ಗದಗ | ಕಾಯಕ ದಾಸೋಹದ ಆರ್ಥಿಕ ನೀತಿಯನ್ನು ಭೋಧಿಸಿದ್ದು ಬಸವಣ್ಣ: ಸಚಿವ ಎಚ್.ಕೆ ಪಾಟೀಲ್

Date:

Advertisements

ಬಸವಣ್ಣನವರನ್ನ ಆದ್ಯತ್ಮಕ್ಕೆ ಸೀಮಿತವಾಗಿಸಿದ್ದೇವೆ. ಆದರೆ, ಆರ್ಥಿಕ ತಜ್ಞ ಎಂದು ಮರೆತಿದ್ದೀವಿ. ಕಾಯಕ ತತ್ವ, ದುಡಿ, ದುಡಿದದ್ದನ್ನು ಹಂಚು ಎನ್ನುವ ತತ್ವ ಅಡಗಿದೆ. ಕಾಯಕ ದಾಸೋಹದ ಆರ್ಥಿಕ ನೀತಿಯನ್ನು ಭೋಧಿಸಿದ ಬಸವಣ್ಣನವರನ್ನು ನೆನಪಿಸಿಕೊಳ್ಳಬೇಕು ಎಂದು ಎಚ್.ಕೆ. ಪಾಟೀಲ್ ಹೇಳಿದರು.

ಗದಗ ಪಟ್ಟಣದ ಜಿಲ್ಲಾಡಳಿತ ಕಛೇರಿಯ ಆಡಿಟೋರಿಯಂನಲ್ಲಿ ʼಸಾಂಸ್ಕೃತಿಕ ನಾಯಕʼ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿದರು.

ಮಾನವತಾವಾದಿ ಬಸವಣ್ಣನವರನ್ನು ಇತ್ತೀಚಿಗೆ ಸಾಂಸ್ಕೃತಿಕ ನಾಯಕ ಎಂದು ಗೌರವಿಸಿ, ಅಧಿಕೃತವಾಗಿ ಒಪ್ಪಿಕೊಂಡಿದ್ದೇವೆ. ಸಂವಿಧಾನ ರಚನೆ ಮಾಡುವಾಗ ನಾವೇಲ್ಲರೂ ಒಂದೇ ಎನ್ನುವ ಹಾಗೆ ಜಗಜ್ಯೋತಿ ಬಸವೇಶ್ವರರು ಮಾನವ ಕುಲಕ್ಕೆ ಮಾರ್ಗದರ್ಶನ. ಅವರ ನಡತೆಯ ಮೂಲಕ ಅವರ ಕಾಲದ ವಿಶೇಷತೆಯನ್ನು ಜಗತ್ತಿಗೆ ತೋರಿಸಿದ್ದರಿಂದ ನಾವೆಲ್ಲರು ಇವತ್ತು ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿಸಿ ಒಪ್ಪಿಕೊಂಡಿದ್ದೇವೆ.

Advertisements

ಎಲ್ಲ ಕಚೇರಿಗಳಲ್ಲಿ ಸಂವಿಧಾನ ಪೂರ್ವ ಪೀಠಿಕೆ ಹಾಕಲಾಗಿದೆ ಹಾಗೇ ಬಸವಣ್ಣನವರ ಭಾವಚಿತ್ರ ಇರುತ್ತದೆ. ಕಛೇರಿಗಳಿಗೆ ಬರುವರನ್ನು ಇವ ನಮ್ಮವ ಎಂದು ಬರಮಾಡಿಕೊಳ್ಳಬೇಕು. ʼಬಸವಣ್ಣನವರ ಪೋಟೋ ಹಾಕಿದೆ ಎಂದರೆ, ಬಾರಕೋಲು ಹಾಕಿಕೊಂಡು ನಿಂತಂಗ,ʼ ಹಾಗಾಗಿ ಬಸವಣ್ಣನವರ ನೀತಿ, ಸಂದೇಶದ ಭಯ ಇರಬೇಕು. ಎಲ್ಲರನ್ನು ಎಚ್ಚರಿಸುವುದಕ್ಕೆ ಗುರು ಬಸವಣ್ಣನವರು ನಿಂತಿದ್ದಾರೆ ಎಂದು ತಿಳಿದುಕೊಳ್ಳಬೇಕು ಎಂದರು.

ಹನ್ನೆರಡನೇ ಶತಮಾನದಿಂದ ಇಲ್ಲಿವರೆಗೂ ಗೌರವದಿಂದ ಕಾಣುತ್ತಾ ಪೂಜೆ ಮಾಡುವುದರ ಜೊತೆಗೆ ಎಡಕ್ಕ ಬರ್ರಿ, ಬಲಕ್ಕ ಬರ್ರಿ ಎಂದು ಹೇಳುತ್ತಿವಿ. ಬಸವಣ್ಣನವರ ವಚನಗಳು ಕೇವಲ ಭಾಷಣಕ್ಕೆ ಅಷ್ಟೇ ಸೀಮಿತವಾಗಿ ಬಿಟ್ಟಿವಿ. ಅವರು ವಚನಗಳ ಮೂಲಕ ಅವರ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು. ಈ ಮೂಲಕ ಎಲ್ಲ ಕಛೇರಿಗಳಲ್ಲಿ ಈ ಭಾವಚಿತ್ರ ಬಂದ ಮೇಲೆ ಬದಲಾವಣೆ ಆಗಬೇಕು. ಸರ್ಕಾರಿ ಕಛೇರಿಗಳಿಗೆ ಬಡವರು, ಶ್ರಮ ಜೀವಿಗಳು ಬಂದಾಗ ಕಛೇರಿಯಲ್ಲಿ ಗೌರವಿಸದೇ ಇದ್ದರೆ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಅವರನ್ನು ಅವಮಾನಿಸದ ಹಾಗೆ.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಮ್.ಎನ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಮುಖಂಡರು ಎಸ್.ಎನ್. ಬಳ್ಳಾರಿ, ಬಸವರಾಜ ಕಡೆಮನಿ, ಅಧಿಕಾರಿಗಳು, ಬಸವಣ್ಣನವರ ಅನುಯಾಯಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X