ಮೇ 10ರ ನಂತರ ಭಾರತೀಯ ಸೇನೆ ತಮ್ಮ ನಾಗರಿಕ ಉಡುಪುಗಳೊಂದಿಗೆ ಸಹ ಇರುವಂತಿಲ್ಲ: ಮಾಲ್ಡೀವ್ಸ್ ಅಧ್ಯಕ್ಷ

Date:

Advertisements

ಚೀನಾದೊಂದಿಗೆ ಉಚಿತ ಸೇನಾ ನೆರವು ಸ್ವೀಕರಿಸುವ ಒಪ್ಪಂದ ಮಾಡಿಕೊಂಡ ನಂತರ ಭಾರತೀಯ ಸೇನೆಗೆ ಮಾಲ್ಡೀವ್ಸ್ ಸಂಪೂರ್ಣ ತಡೆಯೊಡ್ಡಲು ನಿರ್ಧರಿಸಿದೆ.

ಮೇ 10ರ ನಂತರ ಸೇನಾ ಉಡುಪು ಮಾತ್ರವಲ್ಲ ನಾಗರಿಕ ಉಡುಪುಗಳಲ್ಲೂ ನಮ್ಮ ದ್ವೀಪಕ್ಕೆ ಕಾಲಿಡುವಂತಿಲ್ಲ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ತಿಳಿಸಿದ್ದಾರೆ.

ಭಾರತೀಯರ ಅಧಿಕಾರಿಗಳ ತಂಡ ಮಾಲ್ಡೀವ್ಸ್ ನ ಮೂರು ವಾಯುಪಡೆಯ ವಿಭಾಗದಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಮೊಹಮ್ಮದ್ ಮೊಯಿಝು ಈ ಹೇಳಿಕೆ ನೀಡಿದ್ದಾರೆ. ಮಾರ್ಚ್‌ 10ರೊಳಗೆ ಎರಡೂ ರಾಷ್ಟ್ರಗಳು ತಮ್ಮ ಸೇನಾ ಸಿಬ್ಬಂದಿಯನ್ನು ವಾಪಸ್‌ ಕರೆಸಿಕೊಳ್ಳಬೇಕು ಗಡುವಿನ ಒಪ್ಪಂದವಿದೆ.

Advertisements

ಸಮಾರಂಭವೊಂದರಲ್ಲಿ ಮಾತನಾಡಿದ ಮೊಯಿಝು, ಕೆಲವರು ಭಾರತೀಯ ಪಡೆಗಳನ್ನು ಮಾಲ್ಡೀವ್ಸ್‌ನಿಂದ ಉಚ್ಚಾಟಿಸಿರುವುದಕ್ಕೆ ಸರ್ಕಾರದ ಯಶಸ್ಸು ಎಂದು ಸುಳ್ಳುಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ತಿಳಿಸಿದರು.

“ಭಾರತೀಯ ಪಡೆ ನಿರ್ಗಮಿಸುತ್ತಿಲ್ಲ, ಅವರು ತಮ್ಮ ಸೇನಾ ಉಡುಪುಗಳೊಂದಿಗೆ ಬದಲಿಸಿ ವಾಪಸಾಗುತ್ತಾರೆ. ನಮ್ಮ ಹೃದಯದೊಳಗೆ  ಅನುಮಾನಗಳನ್ನು ತುಂಬಿಕೊಳ್ಳುವ ಹಾಗೂ ಸುಳ್ಳುಗಳ ನ್ನು ಹಂಚಿಕೊಳ್ಳುವ ಆಲೋಚನೆಗಳಲ್ಲಿ ತೊಡಗಬಾರದು” ಎಂದು ಮೊಯಿಝು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳು ಸೃಷ್ಟಿಸಿ, ಬೆಂಕಿ ಹಚ್ಚಿ, ಭಯ ಬಿತ್ತುವವರು ಯಾರು?

