ದಾವಣಗೆರೆ | ನಾಲೆಯ ಗೇಟ್‌ನಲ್ಲಿ ನೀರಿನ ಅಭಾವ; ನೀರಾವರಿ ಇಲಾಖೆ ವಿರುದ್ಧ ರೈತರ ಆಕ್ರೋಶ

Date:

Advertisements

ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿನಲ್ಲಿ ನಾಲೆಗೆ ಆನ್ ಅಂಡ್ ಆಫ್ ಪದ್ಧತಿಯಲ್ಲಿ ನೀರು ಹರಿಸಲಾಗುತ್ತಿದೆ. ನಾಲೆಯ ಗೇಟ್‌ನಲ್ಲಿ ಐದು ಅಡಿ ನೀರಿದ್ದಲ್ಲಿ ಮಾತ್ರ ರೈತರ ಜಮೀನಿಗೆ ನೀರು ಹರಿಯಲು ಸಾಧ್ಯ. ಗೇಟ್‌ನಲ್ಲಿ ಕೇವಲ ಒಂದೂವರೆ ಅಡಿ ಮಾತ್ರ ನೀರಿದೆ. ಇದರಿಂದ ಯಾವ ತೋಟಗಳಿಗೂ ನೀರು ಹಾಯಿಸಲು ಸಾಧ್ಯವಿಲ್ಲ ಎಂದು ನಾಲೆಗಿಳಿದು‌ ದಾವಣಗೆರೆ ಜಿಲ್ಲೆಯ ರೈತರು ನೀರಾವರಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಡಾ ಸಮಿತಿ ಅಧಿಕಾರಿಗಳ ಅವೈಜ್ಞಾನಿಕ ನಿಲುವು ವಿರುದ್ಧ ಬಸವಾಪಟ್ಟಣ ಉಪ ವಿಭಾಗದ ಮಲೇಬೆನ್ನೂರು ಭಾಗದ ನೂರಾರು ರೈತರು ಭದ್ರಾ ನಾಲೆಗೆ ಉಳಿದು ಪ್ರತಿಭಟಿಸಿದರು. ಭದ್ರಾ ನಾಲೆಯ 8 ಮತ್ತು 9 ನೇ ವಲಯದ ನಾಲೆಗಳಲ್ಲಿ ಸಮರ್ಪಕ ನೀರು ಹರಿಯದ ಕಾರಣ, ತೋಟಗಳಿಗೆ ನೀರು ಹಾಯಿಸುವ ನಾಲೆಗೆ ಇಳಿದು ಕಿಡಿಕಾರಿದರು.

ನೀರಾವರಿ ಇತಿಹಾಸದಲ್ಲಿಯೇ ನಾಲೆ ಗೇಟ್ ಬಂದ್ ಮಾಡಿರಲಿಲ್ಲ, ಅಧಿಕಾರಿಗಳ ತಪ್ಪು ನಿರ್ಧಾರದಿಂದ ಈ ಗೇಟ್‌ನಿಂದ ಮೂರು ದಿನ ಮಾತ್ರ ನೀರು ಹರಿಸಲು ಆದೇಶ ಮಾಡಲಾಗಿದೆ. ಮೂರು ದಿನಗಳಲ್ಲಿ ಕುಣಬೆಳಕೆರೆ, ಆದಾಪುರ, ಬೂದಿಹಾಳು, ನಿಟ್ಟೂರು, ನೆಹರೂ ನಗರ, ಕುಂಬಳೂರು, ಹರಳಹಳ್ಳಿ, ಬನ್ನಿಕೋಡು ಗ್ರಾಮಗಳ ಎರಡು ಸಾವಿರ ಎಕರೆ ಅಚ್ಚುಕಟ್ಟಿಗೆ ನೀರು ಹರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಈ ಮುಖ್ಯ ಗೇಟ್ ನಿಂದ ಎರಡು ನಾಲೆಗಳು ಮತ್ತು ಉಪನಾಲೆಗಳಿಗೆ ನೀರು ಹರಿಯಬೇಕಿದೆ.

Advertisements

ದಿನವಿಡೀ ಎರಡು ಎಕರೆಗೆ ನೀರು ಹರಿಸಲು ಆಗಿಲ್ಲ. ಶಿವಮೊಗ್ಗ, ಭದ್ರಾವತಿ ಭಾಗದ ರೈತರ ಹಿತ ಕಾಯುವ, ಸಚಿವ ಮಧು ಬಂಗಾರಪ್ಪರಿಗೆ ರೈತರ ಕಷ್ಟಗಳು ತಿಳಿದಿಲ್ಲ.ಅಧಿಕಾರಿಗಳು ಫೋನ್ ಸ್ವೀಕರಿಸಲ್ಲ, ಜಿಲ್ಲಾ ಮಂತ್ರಿಗಳು ಮನೆ ಹತ್ತಿರ ಹೋದರೂ ಮಾತನಾಡಿಸುವವರಿಲ್ಲ. ನಮ್ಮ ನೋವು ಯಾರ ಬಳಿ ಹೇಳಿಕೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಾದ ಮಂಜಣ್ಣ, ವೆಂಕಟನಾರಾಯಣ, ಬೆನ್ನೂರು ನಾಗರಾಜ್, ನಂದೀಶ್, ಸ್ವಾಮಿ, ಹರೀಶ್, ಕೃಷ್ಣಮೂರ್ತಿ, ಅಣ್ಣಪ್ಪ, ಚಕ್ರಧರ, ರೇವಣಪ್ಪ, ಶೇಷಗಿರಿ, ರುದ್ರೇಶ್, ಪ್ರಸಾದ್ ಮತ್ತಿತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X