ತುಮಕೂರು | ಕೆರೆ ಒತ್ತುವರಿ ತೆರವು ಮಾಡಿ ಕೆರೆಯಾಗಿಯೇ ಉಳಿಸಿ: ಬೈಚೇನಹಳ್ಳಿ ಗ್ರಾಮಸ್ಥರ ಮನವಿ

Date:

Advertisements

ಕೆರೆಯ ಜಾಗವನ್ನು ಮಣ್ಣು ತುಂಬಿಸಿಕೊಂಡು ಒತ್ತುವರಿ ಮಾಡುವ ಕೆಲಸವನ್ನು ಕೆಲವರು ಮಾಡುತ್ತಿದ್ದು, ಕೆರೆಯ ಒತ್ತುವರಿ ತೆರವು ಮಾಡಿ ಕೆರೆಯನ್ನು ಕೆರೆಯನ್ನಾಗಿಯೇ ಉಳಿಸಬೇಕು ಎಂದು ಬೈಚೇನಹಳ್ಳಿ ಗ್ರಾಮಸ್ಥರು ಗ್ರೇಡ್ 2 ತಹಶೀಲ್ದಾರ್ ಶಶಿಕಲಾ ಅವರಿಗೆ ಮನವಿ ಸಲ್ಲಿಸಿದರು.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಕಚೇರಿಗೆ ಗ್ರಾಮಸ್ಥರು ಆಗಮಿಸಿದ್ದು, ಸ್ಥಳೀಯ ಮಂಜುನಾಥ್ ಎಂಬುವವರು ಮಾತನಾಡಿ, “ಬೈಚೇನಹಳ್ಳಿ ಗ್ರಾಮದಲ್ಲಿ 18 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿರುವ ಕೆರೆ ಇದ್ದು, ಕೆರೆಯ ಸುತ್ತಲಿನ ರೈತರ ಪೈಕಿ ಕೆಲವರು ಕೆರೆಯಂಚಿನಲ್ಲಿ ಮಣ್ಣು ಹಾಕಿಕೊಂಡು ಎತ್ತರ ಪ್ರದೇಶ ಮಾಡಿಕೊಂಡು ಕೆರೆಯ ಜಾಗವನ್ನು ಒತ್ತುವರಿ ಮಾಡಲು ಆರಂಭಿಸಿದ್ದಾರೆ. ಕೆರೆಯ ಮುಳುಗಡೆ ಪ್ರದೇಶದಲ್ಲಿದ್ದ ರೈತರಿಗೆ ಈಗಾಗಲೇ ಸರ್ವೇ ನಂಬರ್ 52 ರಲ್ಲಿ 12.32 ಎಕರೆ ಪರ್ಯಾಯ ಜಮೀನು ಸರ್ಕಾರ ನೀಡಿದೆ. ಆದರೆ ಕೆರೆಯಲ್ಲಿ ನೀರಿಲ್ಲ ಎಂಬ ನೆಪದಲ್ಲಿ ಈ ಜಮೀನು ಸಹ ನಮ್ಮದು ಎಂದು ಕೆರೆಯ ಹಳ್ಳದ ಜಾಗವನ್ನು ಮಣ್ಣು ತುಂಬಿ ಕಬಳಿಸುತ್ತಿದ್ದಾರೆ” ಎಂದು ಆರೋಪಿಸಿದರು.

“ಕೆರೆಯಲ್ಲಿ ನೀರು ಇದ್ದರೆ ಇಲ್ಲಿನ ರೈತರ ಕೊಳವೆಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಈ ಬಗ್ಗೆ ತಿಳಿದೂ ಸಹ ಕೆರೆಯನ್ನೇ ಒತ್ತುವರಿ ಮಾಡಲಾಗುತ್ತಿದೆ. ಕೆರೆಯನ್ನು ಚಿಕ್ಕದಾಗಿಸುತ್ತಾ ಹೋದಲ್ಲಿ ಮುಂದಿನ ಪೀಳಿಗೆಗೆ ಈ ಕೆರೆಯೇ ಇಲ್ಲವಾಗುತ್ತದೆ. ಈ ಕಬಳಿಕೆ ಮಾಡುವವರ ಜಮೀನಿನಲ್ಲಿನ ಕೊಳವೆ ಬಾವಿಯಲ್ಲಿ ಸಹ ನೀರು ಇಲ್ಲವಾಗುತ್ತಿದೆ. ಈ ಬಗ್ಗೆ ತಿಳಿದಿದ್ದರೂ ಕೂಡ ಎಲ್ಲರಿಗೂ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ಕ್ರಮ ವಹಿಸಿ ಕೂಡಲೇ ಕೆರೆಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕು” ಎಂದು ಸ್ಥಳೀಯ ಗಂಗರಾಜ್ ಮನವಿ ಮಾಡಿದರು.