“ಸೇನಾ ವಸ್ತ್ರ ಹಾಗೂ ನಾಗರಿಕ ಉಡುಪುಗಳಲ್ಲೂ ಭಾರತೀಯ ಪಡೆಗಳು ಮೇ 10 ರ ನಂತರ ಬರುವಂತಿಲ್ಲ. ಭಾರತೀಯ ಸೇನೆ ತಮ್ಮ ಸಾಮಾನ್ಯ ಬಟ್ಟೆಯನ್ನು ಧರಿಸಿ ಈ ದೇಶದಲ್ಲಿ ಉಳಿದುಕೊಳ್ಳುವಂತಿಲ್ಲ. ನಾನು ವಿಶ್ವಾಸದೊಂದಿಗೆ ಹೇಳುತ್ತಿದ್ದೇನೆ” ಎಂದು ಮಾಲ್ಡೀವ್ಸ್ ಅಧ್ಯಕ್ಷರು ಹೇಳಿದರು.

“ನಾವು ಇದನ್ನು ಸಾಧಿಸುತ್ತೇವೆಂದು ನನಗೆ ಆತ್ಮವಿಶ್ವಾಸವಿದೆ. ಕೆಲವೊಂದು ನಿಯಮಾವಳಿಗಳ ಕಾರಣದಿಂದ ಈ ಯೋಜನೆ ಜಾರಿಗೊಳಿಸಲು ತಡವಾಗಲಿದೆ” ಎಂದು ಮೊಹಮ್ಮದ್ ಮುಯಿಝು ತಿಳಿಸಿದರು.

ಜನವರಿಯಲ್ಲಿ ಭಾರತದ ಪ್ರಧಾನಿ ಲಕ್ಷದ್ವೀಪಕ್ಕೆ ಭೇಟಿ ಕೊಟ್ಟ ನಂತರ ಎರಡೂ ರಾಷ್ಟ್ರಗಳಲ್ಲಿ ಉಂಟಾದ ರಾಜತಾಂತ್ರಿಕ ವಿವಾದಗಳ ನಂತರ ಮಾಲ್ಡೀವ್ಸ್‌ ಅಧ್ಯಕ್ಷರ ಹೇಳಿಕೆ ಹೊರಬಿದ್ದಿದೆ.

ಕಳೆದ ಕೆಲವು ವರ್ಷಗಳಿಂದ ಎರಡು ಹೆಲಿಕಾಪ್ಟರ್ ಹಾಗೂ ಡ್ರೋನರ್‌ ವಾಯುಪಡೆ ಬಳಸಿಕೊಂಡು ಜನರಿಗೆ ಮಾನವೀಯ ಹಾಗೂ ವೈದ್ಯಕೀಯ ಸ್ಥಳಾಂತರಿಸುವಿಕೆಯ ಸೇವೆ ಒದಗಿಸಲು ಭಾರತೀಯ ಮೂರು ವಿಭಾಗಗಳ 88 ಸೇನಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದೆ.

ಫೆ.2 ರಂದು ದೆಹಲಿಯಲ್ಲಿ ನಡೆದ ಎರಡೂ ದೇಶಗಳ ಉನ್ನತ ಮಟ್ಟದ ಸಭೆಯ ನಂತರ ಉಭಯ ದೇಶಗಳ ಸೇನಾ ಪಡೆ ಮೇ 10ರೊಳಗೆ ವಾಪಸ್‌ ಆಗಲಿವೆ. ಮೊದಲ ಹಂತವು ಮಾ.10ರೊಳಗೆ ಪೂರ್ಣಗೊಳ್ಳಬೇಕಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಅಧಿಕಾರ ಸ್ವೀಕರಿಸಿದ ಮೊಯಿಝು ಭಾರತದ ಪಡೆಗಳನ್ನು ತಮ್ಮ ದ್ವೀಪ ರಾಷ್ಟ್ರದಿಂದ ವಾಪಸ್‌ ಕಳಿಸುವುದಾಗಿ ಜನತೆಗೆ ವಾಗ್ದಾನ ನೀಡಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದ ‘ಅಕ್ಕರೆಯ ನ್ಯಾಯಾಧೀಶ’ ಫ್ರಾಂಕ್ ಕ್ಯಾಪ್ರಿಯೊ ನಿಧನ

ರೋಡ್ ಐಲ್ಯಾಂಡ್‌ನ ನಿವೃತ್ತ ಮುನಿಸಿಪಲ್ ನ್ಯಾಯಾಧೀಶರಾಗಿದ್ದ, ಸಾಮಾಜಿಕ ಜಾಲತಾಣಗಳಲ್ಲಿ 'ಅಕ್ಕರೆಯ ನ್ಯಾಯಾಧೀಶ'...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X