ಗದಗ | ಬಸವಣ್ಣ ಪ್ರತಿಮೆ ಸುತ್ತಲು ತಡೆಗೋಡೆ ನಿರ್ಮಿಸುವಂತೆ ಕರವೇ ಆಗ್ರಹ

Date:

Advertisements

ಗದಗ-ಬೆಟಗೇರಿ ಹೃದಯ ಭಾಗದಲ್ಲಿರುವ ಭೀಷ್ಮ ಕೆರೆ ಬಳಿಯ ಬಸವಣ್ಣ ಪ್ರತಿಮೆ ಎದುರು ಕಸ, ಕಂಟಿಗಳು ತುಂಬಿವೆ. ಅದನ್ನು ಸ್ವಚ್ಛಗೊಳಿಸಿ, ಪ್ರತಿಮೆ ಸುತ್ತ ತಂತಿ ಬೇಲೆ ಆಳವಡಿಸಬೇಕು ಅಥವಾ ತಡೆಗೋಡೆ ನಿರ್ಮಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ. ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರಿಗೆ ಹಕ್ಕೊತ್ತಾಯ ಸಲ್ಲಿಸಿದೆ.

ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ತೌಸಿಫ ಢಾಲಾಯತ, “ಭೀಷ್ಮ ಕೆರೆ ಬಳಿಯ ಬಸವಣ್ಣ ಪ್ರತಿಮೆ ಇರುವ ಸ್ಥಳ ಅವ್ಯವಸ್ಥೆಯಿಂದ ಕೂಡಿದೆ. ಪ್ರತಿಮೆಯ ಅಕ್ಕಪಕ್ಕದಲ್ಲಿ ಕಸ, ಕಂಟಿಗಳು ಬೆಳದಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಸರಿಯಾದ ಕುಡಿಯವ ನೀರಿನ ವ್ಯವಸ್ಥೆ, ಶೌಚಾಲಯ, ಕುಳಿತಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲ. ಚಿಕ್ಕ ಮಕ್ಕಳು ಬಂದರೆ, ಮಕ್ಕಳು ಆಟವಾಡಲು ಉದ್ಯಾನವನ ಸರಿಯಾದ ವ್ಯವಸ್ಥೆ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗದಗ ತಾಲೂಕು ಅಧ್ಯಕ್ಷ ದಾವಲಸಾಬ ತಹಶೀಲ್ದಾರ ಮಾತನಾಡಿ, “ಕರೆ ಬಳಿಕ ಅವ್ಯವಸ್ಥೆಯನ್ನು ಒಂದು ತಿಂಗಳ ಒಳಗಾಗಿ ಸರಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

Advertisements

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಮುತ್ತಣ್ಣ ಚವಡಣ್ಣವರ, ಯುವ ಘಟಕದ ಉಪಾಧ್ಯಕ್ಷರಾದ ಕುಮಾರ ರಾವಣ್ಣವರ, ಜಿಲ್ಲಾ ವಕ್ತಾರರಾದ ವಿರುಪಾಕ್ಷಪ್ಪ ಹಿತ್ತಲಮನಿ, ತಾಲೂಕ ಸಂಚಾಲಕರಾದ ಸಲೀಂ ಬೋಧಖಾನ, ತಾಲೂಕ ಘಟಕದ ಕಾರ್ಯದರ್ಶಿ ನಿಯಾಜ್ ಶೇಖರವರು, ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಇರ್ಫಾನ ತಾಳಿಕೋಟಿ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಸಲೀಮ ಶಿರವಾರ, ಮುಳಗುಂದ ಘಟಕದ ಅಧ್ಯಕ್ಷರಾದ ಹುಸೇನ ಅಕ್ಕಿ, ತಾಲೂಕ ಸಾಮಾಜಿಕ ಜಾಲತಾಣ ಮುಸ್ತಾಕ ಡಾವಣಗೇರಿ, ಇಸಾಕ್ ನದಾಫ, ಗೌಸುಸಾಬ ಶಿರಹಟ್ಟಿ, ಸುಲೇಮಾನ ಮಂಜಾಲಪೂರ. ಮಹಾಂತೇಶ ನಡಗೇರಿ, ಸದಾಶಿವ ಸೊರಟೂರ, ಮುನ್ನಾ ಪಠಾಣ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ...

ಮಂಗಳೂರು | ಆ. 23: ಅಲ್ ವಫಾ ಚಾರಿಟೇಬಲ್ ಟ್ರಸ್ಟ್‌ನಿಂದ 15 ಜೋಡಿಗಳ ಸರಳ ಸಾಮೂಹಿಕ ವಿವಾಹ

ಮಂಗಳೂರು ಭಾಗದಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಅಲ್ ವಫಾ ಚಾರಿಟೆಬಲ್ ಟ್ರಸ್ಟ್...

Download Eedina App Android / iOS

X