“ಪ್ರತಿಯೊಂದು ಮಗುವಿನ ಮೊದಲ ಪಾಠಶಾಲೆ ತಾಯಿಯ ಮಡಿಲು ಆಗಿರುತ್ತದೆ. ತಾಯಿ ತನ್ನ ಮಗುವಿನ ಉತ್ತಮ ಸಂಸ್ಕಾರವುಳ್ಳ ವಿದ್ಯೆ ನೀಡಿ, ಇಹ ಮತ್ತು ಪರಲೋಕವನ್ನು ಬೆಳಗಿಸಲು ಉತ್ತಮ ಮಾರ್ಗದರ್ಶಿಯಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಜನಾಬ್ ಯೂಸುಫ್ ಕನ್ನಿ ಹೇಳಿದ್ದಾರೆ.
ಉಡುಪಿಯಲ್ಲಿಸಣ್ಣ ಮಕ್ಕಳಿಗಾಗಿ ರೋಶನ್ ಸಿತಾರೆ ಶೀಷಿಕೆ ಅಡಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. “ಮಕ್ಕಳ ಜೀವನ ಹೊಳೆಯುವ ನಕ್ಷತ್ರದಂತೆ ಇರಬೇಕು. ಮಕ್ಕಳಿಗೆ ಶಿಸ್ತಿನ ಅರಿವು ಮೂಡಿಸಬೇಕು. ಶಿಸ್ತನ್ನು ಅಳವಡಿಸಿ ಕೊಳ್ಳಲು, ಶ್ರಮ ಜೀವಿಯಾಗಿ ಬದುಕಲು, ಅವರನ್ನು ಸದ್ಗುಣವಂರನ್ನಾಗಿಸುವ ವಾತಾವರಣ ನಿರ್ಮಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಕೆಮ್ಮಣ್ಣು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಶ್ರೀಮತಿ ರಝೀಯ, ಹಾಲಿ ಸದಸ್ಯೆ ಮುಮ್ತಾಜ್ ಬಾನು, ಡಾ ಶಾಹೆ ನವಾಜ್ ಹಾಗು ಜಮಾಅತೆ ಇಸ್ಲಾಮೀ ಉಡುಪಿ ಜಿಲ್ಲಾ ಅಧ್ಯಕ್ಷ ಡಾ ಅಬ್ದುಲ್ ಅಜೀಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ಜಿಲ್ಲೆಯ ಶಿರೂರು ಬೈಂದೂರು, ಗಂಗೊಳ್ಳಿ, ಕುಂದಾಪುರ, ಕಂಡ್ಲೂರು, ಕಾರ್ಕಳ, ಕಾಪು, ಮಲ್ಪೆ, ಹೂಡೆ, ಕುಕ್ಕಿಕಟ್ಟೆ, ಕಟಪಾಡಿ ಹಾಗೂ ಇನ್ನಿತರ ಪ್ರದೇಶಗಳ ಸುಮಾರು 850ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಮರಕಡ, ಜಮಾಅತೆ ಇಸ್ಲಾಮೀ ಉಡುಪಿ ಜಿಲ್ಲಾ ಅಧ್ಯಕ್ಷ ಡಾ ಅಬ್ದುಲ್ ಅಜೀಜ್, ಹೂಡೆ ಅಧ್ಯಕ್ಷ ಅಬ್ದುಲ್ ಕಾದಿರ್ ಹೂಡೆ, ಕಾರ್ಯಕ್ರಮದ ಸಂಚಾಲಕ ಜಿಯಾಉರ್ರಹ್ಮಾನ್ ಜಮಾಅತೆ ಇಸ್ಲಾಮೀ ಉಡುಪಿ ಜಿಲ್ಲಾ ಮಹಿಳಾ ಸಂಚಾಲಕಿ ಕುಲ್ಸೂಮ್ ಅಬುಬಕ್ಕರ್, ಇಬ್ರಾಹೀಮ್ ಚೌಗುಲೆ ಉಪಸ್ಥಿತರಿದ್ದರು. ಡಾ ಅಬ್ದುಲ್ ಅಜೀಜ್ ಪ್ರಾಸ್ತಾವಿಕ ಮಾಡಿದರು. ಯಸೀನ್ ಮನ್ನ ಹಾಗು ಅನ್ವರ್ ಅಲಿ ಕಾಪು ಕರ್ಯಕ್ರಮ ನಿರೂಪಿಸಿದರು. ನಿಸಾರ್ ಧನ್ಯವಾದವಿತ್ತರು.