ರಾಯಚೂರು | ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿ ಸಭೆ

Date:

Advertisements

ರಾಯಚೂರು ಜಿಲ್ಲೆಯ ದೇವದುರ್ಗ ಕೈಗಾರಿಕಾ ಪ್ರದೇಶದ ಜಮೀನಿನ ಚೆಕ್ ಬಂದಿ ಹಾಗೂ ಹಂಚಿಕೆಗೆ ಲಭ್ಯವಾಗುವ ಭೂಮಿಯನ್ನು ಗುರುತಿಸಲು ಡಿಪಿಆರ್ ತಯಾರಿಸಲು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ ಬಂದ ನಂತರ ಮುಂದಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ದೇವದುರ್ಗದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಗಿಡ ಗಂಟೆಗಳು ಬೆಳೆದಿದ್ದು ಜಂಗಲ್ ಕಟಿಂಗ್ ಮಾಡಲು ಮುಂದೂಡಲಾಗಿತ್ತು, ಸರಹದ್ದು ಗುರುತಿಸುವ ಕುರಿತು ಜಾಲಿಗಿಡಗಳ ಜಂಗಲ್ ಕಟಿಂಗ್‌ಗೆ ಸೂಚಿಸಿದ್ದು ಅದನ್ನು ಮುಂದೂಡಲಾಗಿತ್ತು. ಇದೀಗ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಕಾಮಗಾರಿಗಾಗಿ ಡಿಪಿಆರ್ ತಯಾರಿಸುವ ಕುರಿತು ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಂದ ನಂತರ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತದೆ ಎಂದು ತಿಳಿಸಿದರು.

ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳಿಗೆ ನೀರು ಸರಬರಾಜು ಮಾಡಲು ಈ ಹಿಂದೆ ಕಾಮಗಾರಿ ನಡೆಸಲು ತಿಳಿಸಲಾಗಿತ್ತು, ಬಾಕಿ ಕಾಮಗಾರಿ ಪೂರ್ಣಗೊಂಡ ಬಳಿಕ ನೀರು ಸರಬರಾಜು ಮಾಡಲಾಗುತ್ತದೆ ಎಂದರು.

Advertisements

ದೇವಸುಗೂರು ಕೈಗಾರಿಕಾ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಮಂಡಳಿಯಿಂದ ಪೈಪ್ ಲೈನ್ ಅಳವಡಿಕೆ ಕೆಲಸ ಪೂರ್ಣಗೊಂಡಿದ್ದು, ನೀರಿನ ಸಂಪರ್ಕ ಒದಗಿಸಲು ನಗರಸಭೆಗೆ ಪತ್ರ ಬರೆದಿದೆ ಎಂದು ಕೆಐಎಡಿಬಿ ಅಧಿಕಾರಿ ಮಾಹಿತಿ ನೀಡಿದರು.

