“ರಾಜ್ಯದ ರೈತರು ನಷ್ಟದಲ್ಲಿದ್ದಾರೆ, ಪರಿಹಾರ ಕೊಡೋಕೆ ಸರ್ಕಾರದ ಬಳಿ ಹಣವಿಲ್ಲ. ಆದ್ರೆ, ಜಾಹೀರಾತು ಕೊಡೋಕೆ ಬಜೆಟ್ನಲ್ಲಿ 200 ಕೋಟಿ ರೂ. ಅನುದಾನ ಪಡೆಯುತ್ತಾರೆ. ಜಾಹೀರಾತಿನಲ್ಲಿ ಇರುವ ಕಲರ್ ಫೋಟೋ ನೋಡಿದ್ರೆ ಹೇಸಿಗೆ ಆಗುತ್ತದೆ” ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹರಿಹಾಯ್ದರು.
ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ರಾಜ್ಯದ ಜನತೆ ಕಾಂಗ್ರೆಸ್ನ ಕೆಟ್ಟ ಸರ್ಕಾರ ತೆಗೆಯಬೇಕಿದೆ. ಸರ್ಕಾರದವರು ಯಾರಪ್ಪನ ದುಡ್ಡಲ್ಲಿ ಜಾಹೀರಾತು ಕೊಡ್ತಿದ್ದಾರೆ?” ಎಂದು ಕಿಡಿಕಾರಿದರು.
“ರೈತರಿಗೆ ತಲಾ 2 ಸಾವಿರ ಕೊಡ್ತೀವಿ ಅಂತ 620 ಕೋಟಿ ಮೀಸಲಿಟ್ಟಿದ್ದಾರೆ. ಅದರಲ್ಲಿ 75 ಪರ್ಸೆಂಟ್ ಕೇಂದ್ರದ್ದು, 25 ಪರ್ಸೆಂಟ್ ರಾಜ್ಯದ್ದು. ರೈತರ ಸಾಲಮನ್ನಾ ಮಾಡಿದ ಬಳಿಕ ನಾನು ಜಾಹೀರಾತು ಎಲ್ಲೂ ಹಾಕಿಲ್ಲ. ಗೃಹಲಕ್ಷ್ಮಿ ಯೋಜನೆಯಲ್ಲಿ ಬೇಕಾದ್ರೆ ಇನ್ನು 2 ಸಾವಿರ ಹೆಚ್ಚಿಗೆ ಕೊಡಲಿ. ಸರ್ಕಾರ ಗ್ಯಾರಂಟಿ ಬಗ್ಗೆ ಕನವರಿಕೆ ಮಾಡಿ ಖಜಾನೆ ಖಾಲಿ ಮಾಡಿಕೊಳ್ತಿದ್ದಾರೆ” ಎಂದು ಆರೋಪಿಸಿದರು.
“ಲೋಕಸಭಾ ಚುನಾವಣೆಯಲ್ಲಿ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಹೆಸರು ಸಹ ಕೇಳಿ ಬರ್ತಿದೆ. ಈ ಬಾರಿ ಕೋಲಾರ ಮೈತ್ರಿ ಅಭ್ಯರ್ಥಿ ಗೆಲ್ಲಲಿದ್ದಾರೆ. ಸೀಟ್ ಹಂಚಿಕೆ ಬಗ್ಗೆ ಅಧಿಕೃತವಾಗಿ ಘೋಷಣೆ ಆಗಬೇಕು. ಸಂಸದ ಮುನಿಸ್ವಾಮಿ ಸಹ ನಿರೀಕ್ಷೆ ಇಟ್ಟಿದ್ದಾರೆ, ಅಂತಿಮವಾಗಿ ಪಟ್ಟಿ ಬರಲಿದೆ. ಮುನಿಸ್ವಾಮಿ ಸಹ ಸಮರ್ಥರಿದ್ದಾರೆ” ಎಂದು ಹೇಳಿದರು.

ಎಡಬಿಡಂಗಿತನ,, ಗ್ಯಾರಂಟಿ ಘೋಷಣೆ ಮಾಡಿದಾಗ ರಾಜ್ಯ ದಿವಾಳಿ ಎಂದು ಗಂಟಲು ಹರಕೊಂಡು ಒದರಿದರು,,ಈಗ ಗ್ಯಾರಂಟಿ ಫಲಾನುಭವಿಗಳು ಗೇಲಿ ಮಾಡಿದವರಿಗೆ ತಿರುಗಿ ಗೂಟಾ ಇಡಬಹುದೆಂಬ ಭಯದಿಂದ ತಮ್ಮ ಮಾತಿಗೆ ತಾವೇ ಬೆಲೆ ಕೊಡದಂತೆ ಒದರುವರು
ತಂದೆಯ ದಾರಿ ತಪ್ಪಿಸಿದ ಮಗ ಇವರು.
ಕುಮಾರಣ್ಣ ಗೃಹಲಕ್ಷ್ಮಿ ಯೋಜನೆಯಿಂದ ಇನ್ನು 2000 ರೂ ಹೆಚ್ಚಿಗೆ ಕೊಡಿ ಅಂತ ಕೇಳ್ತಾ ಇರೋದ್ರಲ್ಲೆ ಅವರ ನೋವು ಅರ್ಥ ಆಗುತ್ತೆ. ಪಾಪ ಕುಮಾರಣ್ಣನಿಗೆ ಇಬ್ಬರೆಂಡಿರ್ಲ್ವ! ಅದಕ್ಕೆ ಸರ್ಕಾರದ ಮುಂದೆ ಡಿಮ್ಯಾಂಡ್ ಇಡ್ತಾವ್ರೆ!