ತುಮಕೂರು | ವೃದ್ಧಾಪ್ಯ ವೇತನ ಮಾಡಿಸಿಕೊಡುವುದಾಗಿ ನಂಬಿಸಿ ವಂಚನೆ ಆರೋಪ: ಗ್ರಾಮ ಸಹಾಯಕನ ವಜಾಕ್ಕೆ ಒತ್ತಾಯ

Date:

Advertisements

ವೃದ್ಧಾಪ್ಯ ವೇತನ ಮಾಡಿಸಿಕೊಡುವುದಾಗಿ ನಂಬಿಸಿ ವಯೋವೃದ್ಧೆಯ ಬಳಿ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ನಾಡಕಚೇರಿಯ ಗ್ರಾಮ ಸಹಾಯಕ 200 ರೂಪಾಯಿ ಲಂಚ ಪಡೆದಿರುವ ಘಟನೆ ವರದಿಯಾಗಿದೆ.

ತುಮಕೂರಿನ ತುರುವೇಕೆರೆ ತಾಲೂಕಿನ ತುಯಲಹಳ್ಳಿ ಗ್ರಾಮದ ದಲಿತ ಸಮುದಾಯದ 70 ವರ್ಷದ ವಯೋವೃದ್ಧೆ ನರಸಮ್ಮ ಎಂಬವರಿಂದ ಗ್ರಾಮ ಸಹಾಯಕ ಆರ್.ರಂಗಸ್ವಾಮಿ ಎಂಬಾತ ಲಂಚ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ಅಲ್ಲದೆ, ಗ್ರಾಮ ಸಹಾಯಕ ಆರ್. ರಂಗಸ್ವಾಮಿ ವಿರುದ್ಧ ವಿದ್ಯಾರ್ಥಿಗಳಿಂದ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರಗಳನ್ನು ಮಾಡಿಸಿಕೊಡುವುದಾಗಿ ಸಾವಿರಾರು ರೂಪಾಯಿ ಲಂಚ ಪಡೆದಿರುವ ಆರೋಪವೂ ಕೇಳಿಬಂದಿದೆ.  

Advertisements

ಇದನ್ನು ಓದಿದ್ದೀರಾ?  ಉಡುಪಿ | ಬೀದಿನಾಯಿಗೆ ಅನ್ನ ಹಾಕಿದ್ದಕ್ಕೆ ದಲಿತ ಮಹಿಳೆ ಮೇಲೆ ಹಲ್ಲೆ; ದಸಂಸ ಖಂಡನೆ

ಮೂರು ವರ್ಷದ ಹಿಂದೆ ತುಯಲಹಳ್ಳಿ ಗ್ರಾಮದ ದಲಿತ ಸಮುದಾಯದ ನಿವಾಸಿ ನರಸಮ್ಮ ಕೋಂ ಲೇಟ್ ರಂಗಯ್ಯ ಎಂಬುವವರಿಗೆ ವೃದ್ಧಾಪ್ಯ ವೇತನ ಮಾಡಿಸಿಕೊಡುವುದಾಗಿ ನಂಬಿಸಿ ಮಾಯಸಂದ್ರ ನಾಡಕಚೇರಿಯ ತುಯಲಹಳ್ಳಿ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುವ ಗ್ರಾಮ ಸಹಾಯಕ ಆರ್.ರಂಗಸ್ವಾಮಿ ಎಂಬಾತ 1500 ರೂ.ಗೆ ಬೇಡಿಕೆ ಇಟ್ಟು ಮುಂಗಡವಾಗಿ 200 ರೂ.ಗೆ ಪಡೆದಿದ್ದಾನೆ. ಆದರೆ, ಈವರೆಗೆ ವೃದ್ಧಾಪ್ಯದ ಪಿಂಚಣಿ ಬರುವಂತೆ ಮಾಡಿಸಿಲ್ಲ ಎಂದು ಸಂತ್ರಸ್ಥೆ ಆರೋಪಿಸಿದ್ದಾರೆ.

