ವಿಜಯಪುರ | ಗಬಸಾವಳಗಿ, ಬಿಸನಾಳ ಅನಿರ್ದಿಷ್ಟಾವಧಿ ಉಪವಾಸ ಅಂತ್ಯ

Date:

Advertisements

ಗಬಸಾವಳಗಿ ಮತ್ತು ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲೂಕಿನಲ್ಲಿಯೇ ಉಳಿಸಿ ಎಂಬ ಬೇಡಿಕೆಯೊಂದಿಗೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಮಂಗಳವಾರ (ಮಾ.26) ಅಂತ್ಯವಾಗಿದೆ. ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಶಾಸಕ ಅಶೋಕ್‌ ಮನಗೋಳಿ ಉಪವಾಸ ಕೈಬಿಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಉಪವಾಸ ನಿರತ ನಾಯಕ ಶಾಂತಗೌಡ ಅ. ಬಿರಾದಾರ ಮಾತನಾಡಿ, ನಮ್ಮ ಸ್ಥಳೀಯ ಶಾಸಕರ ಮೇಲೆ ನಂಬಿಕೆ ಇದೆ. ಯಾಕಂದ್ರೆ ದಿ. ಮಾಜಿ ಸಚಿವ ಎಂ.ಸಿ. ಮನಗೂಳಿಯವರನ್ನು ನೆನೆದು ಯಾವ ರೀತಿ ಎಂ.ಸಿ ಮನಗೂಳಿಯವರು ನಮ್ಮ ಕ್ಷೇತ್ರಕ್ಕೆ ಸಮಗ್ರ ನೀರಾವರಿ ಸಲುವಾಗಿ ಕಾಲಿಗೆ ಪಾದರಕ್ಷೆ ಇಲ್ದೆ ಹೋರಾಡಿ, ನೀರಾವರಿ ಮಾಡಿದರೋ ಅದೇ ರೀತಿ ಅವರ ಪುತ್ರ ಎ.ಎಂ. ಮನಗೂಳಿ ಶಾಸಕರು ಕೂಡ ಅಭಿವೃದ್ಧಿಯ ಹಾದಿಯಲ್ಲಿದ್ದಾರೆ ಎಂದರು.

ಅವರ ಮೇಲೆ ನಂಬಿಕೆ ಇಟ್ಟು, ಇಂದಿನಿಂದ ಅದೇ ಭರವಸೆಯಲ್ಲಿ ನಾನೂ ಕೂಡ ನ್ಯಾಯ ಸಿಗುವವರೆಗೆ ಕಾಲಿಗೆ ಪಾದರಕ್ಷೆ ಇಲ್ದೆ ಇರುತ್ತೇನೆ. ಯಾವ ರೀತಿ ದೇವೇಗೌಡರು ಗುತ್ತಿಬಸವೇಶ್ವರ ಏತನೀರಾವರಿಗೆ ಚಾಲನೆ ನೀಡಿ ಮನಗೂಳಿ ಮಾವನವರಿಗೆ ಪಾದರಕ್ಷೆ ಹಾಕಿಸಿದರೋ, ಅದೇ ರೀತಿ ನನಗೆ ಶಾಸಕರು ನ್ಯಾಯ ಕೊಡಿಸಿ ಪಾದರಕ್ಷೆ ಹಾಕಿಸಬೇಕು ಅಲ್ಲಿಯವರೆಗೆ ಪಾದರಕ್ಷೆ ತೊಡುವುದಿಲ್ಲ ಎಂದರು.

Advertisements

ಅದೇ ರೀತಿ ಬಂಗಾರೆಪ್ಪಗೌಡ ಬಾ ಬಿರಾದಾರ ಅವರು ಕೂಡ ಪಾದರಕ್ಷೆ ಬಿಡುವುದಾಗಿ ಹೇಳಿದರು. ಶಾಸಕರು ಭರವಸೆಯನ್ನು ಸ್ವೀಕರಿಸಿ ಉಪವಾಸ ನಿರತರಿಗೆ ಎಳನೀರು ಕುಡಿಸಿ ಸತ್ಯಾಗ್ರಹವನ್ನು ಅಂತ್ಯಗೊಳಿಸುವಲ್ಲಿ ಯಶ್ವಿಯಾದರು.

ಈ ಸಂದರ್ಭದಲ್ಲಿ ಗಂಗಪ್ಪಗೌಡ ದಾ. ಬಿರಾದಾರ, ಸಾಹೇಬಗೌಡ ಅ. ಬಿರಾದಾರ, ಅಪ್ಪಾಸಾಹೇಬಗೌಡ ಅ. ಬಿರಾದಾರ, ವೇದಿಕೆ ಅದ್ಯಕ್ಷ ಬಾಬಾಗೌಡ ಕಾ. ಬಿರಾದಾರ, ಪ್ರಭುಗೌಡ ಬಿರಾದಾರ, ಚಂದ್ರಶೇಖರ ಎಮ್. ದೇವರೆಡ್ಡಿ, ಬಸನಗೌಡ ಶಾಂ.ಬಿರಾದಾರ, ಮಲ್ಲಿಕಾರ್ಜುನ ಜಿ.ಹಿರೇಮಠ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X