ಇತ್ತಿಚೀನ ದಿನಗಳಲ್ಲಿ ಬೆಂಗಳೂರಿನ ‘ಮೆಟ್ರೋ’ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಇದೀಗ, ಗುರುವಾರ ಮಧ್ಯಾಹ್ನ 2.10ರ ಸುಮಾರಿಗೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂದೆ ವ್ಯಕ್ತಿಯೋರ್ವ ಹಾರಿದ ಘಟನೆ ನಡೆದಿದ್ದು, ಪರಿಣಾಮ ಈ ಮಾರ್ಗ (ನೇರಳೆ) ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.
“ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಮಾರ್ಚ್ 21ರಂದು ಮಧ್ಯಾಹ್ನ 2.10ಕ್ಕೆ ನಿಲ್ದಾಣಕ್ಕೆ ಟ್ರೈನ್ ಬರುವಾಗ ಹಳಿಗೆ ಒರ್ವ ವ್ಯಕ್ತಿ ಜಿಗಿದಿದ್ದಾರೆ. ಪ್ರಸ್ತುತ ರೈಲುಗಳು ಮಾಗಡಿ ರಸ್ತೆಯಿಂದ ವೈಟ್ಫೀಲ್ಡ್ ಫೀಲ್ಡ್ ನಡುವೆ ಮಾತ್ರ ಓಡಾಡುತ್ತಿವೆ. ಮಾಗಡಿ ರಸ್ತೆಯಿಂದ ಚಲ್ಲಘಟ್ಟಕ್ಕೆ ಯಾವುದೇ ಸೇವೆಗಳಿಲ್ಲ” ಎಂದು ನಮ್ಮ ಮೆಟ್ರೋ ಹೇಳಿದೆ.
ಸದ್ಯ ಈ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕಾರಣಕ್ಕೆ ಕಳೆದ 15 ನಿಮಿಷದಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೂಡಲೇ ಸಿಬ್ಬಂದಿ ಮೆಟ್ರೋದಿಂದ ಎಲ್ಲ ಪ್ರಯಾಣಿಕರನ್ನು ಇಳಿಸಿದ್ದಾರೆ.
ಸದ್ಯ ನೇರಳೆ ಮಾರ್ಗದಲ್ಲಿ ವೈಟ್ಫೀಲ್ಡ್ನಿಂದ ಮಾಗಡಿ ರಸ್ತೆ ನಿಲ್ದಾಣ ಹೊಸಹಳ್ಳಿವರೆಗೆ ಮಾತ್ರ ರೈಲು ಕಾರ್ಯಾಚರಣೆ ನಡೆಸುತ್ತಿದೆ. ಚಲಘಟ್ಟದಿಂದ ಮಾಗಡಿ ರಸ್ತೆವರೆಗಿನ ರೈಲು ಸಂಚಾರ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | 85 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರಿಗೆ ಅಂಚೆ ಮತದಾನಕ್ಕೆ ಅವಕಾಶ
ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಎಕ್ಸ್ನಲ್ಲಿ ಅಧಿಕೃತ ಮಾಹಿತಿ ನೀಡಿದೆ.
This is to inform that one person has jumped in front of the train at Attiguppe station at the 2.10 pm . Presently trains are running only between Magadi road to Whitefield Feild and no services between magadi road to Challaghatta . fKI
— ನಮ್ಮ ಮೆಟ್ರೋ (@OfficialBMRCL) March 21, 2024
ಸ್ಥಳಕ್ಕೆ ವಿಜಯನಗರ ಪೊಲೀಸರು ಹಾಗೂ ಬಿಎಂಆರ್ಸಿಎಲ್ನ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.