ಕೆಐಎಡಿಬಿಯಿಂದ ನಿರ್ಮಿಸಿದ ವಸತಿ ಮತ್ತು ನಿವೇಶನ ಹಂಚಿಕೆ ಮಾಡುವ ಕುರಿತು ಹಂಚಿಕೆ ಕೋರಿ 173 ಅರ್ಜಿಗಳು ಸಲ್ಲಿಕೆಯಾಗಿವೆ, 24ಅರ್ಜಿಗಳು ಶೇ.20ರಷ್ಟು ಹಣ ಪಾವತಿ ಮಾಡಿದ್ದಾರೆ, 49 ಅರ್ಜಿದಾರರು ಶೇ.100ರಷ್ಟು ಹಣ ಪಾವತಿಸಿದ್ದಾರೆ. ಅರ್ಜಿದಾರರಿಗೆ ಸ್ವಾಧೀನ ಪತ್ರ ನೀಡಲಾಗಿದೆ. ಉಳಿದ ವಸತಿ ಗೃಹಗಳಿಗೆ ಮಂಡಳಿಯಿಂದ ವಿವಿಧ ಹಂತಗಳಲ್ಲಿ ಇ-ಅಕ್ಯೂಷನ್ ಮೂಲಕ ವಿಲೇವಾರಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹೊಸ ಯೋಜನೆ ಮಂಜೂರಾತಿಗಾಗಿ ನಾಲ್ಕು ರೈಸ್ ಮಿಲ್ಲಿಂಗ್‌ಗೆ ಅರ್ಜಿಗಳು ಬಂದಿದ್ದು, ಗದ್ವಾಲ್ ರಸ್ತೆ, ವಡವಾಟಿ, ವಡ್ಲೂರು, ಮಾನವಿಯಿಂದ ನಾಲ್ಕು ಅರ್ಜಿಗಳು ಹಾಗೂ ಚಟುವಟಿಕೆ ಬದಲಾವಣೆ ಕೋರಿ ಮೂರು ಅರ್ಜಿಗಳು ಸಲ್ಲಿಕೆಯಾಗಿವೆ. ಪ್ಲೈಯಾಶ್ ಬ್ರಿಕ್ಸ್ ಬದಲಾಗಿ ವೇರ್ ಹೌಸ್, ಲಾಜಿಸ್ಟಿಕ್ಸ್, ರೈಸ್ ಮಿಲ್ಲಿಂಗ್ ಬದಲಾಗಿ ವೇರ್ ಹೌಸ್, ಲಾಜಿಸ್ಟಿಕ್ಸ್, ಡ್ರಿಂಕಿಂಗ್ ವಾಟರ್ ಬದಲಾಗಿ ಪ್ಲೈಯಾಶ್ ಬ್ರಿಕ್ಸ್, ಮಾಡಲು ಅರ್ಜಿ ಸಲ್ಲಿಕೆಯಾಗಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಲಕ್ಷ್ಮಿರೆಡ್ಡಿ, ರೈಸ್ ಮಿಲ್ ಅಸೋಸಿಯೇಷನ್ ಅಧ್ಯಕ್ಷ ಸಾವಿತ್ರಿ ಪುರುಷೋತ್ತಮ, ತ್ರಿವಿಕ್ರಮ ಜೋಷಿ, ಜಂಬಣ್ಣ ಯಕ್ಲಾಸಪೂರ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ರಾಮೀಣ ಆರ್ಥಿಕತೆಯ ಶಕ್ತಿಯೇ ಕೃಷಿ ಕೂಲಿ ಕಾರ್ಮಿಕರು: ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸುವುದೇ ಸರ್ಕಾರ?

ಗ್ರಾಮೀಣ ಜೀವನವನ್ನು ಹೊತ್ತೊಯ್ಯುವ ಪ್ರಮುಖ ಶಕ್ತಿಯೇ ಕೃಷಿ ಕೂಲಿ ಕಾರ್ಮಿಕರು. ರೈತನು...

ಉಡುಪಿ | ಫ್ಲ್ಯಾಟ್ ನಲ್ಲಿ ಪ್ರಜ್ಞೆ ಇಲ್ಲದ ಒಂಟಿ ಮಹಿಳೆಯ ರಕ್ಷಣೆ; ಸೂಚನೆ

ಉಡುಪಿ ನಗರದ ತೆಂಕುಪೇಟೆಯ ವಸತಿ ನಿಲಯದ ಫ್ಲಾಟ್ ಒಂದರಲ್ಲಿ ಪ್ರಜ್ಞೆ ಇಲ್ಲದೆ...

ವಿಜಯನಗರ | ಬೀದಿ ನಾಯಿ ದಾಳಿ; 2 ವರ್ಷದ ಮಗು ಗಂಭೀರ

ವಿಜಯನಗರದ ಕೂಡ್ಲಿಗಿ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ನಗರದಲ್ಲಿ 2 ವರ್ಷದ...

ಮೈಸೂರು | ‘ಹಾರ್ಟಿ ಪಂಕ್ಚರ್’ ಹೊಸ ತಂತ್ರಜ್ಞಾನ ಗಿಡ ಮರಗಳ ಕೊರತೆ ನೀಗಿಸುತ್ತದೆ : ಸುರೇಶ್ ದೇಸಾಯಿ

ಮೈಸೂರಿನ ಭೋಗಾದಿ ಮುಖ್ಯ ರಸ್ತೆ ಬಳಿಯಿರುವ ಬನವಾಸಿ ತೋಟದಲ್ಲಿ ಭಾನುವಾರ ನಡೆದ...

Download Eedina App Android / iOS

X