ದಕ್ಷಿಣ ಕನ್ನಡ | ಸರ್ವ ಧರ್ಮೀಯರ ಸಂಭ್ರಮದ ಮಹಾಮಸ್ತಕಾಭಿಷೇಕ

Date:

Advertisements

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ಕ್ರಿಸ್ತಶಕ 1604ರಲ್ಲಿ ತಿಮ್ಮರಾಜ ಅಜಿಲರಿಂದ ಪ್ರತಿಷ್ಠಾಪಿಸಲ್ಪಟ್ಟ 35 ಅಡಿಗಳ ಎತ್ತರದ ಏಕಶಿಲಾ ಬಾಹುಬಲಿಯ ಮೂರ್ತಿಗೆ ಈ ಶತಮಾನದ ಮೂರನೇ ಮಹಾ ಮಸ್ತಕಾಭಿಷೇಕ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ.

ಜೈನ ಧರ್ಮೀಯರ ಈ ಆರಾಧ್ಯ ಗೊಮ್ಮಟ ಮೂರ್ತಿಗೆ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಈ ಮಹಾಮಜ್ಜನವು ಈ ಶತಮಾನದಲ್ಲಿ 2000ನೇ ವರ್ಷ ಹಾಗೂ 2012ರಲ್ಲಿ ನಡೆದು, ಈಗ 2024ರಲ್ಲಿ ನಡೆಯುತ್ತಿದೆ. ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ನಿತ್ಯವೂ ಸಾವಿರಾರು ಜಿನಭಕ್ತರು ಆಗಮಿಸುತ್ತಿದ್ದಾರೆ. ಜೈನ ಪರಂಪರೆಯ ಬಾಹುಬಲಿ ಮಹಾಮಜ್ಜನದ ಉತ್ಸವವನ್ನು ಕಣ್ತುತುಂಬಿಸಿಕೊಳ್ಳಲು ಊರಿನ ಹಾಗೂ ಪರ ಊರಿನ ಸರ್ವ ಸಮುದಾಯದವರೂ ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಮಹಾಮಸ್ತಾಕಾಭಿಷೇಕದ ಸಲುವಾಗಿ ಆಯೋಜಿಸಲಾಗಿರುವ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗೆ ಸಹಸ್ರಾರು ಜನ ಪ್ರತಿನಿತ್ಯ ಭೇಟಿ ಕೊಡುತ್ತಿದ್ದಾರೆ. ವಸ್ತು ಪ್ರದರ್ಶನದ ವ್ಯಾಪರ ಮಳಿಗೆಗಳಲ್ಲಿ ಎಲ್ಲ ಧರ್ಮೀಯರಿಗೂ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ವ್ಯಾಪಾರ ಮಳಿಗೆಗಳಿಗೆ ಸ್ಥಳೀಯ ಮುಸ್ಲಿಂ, ಕ್ರೈಸ್ತರು ಸೇರಿದಂತೆ ಭಾರೀ ಜನಸ್ತೋಮ ಆಗಮಿಸುತ್ತಿದೆ.

Advertisements

ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಮಾ.9ರಂದು ಲೋಕ ಅದಾಲತ್:‌ ನ್ಯಾ. ನೇರಳೆ ವೀರಭದ್ರಯ್ಯ ಭವಾನಿ

ಮಹಾಮಸ್ತಕಾಭಿಷೇಕದ ಸಲುವಾಗಿ ಸಾರ್ವಜನಿಕ ಅನ್ನದಾನದ ವ್ಯವಸ್ಥೆ ಮಾಡಲಾಗಿದ್ದು, ನಿತ್ಯವೂ ಸಾವಿರಾರು ಜನರು ಮಹಾಮಜ್ಜನದ ಅನ್ನದಾಸೋಹವನ್ನು ಸ್ವೀಕರಿಸುತ್ತಿದ್ದಾರೆ. ಕರಾವಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ಜಾತ್ರೆ ಉತ್ಸವದ ಸಂದರ್ಭದಲ್ಲಿ ಧರ್ಮದ ಹೆಸರಲ್ಲಿ ಧ್ವಜ ವಿವಾದ, ಸಂತೆ ವ್ಯಾಪಾರಕ್ಕೆ ತಡೆ ವಿವಾದ ಎಬ್ಬಿಸುವ ಸಂಘಟನೆಗಳು ಇಲ್ಲಿ ಮೂಗು ತೂರಿಸಲು ಮಹಾಮಸ್ತಕಾಭಿಷೇಕ ಆಯೋಜಕರು ಅವಾಕಾಶ ನೀಡಿಲ್ಲ. ಇದರಿಂದಾಗಿ ಉತ್ಸವಕ್ಕೆ ಎಲ್ಲ ಸಮುದಾಯದ, ವರ್ಗದ ಜನ ಸಂಭ್ರಮದಿಂದ ಬರುತಿದ್ದು, ಉತ್ಸವದ ಸವಿಯನ್ನು ಅನುಭವಿಸುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X