ಈ ಬಗ್ಗೆ ಆರ್.ರಂಗಸ್ವಾಮಿಯನ್ನು ವಿಚಾರಿಸಿದರೆ ದಾಖಲಾತಿಗಳನ್ನು ಯಾವುದೋ ಜಾಗದಲ್ಲಿಟ್ಟು ಮರೆತಿದ್ದೇನೆ. ಬೇರೆ ಕೆಲಸ ಇತ್ತು. ಕಚೇರಿ ಹೋದಾಗ ನೆನಪಾಗಿಲ್ಲ, ಈಗ, ನಾಳೆ ಮಾಡಿಸಿಕೊಡುತ್ತೇನೆ ಎಂಬಿತ್ಯಾದಿ ಆರಿಕೆಯ ಉತ್ತರಗಳನ್ನು ನೀಡುತ್ತಾ ಬಂದಿದ್ದಾನೆ ಎಂದು ವೃದ್ಧೆ ಆರೋಪಿಸಿದ್ದಾರೆ.

ಇದನ್ನು ಓದಿದ್ದೀರಾ?  ಜಾತಿ ದೌರ್ಜನ್ಯ | ದಲಿತ ಮಹಿಳೆಯರಿಗೆ ತೆಂಗಿನ ಚಿಪ್ಪಿನಲ್ಲಿ ಚಹಾ ಕೊಟ್ಟ ಸವರ್ಣೀಯರು

“ನನಗೆ ಈವರೆಗೆ ಹಣ ಬಂದಿಲ್ಲ. ಒಪ್ಪತ್ತಿನ ಊಟಕ್ಕೆ ಕೂಲಿ ಮಾಡಿಕೊಂಡು ತಿನ್ನುವಂತಾಗಿದೆ. ನನ್ನ ಕೂಲಿ ಮಾಡಲು ಶಕ್ತಿ ಇಲ್ಲದಿದ್ದರೂ ಅನಿವಾರ್ಯವಾಗಿದ್ದು, ಪಿಂಚಣಿ ಹಣ ಬಂದರೆ ಜೀವನ ಹೇಗೋ ಸಾಗುತ್ತದೆ ಎಂದು ನಂಬಿ ಹಣ ನೀಡಿದ್ದೆ. ವೃದ್ಧಾಪ್ಯ ವೇತನದ ಅಧಿಕೃತ ಪತ್ರವನ್ನು ಕೈಗೆ ಕೊಟ್ಟ ನಂತರ ಬಾಕಿ ಹಣ ಕೊಡುವುದಾಗಿ ಹೇಳಿದರೂ ನನಗೆ ಮಾಡಿಸಿಲ್ಲ” ಎಂದು ದೂರಿದ್ದಾರೆ.

“ತುಯಲಹಳ್ಳಿ ವೃತ್ತದ ವ್ಯಾಪ್ತಿಯ ಅನೇಕರಿಗೆ ವೃದ್ಧಾಪ್ಯ ವೇತನ, ವಿಧವಾ ವೇತನಗಳನ್ನು ಮಾಡಿಸಿಕೊಡಲು ರಂಗಸ್ವಾಮಿ ಹಣ ಪಡೆದಿದ್ದು, ಕೆಲವರಿಗೆ ಮಾಡಿಸಿಕೊಟ್ಟಿದ್ದು, ಬಹುತೇಕರಿಗೆ ಸತಾಯಿಸುತ್ತಿದ್ದಾನೆ. ನನಗೆ ನ್ಯಾಯ ಕೊಡಿಸಿ, ಹಣ ಬರುವಂತೆ ಮಾಡಿಸಿಕೊಡಿ” ಎಂದು ಸಂತ್ರಸ್ಥೆ ನರಸಮ್ಮ ಅಳಲು ತೋಡಿಕೊಂಡಿದ್ದಾರೆ.

ಪ್ರಕರಣ ಕುರಿತು ಅನೇಕರಿಗೆ ಲಂಚ ಪಡೆದುಕೊಂಡು ವಂಚನೆ ಎಸಗುತ್ತಿರುವ ಕಂದಾಯ ಇಲಾಖೆಯ ನೌಕರ ಆರೋಪಿ ರಂಗಸ್ವಾಮಿ ವಿರುದ್ಧ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರರು ಕ್ರಮ ಜರುಗಿಸಿ, ನೌಕರಿಯಿಂದ ವಜಾಗೊಳಿಸಬೇಕು, ನೊಂದವರಿಗೆ ನ್ಯಾಯ ಕೊಡಿಸಬೇಕೆಂದು ತುಮಕೂರು ಜಿಲ್ಲಾ ಘಟಕದ ದಲಿತ ಮುಖಂಡರು ಒತ್ತಾಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X