‘ಹೇರ್‌ ಸ್ಟೈಲ್’ ಕಾರಣಕ್ಕೆ ಶಾಲೆಯಲ್ಲಿ ಕಪ್ಪು ವರ್ಣೀಯ ವಿದ್ಯಾರ್ಥಿಗೆ ಶಿಕ್ಷೆ; ಶಾಲೆಯ ನಡೆ ಎತ್ತಿಹಿಡಿದ ಕೋರ್ಟ್‌

Date:

Advertisements

ತನ್ನ ಕೂದಲು ವಿನ್ಯಾಸದ ಕಾರಣಕ್ಕಾಗಿ ಕಪ್ಪು ವರ್ಣೀಯ ವಿದ್ಯಾರ್ಥಿಗೆ ಹೈಸ್ಕೂಲ್‌ನಲ್ಲಿ ಶಿಕ್ಷಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ತನ್ನನ್ನು ಶಿಕ್ಷಿಸಿದ ಶಾಲೆಯ ವಿರುದ್ಧ 18 ವರ್ಷದ ವಿದ್ಯಾರ್ಥಿ ಡ್ಯಾರಿಲ್ ಜಾರ್ಜ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ನ್ಯಾಯಾಲಯವು ಆತನ ವಿರುದ್ಧ ಶಾಲೆಯು ತೆಗೆದುಕೊಂಡ ಶಿಸ್ತು ಕ್ರಮವನ್ನು ಎತ್ತಿಹಿಡಿದಿದೆ.

ಜಾರ್ಜ್‌ ತನ್ನ ಕೂದಲನ್ನು ಹಗ್ಗದ ರೀತಿಯಲ್ಲಿ ಎಳೆಗಳಾಗಿ ಎಣೆದುಕೊಂಡು, ಅದಕ್ಕೆ ಪಿನ್ ಮಾಡಿಕೊಂಡಿದ್ದರು. ಆತನ ಕೂದಲಿನ ಶೈಲಿಯು ಶಾಲೆಯ ಡ್ರೆಸ್‌ ಕೋಡ್‌ಅನ್ನು ಉಲ್ಲಂಘಿಸುತ್ತದೆ ಎಂದು ಆತನ ವಿರುದ್ಧ ಬಾರ್ಬರ್ಸ್ ಹಿಲ್ ಹೈಸ್ಕೂಲ್‌ ಕ್ರಮ ಕೈಗೊಂಡಿತ್ತು. ಆತನನ್ನು ಆಗಸ್ಟ್‌ನಿಂದಲೂ ಆತನ ಸಹಪಾಠಿಗಳಿಂದ ಬೇರ್ಪಡಿಸಿ, ಕೂರಿಸಲಾಗುತ್ತಿತ್ತು.

“ಆತನ ಕೂದಲು ಟಿ-ಶರ್ಟ್‌ ಕಾಲರ್‌, ಕಣ್ಣು ಹುಬ್ಬು ಹಾಗೂ ಕಿವಿಯೋಲೆಗಳ ಕೆಳಭಾಗದವರೆಗೆ ಉದ್ದವಾಗಿತ್ತು. ಆತನ ಕೂದಲಿನ ಶೈಲಿಯು ವಸ್ತ್ರ ಸಂಹಿತೆಗೆ ವಿರುದ್ಧವಾಗಿದೆ” ಎಂದು ಶಾಲೆಯು ಹೇಳಿದೆ.

Advertisements

ಆತನ ಪರವಾಗಿ ವಾದ ಮಂಡಿಸಿದ ವಕೀಲರು, “ವಿದ್ಯಾರ್ಥಿಯ ಕೇಶವಿನ್ಯಾಸವು ಟೆಕ್ಸಾಸ್ ಕ್ರೌನ್ ಆಕ್ಟ್ ಎಂಬ ಕಾನೂನಿನಿಂದ ರಕ್ಷಣೆ ಪಡೆಯುತ್ತದೆ. ವಿದ್ಯಾರ್ಥಿಯ ಜನಾಂಗದ ಸಾಮಾನ್ಯವಾಗಿ ಅಥವಾ ಐತಿಹಾಸಿಕ ಕೇಶವಿನ್ಯಾಸವು ಇದೇ ರೀತಿ ಇರುತ್ತದೆ. ಹೀಗಾಗಿ, ಶಾಲೆಯಲ್ಲಿ ಆತ ಕೂದಲಿನ ವಿನ್ಯಾಸದ ವಿರುದ್ಧ ತಾರತಮ್ಯ ಮಾಡಬಾರದು” ಎಂದು ವಾದಿಸಿದ್ದರು. ಆದರೆ, ಶಾಲೆಯು ತಾರತಮ್ಯದ ಆರೋಪವನ್ನು ನಿರಾಕರಿಸಿತ್ತು.

ಈ ಸುದ್ದಿ ಓದಿದ್ದೀರಾ?: ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ: ಪ್ರಧಾನಿ ಮೋದಿ

ವಾದವನ್ನು ಆಲಿಸಿದ ನ್ಯಾಯಾಲಯ, “ಬಾರ್ಬರ್ಸ್‌ ಹಿಲ್ ಶಾಲೆಯ ನಿಮಯಗಳು ಟೆಕ್ಸಾಸ್ ಕ್ರೌನ್ ಆಕ್ಟ್‌ಅನ್ನು ಉಲ್ಲಂಘಿಸುವುದಿಲ್ಲ” ಎಂದು ಹೇಳಿದೆ. ಶಾಲೆಯ ಶಿಸ್ತು ಕ್ರಮವನ್ನು ಎತ್ತಿಹಿಡಿದಿದೆ.

ಪ್ರಕರಣದ ಬಗ್ಗೆ ಮಾತನಾಡಿದ ವಿದ್ಯಾರ್ಥಿ ಜಾರ್ಜ್‌, “ಎಲ್ಲವೂ ನನ್ನ ಕೂದಲಿನಿಂದಾಗಿ? ಕೂದಲಿನ ಕಾರಣಕ್ಕಾಗಿ ನಾನು ಶಿಕ್ಷಣ ಪಡೆಯಲು ಸಾಧ್ಯವಿಲ್ಲವೇ? ನಾನು ಇತರ ಗೆಳೆಯರೊಂದಿಗೆ ಸೇರಲು ಮತ್ತು ವಿದ್ಯಾರ್ಥಿ ಜೀವನವನ್ನು ಆನಂದಿಸಲು ಸಾಧ್ಯವಿಲ್ಲವೇ. ಇದಕ್ಕೆಲ್ಲ ನನ್ನ ಕೂದಲು ಕಾರಣವೇ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ...

Download Eedina App Android / iOS

X