Advertisements

“ಈಗಾಗಲೇ ಭಾರೀ ಬಿಸಿಲು ಎದುರಾಗಿದೆ. ನಾಲ್ಕು ತಿಂಗಳ ಬೇಸಿಗೆ ರೈತರನ್ನು ಕಂಗೆಡಿಸುತ್ತಿರುವ ಈ ಸಮಯದಲ್ಲಿ ಇರುವ ಕೆರೆಯ ಜಾಗವನ್ನು ಕಬಳಿಸಿದರೆ ರೈತರ ಉಳಿವಿಲ್ಲ. ರೈತರ ಜೀವನಾಡಿ ಕೆರೆಯನ್ನು ಮತ್ತೊಬ್ಬ ರೈತನೇ ಒತ್ತುವರಿ ಮಾಡಿದರೆ ಯಾರಿಗೆ ನಮ್ಮ ಕಷ್ಟ ಹೇಳುವುದು ಎನ್ನಿಸುತ್ತಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಕೆರೆಯ ಅಳತೆ ನಡೆಸಿ ಉಳಿಸಿಕೊಡಬೇಕು” ಎಂದು ಸ್ಥಳೀಯ ಮರುಳಪ್ಪ ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ತಾಲೂಕು ಘಟಕ ಉದ್ಘಾಟನೆ

ಈ ಸಂದರ್ಭದಲ್ಲಿ ಬೈಚೇನಹಳ್ಳಿ ಗ್ರಾಮಸ್ಥರಾದ ಪುಟ್ಟಗಂಗಯ್ಯ, ಕೃಷ್ಣಪ್ಪ, ರಾಮಚಂದ್ರಯ್ಯ, ರಂಗಯ್ಯ, ಕುಮಾರ್, ಆನಂದ್, ವಿಶ್ವನಾಥ್, ಪ್ರಸನ್ನ, ರಮೇಶ್, ಶಂಕರ್ ಸೇರಿದಂತೆ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಬ್ಬಳ್ಳಿ | ಕುರುಬ ಸಮಾಜದ ಕುಲಶಾಸ್ತ್ರ ಅಧ್ಯಯನವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಒತ್ತಾಯ

ರಾಜ್ಯ ಸರ್ಕಾರ ಪಶುಪಾಲಕರ ಹಾಗೂ ಕುರಿಗಾರರ ದೌರ್ಜನ್ಯ ಕಾಯ್ದೆ ಜಾರಿಗೆ ತಂದಿರುವ...

ಧಾರವಾಡ | ಡಿಮ್ಹಾನ್ಸ್ ಸಂಸ್ಥೆಯ ಟೆಲಿ-ಮನಸ್ ವಿಭಾಗದ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ

ಬೆಂಗಳೂರು ನಿಮ್ಹಾನ್ಸ್ ಟೆಲಿ-ಮನಸ್ ಅಪೆಕ್ಸ್ ತಂಡದಿಂದ ಧಾರವಾಡ ಡಿಮ್ಹಾನ್ಸ್ ಸಂಸ್ಥೆಯ ಟೆಲಿ-ಮನಸ್...

ಕಲಬುರಗಿ | ಶಾಲಾ ಮೇಲ್ಚಾವಣಿ ಕುಸಿದು ಮೂವರು ವಿದ್ಯಾರ್ಥಿಗಳಿಗೆ ಗಾಯ; ಗ್ರಾಮಸ್ಥರಿಂದ ಪ್ರತಿಭಟನೆ

ಸೇಡಂ ತಾಲ್ಲೂಕಿನ ಮಲ್ಕಾಪಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ...

Download Eedina App Android / iOS

X