿಮ್ಮ ವೇದಿಕೆಯನ್ನಾಗಿಸುವುದು ನಮ್ಮ ಗುರಿ ಎಂದು ಕನ್ನಡ ಪ್ಲಾನೆಟ್‌ ಬಳಗ ಹೇಳಿದೆ.

 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

ಬೆಂಗಳೂರು ಮೆಟ್ರೋ: ನಾಳೆ ಹಳದಿ ಮಾರ್ಗದಲ್ಲಿ ಬೆಳಿಗ್ಗೆ 5ಕ್ಕೆ ಸಂಚಾರ ಆರಂಭ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಹಳದಿ ಮಾರ್ಗದಲ್ಲಿ ಸೋಮವಾರ...

Download Eedina App Android / iOS

X